•  
  •  
  •  
  •  
Index   ವಚನ - 1    Search  
 
ಪಿಂಡಸ್ಥಲ - ದೇವರು
ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನೆನೆಯೊಳಗಣ ಪರಿಮಳದಂತಿದ್ದಿತ್ತು, ಕೂಡಲಸಂಗಮದೇವಾ, ಕನ್ನೆಯ ಸ್ನೇಹದಂತಿದ್ದಿತ್ತು.
Transliteration Udakadoḷage bayciṭṭa baykeya kiccinantiddittu, sasiyoḷagaṇa rasada ruciyantiddittu, neneyoḷagaṇa parimaḷadantiddittu, kūḍalasaṅgamadēvā, kanneya snēhadantiddittu.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Video
English Translation Like the flames of desires concealed in the mind, Like the taste of fruit juice hidden in the tender plant, Like the fragrance embedded in the bud, Like the love latent in the heart of a maiden, You are in this World, O Lord Kūḍala Saṅgama!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 It's like the secret fire Hidden in water; Like the flavour of the sap In the tender plant; Like to the perfume Within the bud; Like a maiden's love, O Lord Kūḍala Saṅgama! Translated by: L M A Menezes, S M Angadi
Hindi Translation जलगत गुप्त अनल सदृश शस्यागत रस-रुचि सदृश कलिकागत परिमल सदृश कूडलसंगमदेव की स्थिति कन्यागत स्नेह सदृश है ॥ Translated by: Banakara K Gowdappa
Telugu Translation అంబు గర్భమందడచు దౌహృదాగ్ని వోలె ఓషధీవరులోని రసరుచి వోలె మొగ్గలంగల పరిమళము వోలె కూడల సంగమదేవుడు కన్య స్నేహమువలె నెలొకొనియుండె! Translated by: Dr. Badala Ramaiah
Tamil Translation நீரினுள் மறைந்திலங்கும் அழலனையதாம், இளங்கன்றின் சாற்றின் சுவையனையதாம், முகையினுள்ளே நறுமணமனையதாம், கூடலசங்கமதேவனே, பெதும்பையின் காதலனையதாம். Translated by: Smt. Kalyani Venkataraman, Chennai
Marathi Translation पाण्यात पावक, जैसा तो अव्यक्त रस अंकुरात, तैशापरी अव्यक्त परिमळ, पुष्पाच्या कळीत वात्सल्य ते कन्येत, दडलेले कुडलसंगमदेवा! तैसे तू अव्यक्त दडले हृद्यात, ठाव तुझा अर्थ - ज्याप्रमाणे सागरात सुप्त स्वरुपात दडलेला वडवानल, (अग्नी) अंकुरात त्याची रस व रुची, पुष्पकळीत परिमळ, आणि दुधात दडलेल्या सायीची रुची (स्वाद) किंवा कन्येत दडलेले वात्सल्य त्याप्रमाणे हे कूडलसंगमदेवा! (परमेश्‍वरा) तुझे अस्तित्व शरणांच्या हृदयात एकरुप आहे. ​​महात्मा बसवेश्‍वरांनी सामान्यांना सहजरित्या कळावे म्हणून सोप्या व प्रासादिक भाषेत वरील निसर्गाची उदाहरणे देऊन परमेश्‍वराचा ठाव व स्वरुपाविषयी अनुभवलेले ज्ञान आपल्या वचनाद्वारे व्यक्त केले आहे. Translated by Rajendra Jirobe, Published by V B Patil, Hirabaug, Chembur, Mumbai, 1983 उदकामध्ये दडलेल्या अग्नीच्या ज्वालाप्रमाणे, रोपात दडलेल्या रसाच्या रुचीप्रमाणे, कळीमध्ये दडलेल्या परिमळाप्रमाणे, कूडलसंगमदेवाचे स्वरुप कन्येत दडलेल्या मातृ स्नेहाप्रमाणे आहे. Translated by Shalini Sreeshaila Doddamani
Urdu Translation ترا وجو د ہے پا نی میں جیسے خفتہ شرر ترا وجود ہےجیسےحسین پودوں سے نکلنےوالے پھلوں میں چھپی ہوئی لذت کہ جیسےغنچۂ نومیں چھپی ہوئی خوشبو تراوجود ہے یوں دیوا کوڈلا سنگم کہ جیسےپھول سی کم عمرلڑکیوں کا پیار Translated by: Hameed Almas
ಶಬ್ದಾರ್ಥಗಳು ಕನ್ನೆ = ಅವಿವಾಹಿತ ತರುಣಿ; ಕಿಚ್ಚು = ಬೆಂಕಿ; ನೆನೆ = ಹೂವಿನ ಮೊಗ್ಗು; ಬಯ್ಚಿಟ್ಟ = ಬಚ್ಚಿಟ್ಟ;
ಕನ್ನಡ ವ್ಯಾಖ್ಯಾನ

