Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:
English Translation 2If it's Thy will, O Lord,
A log may sprout !
If its Thy will, O Lord,
A barren cow gives milk !
If it's Thy will , O Lord,
Poison is turned to nectar !
If It's Thy will, O Lord,
All things obey one's call,
O Kūḍala Saṅgama Lord !
Translated by: L M A Menezes, S M Angadi
Hindi Translationतव कृपा हो, तो काठ पल्लवित होगा ।
तव कृपा हो, तो बाँझ दूध देगी ।
तव कृपा हो, तो विष अमृत होगा ।
तव कृपा हो, तो सकल पदार्थ सम्मुख होंगे कूडलसंगमदेव ॥
Translated by: Banakara K Gowdappa
Telugu Translationనీ వొలయగ కొఱడు కొనలిడునయ్యా,
నీవు మెచ్చ గొడ్డు పాలిడునయ్యా,
నీవు తలప విషమె అమృత మగునయ్యా;
నీవు కోర సకలపడి పదార్ధము
లెదుట నిల్చును కూడల సంగమదేవా!
Translated by: Dr. Badala Ramaiah
Tamil Translationநீ அருள்புரியின் கட்டை துளிர்க்கும் ஐயனே
நீ அருள்புரியின் மலட்டுப்பசு கறக்கும் ஐயனே,
நீ அருள்புரியின் நஞ்சு அமிழ்தமாம் ஐயனே,
நீ அருள்புரியின் அனைத்துப் பொருட்களும்
நல்லெதிர்மறைதனை யெய்தும் கூடல சங்கம் தேவனே.
Translated by: Smt. Kalyani Venkataraman, Chennai
Marathi Translationतुम्ही प्रसन्न झाला तर
लाकडाला पालवी फूटेल देवा.
तुम्ही प्रसन्न झाला तर
वांझ गायही दूध देईल देवा.
तुम्ही प्रसन्न झाला तर
विषसुध्दा अमृत होईल देवा.
तुम्ही प्रसन्न झाला तर सर्व
काही मिळेल कूडलसंगमदेवा.
Translated by Shalini Sreeshaila Doddamani
Urdu Translationجوہوتیراکرم تو خشک لکڑی سےحسیں کونپل نکل آئے
جوہوتیرا کرم توبانجھ گائےکےتھنوںمیںدودھ آجائے
جوہوتیراکرم توزہر کی تلخی میں بھی امرت کا لطف آئے
جوہوتیرا کرم اے کوڈلا سنگا توہرمقصود مِل جائے
Translated by: Hameed Almas
ಕನ್ನಡ ವ್ಯಾಖ್ಯಾನದೇವರೊಲಿದರೆ ಎಲ್ಲವೂ ಸಾಧ್ಯ
ಈ ವಚನದಲ್ಲಿ ಅಣ್ಣ ಬಸವಣ್ಣನವರು ದೇವರು ಸರ್ವಶಕ್ತನು, (Omnipo tent) ಅವನಿಗೆ, ಅಸಾಧ್ಯವಾದದು ಯಾವುದೂ ಇಲ್ಲ ಎಂಬುದನ್ನು ತಿಳಿಯ ಪಡಿಸಿದ್ದಾರೆ.
ಒಂದು ಒಣಗಿದ ಮರದ ಕೊರಡು ಚಿಗುರುವುದು ನೈಸರ್ಗಿಕ ದೃಷ್ಟಿಯಿಂದ ಅಸಾಧ್ಯ. ಆದರೆ ದೇವರು ಬಯಸಿದರೆ ಅಂತಹ ಕೊರಡು ಚಿಗುರ ಬಲ್ಲದು. ಬರಡಾದ (ಗೊಡ್ಡಾದ) ಹಸು ಹಾಲನ್ನು ಕೊಡಲು ಅಸಮರ್ಥವಾದರೂ ದೇವರು ಇಚ್ಛಿಸಿದರೆ ಹಾಲು ಕೊಡುವಂತಾಗುವುದು. ವಿಷವು ವ್ಯಕ್ತಿಯ ಮರಣಕ್ಕೆ ಕಾರಣವಾಗುವುದು ಸ್ವಾಭಾವಿಕ, ಆದರೆ ಅಂತಹ ವಿಷವೂ ದೇವರ ಕೃಪೆಯಿಂದ ಅಮೃತವಾಗಿ ಪರಿಣಮಿಸಿ ಆ ವ್ಯಕ್ತಿಯು ಚಿರಂತನವಾಗಿ ಬಾಳಲು ಸಾಧ್ಯ. ಆದ್ದರಿಂದ ದೇವರ ಒಲುಮೆ ಮುಖ್ಯವೇ ಹೊರತು ನಾವು ಬಯಸುವ ಅಥವಾ ಬಯಸದಿರುವ ವಸ್ತುಗಳಲ್ಲ. ನಾವು ಏನನ್ನಾದರೂ ಬಯಸುವುದು ತಾತ್ಕಾಲಿಕ ಸ್ಥಿತಿಗಳನ್ನು, ಸನ್ನಿವೇಶ ಪರಿಸರಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ. ಆಗಲೂ ನಮ್ಮ ಬೇಡಿಕೆಗಳು ಸರಿಯಾದವಿರುವುದಿಲ್ಲ. ಎಷ್ಟೋ ವೇಳೆ ನಮ್ಮ ಹಿತಕ್ಕೆ ಧಕ್ಕೆ ತರುವಂಥವೇ ಆಗಿರುತ್ತವೆ. ಉದಾಹರಣೆಗೆ ಒಬ್ಬ ಹಾಲು ಮಾರವ ಗವಳಿಗನಿರುತ್ತಾನೆ. ಅವನ ಮನೆಯಲ್ಲಿ ಹಸುವೇನೋ ಇದೆ. ಆದರೆ ಅದು ಬರಡು (ಗೊಡ್ಡು). ಆದ್ದರಿಂದ ಅವನು ದೇವರಲ್ಲಿ ಮೊರೆಯಿಡುತ್ತಾನೆ. ‘ನನ್ನ ಹಸು ಗರ್ಭಧರಿಸುವಂತೆ ಮಾಡು (ಗಬ್ಬಾಗುವಂತೆ ಮಾಡು)’ ಎಂದು. ಅವನ ಮೊರೆಯನ್ನು ಆಲಿಸಿದ ದೇವರ ಕೃಪೆಯಿಂದ ಹಸು ಗರ್ಭಧರಿಸಿತು; ಕರುವನ್ನೂ ಹಾಕಿತು. ಆದರೆ ಮುಂದೇನಾಯಿತು. ಗೊತ್ತೇ? ಕರು ಸತ್ತು ಹೊಯಿತು; ಹಸು ಹಾಲು ಕೊಡದಾಯಿತು. ಇದರಿಂದ ಲಾಭವೇನು? ಗವಳಿಗ ಕಣ್ಣೀರು ಸುರಿಸಲಾರಂಭಿಸಿದ ಅವನಿಗೆ ಬೇಕಾದ್ದು ಹಾಲು. ಹಸು ಗರ್ಭ ಧರಿಸುವುದಲ್ಲ, ಕರು ಹಾಕುವುದಲ್ಲ. ಹಸು ಗೊಡ್ಡಾಗಿದ್ದೇ ಹಾಲು ಕೊಟ್ಟರೂ ಸರಿ. ಹಸು ಗರ್ಭಧರಿಸಿದರೆ ಹಾಲು ಕೊಟ್ಟೇ ಕೊಡುವುದೆಂದು ಅವನ ಭಾವನೆ. ಆದರೆ ಅದು ಹೀಗಾಗುತ್ತದೆಯೆಂದು ಅವನು ಊಹಿಸಿರಲಿಲ್ಲ. ಹಾಗಾಗುವುದೆಂದು ಮೊದಲೇ ತಿಳಿದಿದ್ದರೆ ‘ಹಸುವಿನಿಂದ ನನಗೆ ಹಾಲು ದೊರಕುವಂತೆ ಮಾಡು' ಎಂದೇ ದೇವರನ್ನು ಪ್ರಾರ್ಥಿಸುತ್ತಿದ್ದ. ಆದ್ದರಿಂದಲೇ ಮೇಲೆ ಹೇಳಿರುವುದು; ಎಷ್ಟೋ ವೇಳೆ ನಮ್ಮ ಬೇಡಿಕೆಗಳು (ಪ್ರಾರ್ಥನೆಗಳು) ನಮ್ಮ ಹಿತಕ್ಕೆ ಅನುಗುಣವಾಗಿರುವುದಿಲ್ಲ ಎಂದು. ಮೇಲಿನ ಉದಾಹರಣೆಯನ್ನೇ ನೋಡಿದರೆ ಜೀವನದ ಅಂತಿಮ ಗುರಿಯನ್ನು ಮುಟ್ಟುವುದು ಹೇಗೆ ಎಂದು ಯೋಚಿಸಿ ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಾರ್ಥಿಸದೆ ತಾತ್ಕಾಲಿಕ ಸ್ಥಿತಿಗತಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಾವು ಪ್ರಾರ್ಥಿಸುವೆವು ಎಂಬುದನ್ನೂ ಮನಗಾಣಬಹುದು. ಅಂತಹ ಪ್ರಾರ್ಥನೆಗಳು ಕೆಲವು ವೇಳೆ ಹೀಗೆ ಸಹಕಾರಿಯಾಗಲಾರವೆಂಬುದನ್ನೂ ಮೇಲೆ ಕಾಣಬಹುದು. ಆದ್ದರಿಂದ ನಾವು ಬೇಕು-ಬೇಡಗಳ ಜವಾಬ್ದಾರಿಯನ್ನು ದೆೇವರ ಮೇಲೆಯೇ ಹೊರಿಸಿ. ಅವನ ಒಲುಮೆಯ ಕಡೆ ಮನ ಕೊಡುವುದು ಉತ್ತಮ. ತಾಯಿ, ಮಗುವಿನಿಂದ ಹೇಳಿಸಿಕೊಂಡೇ ಹಾಲು ಕೊಡುವುದಿಲ್ಲ. ಮಗುವಿನ ಸಂರಕ್ಷಣಾ ಭಾರವನ್ನು ಸಂಪೂರ್ಣ ಹೊತ್ತಿರುವವಳು ಮಗುವಿನ ಬೇಕು-ಬೇಡಗಳನ್ನು ಸಮಯಕ್ಕೆ ಸರಿಯಾಗಿ ನೋಡಿಕೊಳ್ಳುವಳು. ಆದ ಪ್ರಯುಕ್ತ ನಾವು ದೇವರನ್ನು ಒಲಿಸಿಕೊಳ್ಳುವತ್ತ ಮನ ಹರಿಸಬೇಕು. ಅವನಿಗೆ ನಮ್ಮನ್ನೇ ಸಮರ್ಪಿಸಿಕೊಳ್ಳಬೇಕು. ಆಗ ಸರ್ವ ದಯಾಪಾರಿಯಾದ, ಸರ್ವಶಕ್ತನಾದ ದೇವರು ನಾವು ಬಯಸದಿದ್ದರೂ ನಮಗೆ ಹಿತಕಾರಿಯಾದ, ಅವಶ್ಯಕವಾದ ವಸ್ತುಗಳನ್ನು ನಮ್ಮ ಮುಂದೆಯೇ ಬಂದು ನಿಲ್ಲುವಂತೆ ಮಾಡುವನು. ‘...... ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿರ್ಪುವು ಕೂಡಲಸಂಗಮದೇವಾ!'
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.