ವಿಷಯ: ದೇವರ ನಿಲವು

ದೇವರ ಸ್ವರೂಪವನ್ನು ಬಹು ಸುಂದರವಾಗಿ ಬಸವಣ್ಣನವರು ವಿವರಿಸುತ್ತಾರೆ. ಅದಕ್ಕೆ ಅವರು ಬಳಸಿಕೊಂಡಿರುವ ನಿದರ್ಶನಗಳ ವಿವರಣೆ ಈ ರೀತಿ ಇದೆ. ಒಲೆಯೊಳಗಿರುವ ಬೆಂಕಿಯನ್ನು ಕಾಣುವಂತೆ ನೀರಿನಲ್ಲಿರುವ ಬೆಂಕಿಯನ್ನು ಕಾಣಲಾಗುವುದಿಲ್ಲ. ಏಕೆಂದರೆ ಅದು ಚಕ್ಷುಂದ್ರಿಯಕ್ಕೆ (ಕಣ್ಣಿಗೆ) ಅಗೋಚರ. ವ್ಯಕ್ತರೂಪದಲ್ಲಿ ತೋರಿಬರುವ ಒಲೆಯ ಬೆಂಕಿಯೇ ಅವ್ಯಕ್ತರೂಪವಾಗಿ ನೀರಿನೊಳಗೆ ಅಡಗಿ ಕುಳಿತಿರುವುದೇ ಇದಕ್ಕೆ ಕಾರಣ. ಹೀಗಿರುವಾಗ ಅದರ ಅನುಭವ ಕೇವಲ ಸ್ಪರ್ಶದಿಂದ ಆಗಲು ಸಾಧ್ಯ. ‘ಸ್ನಾನಕ್ಕೆ ನೀರು ಕಾದಿದೆಯೇನು ನೋಡು ಮಗು’ ಎಂದು ತಂದೆ ಕೇಳಿದಾಗ, ಮಗು ಪಾತ್ರೆಯ ನೀರಿನಲ್ಲಿ ಬಹು ಜಾಗರೂಕತೆಯಿಂದ ಕೈಯನ್ನು ಅದ್ದಿ ನೀರು ಕಾದಿದೆಯೋ ಇಲ್ಲವೋ ಎಂಬುದನ್ನು ತಂದೆಗೆ ಹೇಳುತ್ತದೆ. ಇಲ್ಲಿ ಮಗು ಕೈಯಿಂದ ನೀರನ್ನು ಸ್ಪರ್ಶಿಸುವುದರ ಮೂಲಕ ನೀರು ಬಿಸಿಯಾಗಿದೆಯೇ ಇಲ್ಲವೇ ಎಂಬುದನ್ನು ಗ್ರಹಿಸುತ್ತದೆ. ಹೀಗೆ ನೀರಿನೊಳಗಿರುವ ಬೆಂಕಿಯು ಸ್ಪರ್ಶೇಂದ್ರಿಯ ಗೋಚರ. ಇಲ್ಲಿ ಕೆಲವರು ‘ಉದಕದೊಳಗೆ ಬಯ್ಚಿಟ್ಟ ಬಯಕೆಯ ಕಿಚ್ಚು’ ಎಂದರೆ ಸಮುದ್ರದ ತಳಭಾಗದಲ್ಲಿ ಸುಪ್ತವಾಗಿರುವ ‘ಬಾಡಬಾನಲ’ವೆಂಬ ಅಗ್ನಿಯೆಂದು ಹೇಳುತ್ತಾರೆ. ಆದರೆ ಬಸವಣ್ಣನವವರ ಈ ನುಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದು ‘ಬಾಡಬಾನಲ’ವೆಂಬ ಸಮುದ್ರದ ತಳಭಾಗದಲ್ಲಿರುವ ಅಗ್ನಿಯನ್ನಲ್ಲದೆ ಮೇಲೆ ಹೇಳಿರುವಂತೆ ನೀರಿನೊಳಗಿರುವ ಸಾಮಾನ್ಯ ಅಗ್ನಿಯನ್ನೇ ಕುರಿತು ಹೇಳಲಾಗಿದೆ ಎನ್ನುವುದು ಕಾಣಬರದಿರದು. ಏಕೆಂದರೆ ಇಲ್ಲಿ ‘ಕಿಚ್ಚು’ ಎಂಬ ಪದಕ್ಕೆ ಎರಡು ವಿಶೇಷಣಗಳಿವೆ. ೧. ಬಯ್ಚಿಟ್ಟ ಮತ್ತು ೨. ಬಯ್ಕೆಯ., ಈ ವಿಶೇಷಗಳು ಬಿಸಿನೀರಿನೊಳಗಿರುವ ಸಾಧಾರಣ ಅಗ್ನಿಗೇ ಅನ್ವಯಿಸುತ್ತವೆ. ಏಕೆಂದರೆ ನೀರನ್ನು ಕಾಯಿಸುತ್ತಿರುವಾಗ ಒಲೆಯ ಬೆಂಕಿಯೇ ನೀರಿನ ಕಣಗಳಲ್ಲಿ ಅಡಗಿ ಕುಳಿತುಕೊಳ್ಳುತ್ತದೆ (ಬೈತಿಟ್ಟುಕೊಳ್ಳುತ್ತದೆ). ಹೀಗೆ ನೀರಿನೊಳಗೆ ಅಡಗಿರುವ ಬೆಂಕಿಯು ನಾವಾಗಿಯೇ ಬಚ್ಚಿಟ್ಟಿದ್ದು. ಆದ್ದರಿಂದಲೇ ಅದು ಬಯ್ಚಿಟ್ಟ ಕಿಚ್ಚು. ನೀರನ್ನು ನಾವು ಹದವರಿತು ಬಿಸಿಮಾಡಿ ಬಳಸಿಕೊಳ್ಳುತ್ತೇವೆ. ಹೀಗೆ ಹದವರಿತು ಬಿಸಿಯಾದ ನೀರಿನೊಳಗಿರುವ ಬೆಂಕಿಯು ಮೇಲೆ ಹೇಳಿರುವಂತೆ ಹೇಗೆ ಬಯ್ಚಿಟ್ಟದ್ದೋ ಅಂತೆಯೇ ಬಯಕೆಯ ಕಿಚ್ಚೂ ಹೌದು. ನಾವು ಬಯಸಿದ ಮಟ್ಟದ ಕಿಚ್ಚಾದ್ದರಿಂದ. ಹೀಗೆ ಈ ವಿಶೇಷಣಗಳ ಸಾರ್ಥಕ್ಯವನ್ನು ನಾವು ಕಾಣುತ್ತೇವೆ. ‘ಬಾಡಬಾನಲ’ವೆಂಬ ಅಗ್ನಿಯೆಂದಿಟ್ಟುಕೊಂಡರೆ ಈ ಸಾರ್ಥಕ್ಯ ತೋರಿಬರುವುದಿಲ್ಲ. ಏಕೆಂದರೆ ಅದು ಸಮುದ್ರದ ತಳದಲ್ಲಿ ಗೋಪ್ಯವಾಗಿರುವುದರಿಂದ ಬಯ್ಚಿಟ್ಟ ಕಿಚ್ಚು ಎಂದೆನಿಸಿದರೂ ‘ಬಯ್ಕೆಯ ಕಿಚ್ಚು’ಆಗಲಾರದು. ನಾವು ಬಯಸುವುದಾದರೂ ನಮಗೆ ಬೇಕೆಂದು ತೋರುವ ವಸ್ತುವನ್ನೇ ತಾನೇ? ಇದೂ ಅಲ್ಲದೆ ಬಸವಣ್ಣನವರು ಇಲ್ಲಿ ಕೊಟ್ಟಿರುವ ಉಪಮೆಗಳಲ್ಲಿ ಬರುವ ‘ರಸದ ರುಚಿ’, ನನೆಯ ಪರಿಮಳ, ‘ಕನ್ಯೆಯ ಸ್ನೇಹ’ಇವೆಲ್ಲವೂ ಎರಡು ರೀತಿಯ ಸ್ಥಿತಿ ಅಥವಾ ಅವಸ್ಥೆಗಳನ್ನು (stage) ಹೊಂದಿವೆ. ಒಂದು ಸೂಕ್ಷ್ಮ ಅಥವಾ ಅವ್ಯಕ್ತ, ಮತ್ತೊಂದು ಸ್ಥೂಲ ಅಥವಾ ವ್ಯಕ್ತ. ಈ ದೃಷ್ಠಿಯಿಂದ ಇವುಗಳ ಸಾಲಿನಲ್ಲಿ ‘ಬಾಡಬಾನಲ’ವೆಂಬ ಅಗ್ನಿಯನ್ನು ಇಟ್ಟು ನೋಡಿದರೆ ಆ ದ್ವಿವಿಧ ಸ್ಥಿತಿಗಳು ಕಾಣುವುದಿಲ್ಲ. ಏಕೆಂದರೆ ಆ ‘ಬಾಡಬಾನಲ’ವು ಸೂಕ್ಷ್ಮವಾಗಿ ಅವ್ಯಕ್ತವಾಗಿ ಇರಬಹುದು ನಿಜ; ಆದರೆ ಅದು ಎಂದೆಂದಿಗೂ ಸ್ಥೂಲರೂಪದಲ್ಲಿ ಪ್ರಕಟವಾಗುವುದಿಲ್ಲ. ನೇರವಾಗಿ ನಮ್ಮ ಅನುಭವಕ್ಕೆ ಬರುವುದೂ ಇಲ್ಲ. ಇದೂ ಅಲ್ಲದೆ ‘ನುಡಿದರೆ ಮುತ್ತಿನಹಾರದಂತಿರಬೇಕು’ ಇತ್ಯಾದಿಯಾಗಿ ನುಡಿದ ಬಸವಣ್ಣನವರು ನುಡಿಜಾಣರು. ಅಂತಹವರು ಸಮುದ್ರದ ತಳಭಾಗದಲ್ಲಿರಬಹುದಾದ ಬಾಡಬಾನಲವನ್ನೇ ಕುರಿತು ಹೇಳಬೇಕಾಗಿದ್ದರೆ ‘ಉದಕದೊಳಗೆ’ ಎನ್ನುವ ಬದಲು ‘ಸಮುದ್ರದೊಳಗೆ’ ಅಥವಾ ‘ವಾರಧಿಯೊಳಗೆ’ ಎಂದೆನ್ನುತ್ತಿರಲಿಲ್ಲವೆ? ಸಂಸ್ಕೃತದಲ್ಲಿ ‘ಉದಕ’ ಎಂದರೆ ‘ನೀರು’ ಎಂದಷ್ಟೇ ಅರ್ಥ. ‘ಸಮುದ್ರದ ನೀರು’ ಎಂದೇನೂ ಅಲ್ಲ. ಅದನ್ನೇ ಗೌಣಾರ್ಥವೆಂದು (Secondary meaning) ಭಾವಿಸುವುದಾದರೆ ಇಲ್ಲಿ ಮುಖ್ಯಾರ್ಥಕ್ಕೆ (Primary meaning) ಬಾಧವೇ ಇಲ್ಲ. ಮುಖ್ಯಾರ್ಥಕ್ಕೆ ಬಾಧ ಉಂಟಾದಾಗಲೇ ತಾನೇ ಗೌಣಾರ್ಥ? ಇಷ್ಟೆಲ್ಲಾ ವಿಚಾರ ಮಾಡಿದಾಗ ‘ಉದಕದೊಳಗೆ ಬಯ್ಚಿಟ್ಟ ಬಯ್ಯೆಯ ಕಿಚ್ಚೆಂದರೆ ನೀರಿನೊಳಗಿರುವ ಸಾಮಾನ್ಯ ಅಗ್ನಿಯೆ ಎಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಹೀಗೆ ನೀರಿನೊಳಗಿರುವ ಕಿಚ್ಚು ಸೂಕ್ಷ್ಮ ರೂಪದಲ್ಲಿದ್ದು ಒಂದು ದೃಷ್ಠಿಯಿಂದ (ಕಣ್ಣಿಗೆ ಕಾಣದಿರುವುದರಿಂದ) ಅವ್ಯಕ್ತ, ಮತ್ತೊಂದು ದೃಷ್ಠಿಯಿಂದ (ಸ್ಪರ್ಶಗೋಚರವಾದುದರಿಂದ) ವ್ಯಕ್ತ. ಸಸಿಯು ಭೂಮಿಯಲ್ಲಿರುವ ಸಾರವತ್ತಾದ ಭಾರವನ್ನು ಹೀರಿ ರಸವತ್ತಾದ ಫಲದ ಮೂಲಕ ಅದನ್ನು ನೀಡುತ್ತದೆ. ಆ ಫಲದಲ್ಲಿರುವ ರಸದ ಸವಿಯನ್ನು ಕಣ್ಣಿನಿಂದಾಗಲೀ, ಸ್ಪರ್ಶದಿಂದಾಗಲೀ ಅನುಭವಿಸಲು ಸಾಧ್ಯವಿಲ್ಲ. ರಸನೇಂದ್ರಿಯದಿಂದಲೇ (ನಾಲಿಗೆ ಅದನ್ನು ಸವಿಯಲು ಸಾಧ್ಯ). ಸಸಿಯು ಫಲವನ್ನು ಕೊಡುವುದಕ್ಕೆ ಮುನ್ನ ಅದರ ರಸವೆಲ್ಲವೂ ಸಸಿಯಲ್ಲಿಯೇ ಇರುತ್ತದೆ. ಅಂತೆಯೇ ಫಲದ ರಸದ ರುಚಿಯೂ ಕೂಡ ಸಸಿಯ ರಸದಲ್ಲಿ ಅವ್ಯಕ್ತ ರೂಪದಲ್ಲಿರುತ್ತದೆ. ಇನ್ನು ಹೂವಿನ ಪರಿಮಳವೂ ಅದೇ ರೀತಿಯೇ. ಹೂವು ಅರಳಿ ಸುಗಂಧ ಸೂಸುವ ಮುನ್ನ ಮೊಗ್ಗಾಗಿದ್ದಾಗ ಆ ಪರಿಮಳವೆಲ್ಲವೂ ಆ ಮೊಗ್ಗಿನಲ್ಲಿಯೇ ಸೂಕ್ಷ್ಮ ರೂಪದಲ್ಲಿರುತ್ತದೆ. ಅದೇ ಮೊಗ್ಗು ಅರಳಿ ಹೂವಾದಾಗ ಪರಿಮಳವು ಹೊರಹೊಮ್ಮುತ್ತದೆ. ಈ ಪರಿಮಳವನ್ನು ನಾಸಿಕದಿಂದಲೇ (ಮೂಗು) ಗ್ರಹಿಸಲು ಸಾಧ್ಯ. ಯುವತಿಯ ಯೌವನ ಸಂಬಂಧಿ ಆಸೆ ಆಕಾಂಕ್ಷೆಗಳು ಅವಳ ಬಾಲ್ಯಾವಸ್ಥೆಯಲ್ಲಿಯೇ ಸುಪ್ತವಾಗಿದ್ದು ಪ್ರಾಪ್ತವಯಸ್ಕಳಾದ ಮೇಲೆಯೇ ಅವು ಪ್ರಕಟಗೊಳ್ಳುತ್ತವೆ. ಈ ಮೇಲಿನ ನಾಲ್ಕು ನಿದರ್ಶನಗಳಿಂದ ದೇವರ ನಿಲುವನ್ನು ಸ್ಪಷ್ಟ ಪಡಿಸಲು ಯತ್ನಿಸಿದ್ದಾರೆ ಬಸವಣ್ಣನವರು. ಅದನ್ನು ಪ್ರತ್ಯೇಕ ಪದಗಳಲ್ಲಿ ಅವರೇನೂ ವಾಚ್ಯವಾಗಿ ಹೇಳಿಲ್ಲ. ಹೇಳಬೇಕಾದುದೆಲ್ಲವೂ ಈ ನಿದರ್ಶನಗಳಲ್ಲಿಯೇ ಇಂಗಿತಗೊಂಡಿದೆ. ನಮ್ಮ ವೇದೋಪನಿಷತ್ತುಗಳು ಸಾರುವಂತೆ ದೇವರು ಸರ್ವವ್ಯಾಪ್ತಿ (Ominipresent). ಬಿಸಿನೀರಿನಲ್ಲಿ ಬೆಂಕಿಯು, ಸಸಿಯಲ್ಲಿ ರಸದ ರುಚಿಯು, ಮೊಗ್ಗಿನಲ್ಲಿ ಪರಿಮಳವು ಮತ್ತು ಕನ್ಯೆಯಲ್ಲಿ ಯೌವನ ಗುಣಗಳು ಹೇಗೆ ಅವ್ಯಕ್ತವಾಗಿರುವವೋ ಹಾಗೆಯೇ ಈ ವಿಶ್ವದಲ್ಲಿ ದೇವರು ಅವ್ಯಕ್ತನಾಗಿದ್ದಾನೆ. ಅವನು ಇಂದ್ರಿಯಾತೀತನೂ ಹೌದು. ಅಂದರೆ ಅವನು ಪ್ರತ್ಯಕ್ಷ ಗೋಚರನಲ್ಲ. ಹೀಗೆ ಇಂದ್ರಿಯಗಳಿಗೆ ಗೋಚರನಲ್ಲವೆಂದ ಮಾತ್ರಕ್ಕೆ ಗಗನ ಕುಸುಮ (ಆಕಾಶಪುಷ್ಪ), ಶಶವಿಷಾಣ (ಮೊಲದ ಕೊಂಬು) ಗಳಂತೆ ದೇವರು ಇಲ್ಲವೇ ಇಲ್ಲವೆಂದು ವಾದಿಸುವುದು ಸರಿಯಲ್ಲ. ಏಕೆಂದರೆ ಹಾಗೆ ವಾದಿಸುವುದು ಕಣ್ಣಿಲ್ಲದ ಕುರುಡ ತನಗೆ ಬೆಳಕು ಕಾಣಿಸುತ್ತಿಲ್ಲವೆಂದು (ಬೆಳಕಿನ ಅನುಭವವಾಗುತ್ತಿಲ್ಲವೆಂದು) ಬೆಳಕೇ ಇಲ್ಲವೆಂದು ಹೇಳುವ ಮೂರ್ಖತನವಾದೀತು. ಈ ಕಾರಣದಿಂದ ಬೆಂಕಿಯು ಹೇಗೆ ಸ್ಪರ್ಶೇಂದ್ರಿಯ ಗೋಚರವೋ, ರಸದ ರುಚಿಯು ಹೇಗೆ ಜಿಹ್ವೇಂದ್ರಿಯ ಗೋಚರವೋ, ಹೂವಿನ ಪರಿಮಳವು ಹೇಗೆ ಘ್ರಾಣೇಂದ್ರಿಯ ಗೋಚರವೋ ಕನ್ಯೆಯ ಸ್ನೇಹವು ಯೌವನದಲ್ಲಿ ತರುಣನ ಅನುಭವಕ್ಕೆ ಹೇಗೆ ಗೋಚರವೋ, ಅದೇ ರೀತಿ ದೇವರು ಅನುಭಾವ ಗೋಚರನು. ಕುರುಡನಿಗೆ ಬೆಳಕಿನ ಅನುಭವವಾಗದಿರುವುದು ಅವನ ಇಂದ್ರಿಯ ದೋಷ (ಕುರುಡುತನ) ವನ್ನು ಎತ್ತಿತೋರಿಸುವುದೇ ವಿನಾ ಬೆಳಕಿನ ಅಭಾವವನ್ನಲ್ಲ. ಹೀಗೆ ಆಯಾಯ ಇಂದ್ರಿಯಗಳು ಇಲ್ಲದೇ ಹೋದರೆ ಅವಕ್ಕೆ ಸಂಬಂಧಿಸಿದ ವಿಷಯಗಳು ಇದ್ದರೂ ಅವುಗಳ ಅರಿವು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ದೇವರು ವಿಶ್ವವ್ಯಾಪಿಯಾದುದರಿಂದ ಸರ್ವತ್ರ ಇದ್ದರೂ ಅನುಭಾವವಿಲ್ಲದಿದ್ದರೆ ಅವನ ಅರಿವು ಆಗಲಾರದು. ಬಿಸಿನೀರಿನಲ್ಲಿ ಅವ್ಯಕ್ತವಾಗಿ ಅಡಗಿ ಕುಳಿತಿರುವ ಬೆಂಕಿಯು ನೀರಿನ ಯಾವುದೋ ಒಂದು ಭಾಗದಲ್ಲಿರದೆ ಅದನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿರುತ್ತದೆ. ಅಂತೆಯೇ ಭಗವಂತನು ಸಂಪೂರ್ಣ ವಿಶ್ವವನ್ನೇ ವ್ಯಾಪಿಸಿಕೊಂಡಿರುವನು. ಆದ್ದರಿಂದಲೇ ದಾರ್ಶನಿಕರು ಅವನನ್ನು ವಿಶ್ವವ್ಯಾಪಿ, ಸರ್ವವ್ಯಾಪಿ (Ominipresent) ಇತ್ಯಾದಿ ಪದಗಳಿಂದ ಸಂಬೋಧಿಸಿರುವುದು.

- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

C-724 

  Wed 12 Mar 2025  

 ಪರಮಪೂಜ್ಯ ಸ್ವಾಮಿಜೀಯವರು ಈ ವಚನಕ್ಕೆ
ಅರ್ಥೈಸಿರುವುದು, ಬಸವಣ್ಣನವರ ಮೂಲಾರ್ಥದ
ಧ್ವನಿಯನ್ನು ಯಥಾವತ್ತಾಗಿ, ಜನ ಸಾಮಾನ್ಯರಿಗೂ
ಅರ್ಥವಾಗುವಂತೆ, ಇಲ್ಲಿ ವಿವರಿಸಿರುವುದು ಅವರ
ನಿಶಿತಮತಿಯನ್ನು ತೋರಿಸುತ್ತದೆ. ಉದಕದೊಳಗೆ ಬೈಚಿಟ್ಟ
ಬಯಕೆಯ ಕಿಚ್ಚು ಸ್ಪರ್ಶೇಂದ್ರಿಯ ಗೋಚರ ಎಂದು ಅರ್ಥೈಸಿರುವುದು ಸಹಜವಾಗಿದೆ, ಅರ್ಥಪೂರ್ಣವಾಗಿದೆ.
ಕನ್ಯೆಯ ಸ್ನೇಹ, ಹೂವಿನ ಪರಿಮಳಗಳು ಅತಿ ಕೋಮಲ ಭಾವಗಳು. ಇವುಗಳಿಗೆ ಸಮುದ್ರದ ತಳದ ಬಡಬಾಗ್ನಿಯನ್ನು
ಹೋಲಿಸುವುದು ವಿಡಂಬನೆ. ದೇವರು ಅನುಭಾವ ಗೋಚರನು ಎಂಬ ವ್ಯಾಖ್ಯಾನ ಅತ್ಯಂತ ಉಚಿತವಾಗಿದೆ.
ಈ ಬೆಳಕಿನ ಹಿನ್ನೆಲೆಯಲ್ಲಿ ಸ್ವಾಮಿಜೀಯವರ ಮರು
ವ್ಯಾಖ್ಯಾನದ ಸ್ವಾರಸ್ಯವನ್ನು ಸವಿಯುವ ಅವಕಾಶ ಈಗ
ನಮಗೆ ಬಂದೊದಗಿದೆ.
  H S Harishankar
Mysuru

C-719 

  Sat 08 Mar 2025  

 ಪೂಜ್ಯ ಗುರುಗಳಿಗೆ ನಮಸ್ಕರಿಸುತ್ತಾ..

ನಮ್ಮ ಬಸವಣ್ಣನವರ ವಚನಗಳನ್ನು ತಮಿಳು ಭಾಷೆಗೆ ಬ್ರಿಟಿಷರ ಕಾಲದಲ್ಲಿಯೇ ಅನುವಾದಗೊಂಡಿರುವುದು ನಮಗೆಲ್ಲಾ ಅತೀ ದೊಡ್ಡ
ಹೆಮ್ಮೆಯ ಸಂಗತಿ... ‌ಆದರೆ ಸೋಜಿಗದ ಸಂಗತಿ ಎಂದರೇ
ಆ ಹಸ್ತಪ್ರತಿ ಕನ್ನಡಿ ಗರಿಂದ ದೂರವಾಗಿ ಅದು ಪ್ಯಾರಿಸ್ ನಗರದ ರಾಷ್ಟ್ರೀಯ ಗ್ರಂಥಾಲಯದಲ್ಲಿ ಸೇರಿಕೊಂಡಿದ್ದು ಆಶ್ಚರ್ಯಕರವಾದ ಸಂಗತಿಯೇ.. ಆದರೆ ಲಾಟರಿ ರೂಪದಲ್ಲಿ ಎತ್ತಿದ ಚೀಟಿಯಿಂದ ಆ ಹಸ್ತಪ್ರತಿ ನಮ್ಮ ಪೂಜ್ಯ ಗುರುಗಳವರ ಕೈಗೆ ಸಿಕ್ಕಿದ್ದು ಅದನ್ನು ಪೂಜ್ಯರು ತಮಿಳು ಭಾಷೆಯನ್ನೇ ಕಲಿತು ಮತ್ತೊಮ್ಮೆ ಪ್ಯಾರಿಸ್ ನಗರಕ್ಕೆ ಹೋಗಿ ಆ ಹಸ್ತಪ್ರತಿಯನ್ನು ತಮ್ಮ ಕೈನಿಂದಲೇ ಪ್ರತಿ ಮಾಡಿಕೊಂಡು ಬಂದಿರುವುದು ನಿಜಕ್ಕೂ
ಆಶ್ಚರ್ಯಕರವಾದ ಸಂಗತಿಯೇ ನಮಗೆ..

ವಚನ ಸಾಹಿತ್ಯದ ಸಂಗ್ರಹವನ್ನು ಸಂಶೋಧನೆ ಮಾಡುವುದು ಅವುಗಳನ್ನು ಅನುವಾದ ಮಾಡುವುದು ನಮ್ಮ ಗುರುಗಳ ಕೊಡುಗೆ ಈ ಸಮಾಜಕ್ಕೆ..
ಇಂಥ ಕಾರ್ಯಗಳು
ಇತಿಹಾಸವನ್ನೇ ಸೃಷ್ಟಿ ಮಾಡುತ್ತವೆ..
ವಚನ ಸಾಹಿತ್ಯ ಕ್ಷೇತ್ರಕ್ಕೆ ಈ ತಮಿಳು ಅನುವಾದ ಕೃತಿ ಆದಷ್ಟು ಬೇಗ ಪ್ರಕಟವಾಗಬೇಕೆಂದು ಪೂಜ್ಯರಲ್ಲಿ ಬೇಡಿಕೊಳ್ಳುತ್ತೇನೆ..
ನಮ್ಮಗುರುಗಳು ನಮ್ಮ ಹೆಮ್ಮೆ..

ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್..
  ಕೆ.ಜಿ.ಸರೋಜಾ ನಾಗರಾಜ್
??????????. ????????

C-684 

  Fri 07 Mar 2025  

 ಬಸವಣ್ಣನವರ ವಚನಗಳು ತಮಿಳು ಭಾಷೆಗೆ ಬ್ರಿಟಿಷರ ಕಾಲದಲ್ಲಿಯೇ ಅನುವಾದಗೊಂಡಿರುವುದು ಹೆಮ್ಮೆಯ ಸಂಗತಿ. ‌ಆದರೆ ಆ ಹಸ್ತಪ್ರತಿ ಕನ್ನಡ ನಾಡಿನಿಂದ ದೂರವಾಗಿ ಅದು ಹೇಗೋ ಪ್ಯಾರಿಸ್ ನಗರದ ರಾಷ್ಟ್ರೀಯ ಗ್ರಂಥಾಲಯ ಸೇರಿಕೊಂಡಿದೆ. ಆಶ್ಚರ್ಯಕರ ಸಂಗತಿ ಎಂದರೆ ಆ ಹಸ್ತಪ್ರತಿ ನಮ್ಮ ಪೂಜ್ಯ ಗುರುಗಳ ಕೈಗೆ ದೊರಕಿದ್ದು. ಪೂಜ್ಯರು ತಮಿಳು ಭಾಷೆಯನ್ನು ಕಲಿತು ಮತ್ತೊಮ್ಮೆ ಪ್ಯಾರಿಸ್ ನಗರಕ್ಕೆ ಹೋಗಿ ಹಸ್ತಪ್ರತಿಯನ್ನು ತಮ್ಮ ಕೈನಿಂದಲೇ ಪ್ರತಿ ಮಾಡಿಕೊಂಡು ಬಂದಿರುವುದು ನಿಜಕ್ಕೂ ಸೋಜಿಗದ ಸಂಗತಿ.

ವಚನ ಸಾಹಿತ್ಯ ಸಂಗ್ರಹ, ಸಂಶೋಧನೆ, ಅನುವಾದ ಮುಂತಾದ ಕ್ಷೇತ್ರಕಾರ್ಯಗಳ ಇತಿಹಾಸದಲ್ಲಿ ಇದು ಬಹು ಮುಖ್ಯವಾದ ಸಂಗತಿ. ಮತ್ತು
ವಚನ ಸಾಹಿತ್ಯ ಕ್ಷೇತ್ರಕ್ಕೆ ಪೂಜ್ಯರದು ಅನುಪಮ ಕೊಡುಗೆ.
ಇಂತಹ ಮಹತ್ವವನ್ನೊಳಗೊಂಡ ಈ ತಮಿಳು ಅನುವಾದ ಕೃತಿ ಆದಷ್ಟು ಬೇಗ ಪ್ರಕಟವಾಗಬೇಕೆಂದು ಪೂಜ್ಯರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ

- ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ
ದಾವಣಗೆರೆ
  ನಾಗರಾಜ ಸಿರಿಗೆರೆ
????????

C-683 

  Fri 07 Mar 2025  

 ಪೂಜ್ಯ ಗುರುಗಳವರ ಪಾದಗಳಿಗೆ ನಮಸ್ಕರಿಸುತ್ತಾ..

ದೇವರ ನಿಲವು..

ದೇವರ ಸ್ವರೂಪವನ್ನು ಬಹು ಸುಂದರವಾಗಿ ಬಸವಣ್ಣನವರು ವಿವರಿಸಿದ್ದಾರೆ..
ಅದಕ್ಕೆ ಅವರು ಬಳಸಿಕೊಂಡಿರುವ ನಿದರ್ಶನಗಳ ವಿವರಣೆಯನ್ನು ಪೂಜ್ಯರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ..

ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂದ್ದಿತ್ತು;
ಸಸಿಯೊಳಗಣ ರಸದ ರುಚಿಯಂತಿದ್ದಿತ್ತು;
ನನೆಯೊಳಗಣ ಪರಿಮಳದಂತಿದ್ದಿತ್ತು;
ಕೂಡಲ ಸಂಗಮದೇವಾ ನಿಮ್ಮ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು”

ನೀರೊಡಲ ಬೆಂಕಿ, ಚಂದ್ರನ ಬೆಳುದಿಂಗಳಿನ ರುಚಿ, ಮೊಗ್ಗೆಯೊಳಗಿನ ಪರಿಮಳ – ಇವು ಕಣ್ಣಿಗೆ ಕಾಣದಿದ್ದರೂ ಅಲ್ಲಿ ಇವೆ. ಈ ಮೂರು ಉಪಮೆಗಳು ಹೊರಗಿನ ವಸ್ತುಗಳನ್ನು ನಿರ್ದೇಶಿದರೆ ಕೊನೆಯದು ‘ಕನ್ನೆಯ ಸ್ನೇಹದಂತೆ’ – ಮಾನವೀಯ ಭಾವನೆಯ ಸೂಕ್ಷ್ಮತಂತಿಯಂತೆ ಮಿಡಿಯುತ್ತದೆ.. ದೇವರ ನಿಲವನ್ನರಿಯುವದೂ ಹೀಗೆ ಎಂಬ ಅರ್ಥವಂತಿಕೆಯನ್ನು ಈ ಉಪಮೆಗಳು ಪಡೆದಿವೆ. ಅಲ್ಲದೆ ಉದಕ-ಕಿಚ್ಚು, ಸಸಿ-ರಸದ ರುಚಿ, ನನೆ-ಪರಿಮಳ ಈ ಗುಣಸೂಚನೆ ಕನ್ನೆಯ ಸ್ನೇಹಕ್ಕೆ ಒಂದು ರೀತಿ ಪೋಷಕವಾಗಿ ಅದರ ಅರ್ಥಗೌರವವನ್ನು ಹೆಚ್ಚಿಸಿದೆ. ಭಾವಕ್ಕನುಗುಣವಾದ ಭಾಷೆಯಿಂದ ಈ ವಚನ ಕೂಡಿದೆ.
ಇಂಥ ವಚನದ ವಿವರಣೆಯನ್ನು ತಿಳಿಸಿಕೊಟ್ಟಂತ ಗುರುಗಳಿಗೆ ಧನ್ಯವಾದಗಳು..

ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
  ಕೆ.ಜಿ.ಸರೋಜಾ ನಾಗರಾಜ್
??????????. ????????

C-682 

  Fri 07 Mar 2025  

 Swamiji, I was thrilled to know of your journey to Paris library and lay your hands on the Tamil manuscript which incidentally the Vachana of
Basavanna in Tamil Language! Quite interesting to read it.
ನಮಸ್ಕಾರ 🙏🙏
  Dr H S Harishankar
Mysore

C-681 

  Fri 07 Mar 2025  

 7-3-2025

See the transcription given below the Kannada manuscript. This is a rare Tamil Mss transcribed by me during my visit to Paris National Library way back in the year 1985.

This seems to be the first Tamil translation made in the 18th century. I happened to discover it during my visit to the National Library in Paris after giving a lecture in the College de France, Paris.

I had some free time in the afternoon. Went to the National Library in Paris with the great French Indologist Prof. Pierre Filliozat who recently passed away. Went to the manuscript section and asked the curator to show me a manuscript. I did not have any specific requirement. I was just curious to see how the manuscripts are preserved in the national library. The curator gave me a register and asked me to select any manuscript. I turned the pages of the manuscript register. Like a parrot of a street astrologer which picks the cards of prophecy, I just pointed out at one manuscript not knowing what it is.

The lady who was in charge of the manuscript section went inside and within minutes, she brought me the manuscript I had picked in the register. Curiously, I turned leaves of the Pam leaf manuscript. It turned out to be a Tamil manuscript. With my scanty knowledge of Tamil alphabets, I went on reading the leaves. I noticed somewhere the word, Kudala Sangama Deva. But I was not sure whether I am reading it properly. I showed it to Prof. Pierre Filliozat. With his knowledge of Tamil alphabets, he endorsed “Yes, it looks like that!”

I had another invitation to give talks at different places in France. I went to France after six months. Meanwhile, I mastered to read and write Tamil alphabets. Went to the national library again. This time with the specific intention to read that manuscript. I ordered for it. The curator brought it within seconds.

With great curiosity, I turned the leaves of the manuscript. Lo! It happened to be the Tamil translation of the Vachanas of Basavanna. My joy knew no bounds. I extended my stay in Paris. Every morning I used to go and sit in the national library of Paris till evening. Using the lens to decifer the characters. I transcribed the entire manuscript in a week’s time.

I am happy to share with the readers this rare manuscript in the Paris National Library, transcribed by me 40 years ago. I will share the original manuscript after officially getting the permission from the National Library, Paris.

You can write your comments in the comments section provided at the bottom of this Vachana App.

Dr Shivamurthy Shivacharya Mahaswamiji, Sri Taralabalu Jagadguru Brihanmath, Sirigere
  Dr Shivamurthy Shivacharya Mahaswamiji
Sri Taralabalu Jagadguru Brihanmath, Sirigere

C-622 

  Sat 01 Mar 2025  

 GREAT JOB SWAMIJI
  DEVINDRA B RABAGOND
Kalaburagi ( Gulbarga)

C-534 

  Fri 27 Dec 2024  

 Marathi Translation:

पाण्यात पावक, जैसा तो अव्यक्त
रस अंकुरात, तैशापरी
अव्यक्त परिमळ, पुष्पाच्या कळीत
वात्सल्य ते कन्येत, दडलेले
कुडलसंगमदेवा! तैसे तू अव्यक्त
दडले हृद्यात, ठाव तुझा
  Sunil Hengani
Lathur, Mahashstra

C-530 

  Thu 26 Dec 2024  

 Nijavagalu bahala, tumba channagi vachana mathu videos vivarishiddare. Anya bhasegalige uttamvagi anuwadkood mobile nalli vivarishidare
Ananth dhayavadagalu.
Sharnusharnathi 🙏🙏🌹🌹🌹
  Channappa
BasavaKalyan, district Bidar

C-519 

  Mon 04 Mar 2024  

 Very very good
  M c gangadhar
Karnatak