•  
  •  
  •  
  •  
Index   ವಚನ - 75    Search  
 
ಪಂಚಾಕ್ಷರಿಸ್ಥಲ - ಶಿವನಾಮ
ಕರಿಯಂಜುವುದಂಕುಶಕ್ಕಯ್ಯಾ; ಗಿರಿಯಂಜುವುದು ಕುಲಿಶಕ್ಕಯ್ಯಾ: ತಮಂಧವಂಜುವುದು ಜ್ಯೋತಿಗಯ್ಯಾ; ಕಾನನವಂಜುವುದು ಬೇಗೆಗಯ್ಯಾ; ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯಾ.
Transliteration Kariyan̄juvudaṅkuśakkayyā; giriyan̄juvudu kuliśakkayyā: Tamandhavan̄juvudu jyōtigayyā; kānanavan̄juvudu bēgegayyā; pan̄camahāpātakavan̄juvudu kūḍalasaṅgana nāmakkayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English Translation 2 The elephant fears the goad ; The mountain, the thunderbolt ; Darkness is afraid of light ; The forest fears the fire ; The five great sins fear, Lord, The name of Kūḍala Saṅgama. Translated by: L M A Menezes, S M Angadi
Hindi Translation करी डरता है अंकुश से, गिरि डरता है कुलिश से, तम डरता है ज्योति से, कानन डरता है दावानल से, पंचमहापातक डरते हैं, कूडलसंगमेश के नाम से ॥ Translated by: Banakara K Gowdappa
Telugu Translation కరి జంకునది అంకుశమునకయ్యా గిరి కృంగునది కులిశమునకయ్యా: తమస మింకునది జ్యోతికి నయ్యా వనము తగ్గునది కార్చిచ్చుకయ్యా: పంచమహాపాతకములు భయపడి పారునది శివా నీ నామస్మరణకయ్యా: Translated by: Dr. Badala Ramaiah
Tamil Translation யானை அஞ்சுவது துறட்டிக்கு ஐயனே, மலை அஞ்சுவது வச்சிரத்திற்கு ஐயனே, இருள் அஞ்சுவது விளக்கிற்கு ஐயனே, காடு அஞ்சுவது அழலிற்கு ஐயனே, ஐந்து தீவினைகள் அஞ்சுவது கூடல சங்கனின் திருப்பெயருக்கையனே. Translated by: Smt. Kalyani Venkataraman, Chennai
Marathi Translation हत्ती घाबरतो अंकुशाला ! पर्वत घाबरतो छन्नीला ! अंधकार घाबरतो ज्योतीला ! अरण्य घाबरते अग्नीला! पंचमहापातके घाबरती कूडलसंगमदेवाच्या नामाला. Translated by Shalini Sreeshaila Doddamani
ಶಬ್ದಾರ್ಥಗಳು ಅಂಕುಶ = ಆನೆಯನ್ನು ಪಳಗಿಸುವ ಕಬ್ಬಿಣದ ಸಾಧನ; ಅಂಜು = ಭಯಪಡುವುದು; ಕರಿ = ಆನೆ; ಕಾನನ = ಕಾಡು; ಕುಲಿಶ = ಇಂದ್ರನ ವಜ್ರಾಯುಧ; ತಮಂಧ = ಕತ್ತಲು; ಪಾತಕ = ಪಾಪ, ದೋಷ, ಪಾಪಿ;
ಕನ್ನಡ ವ್ಯಾಖ್ಯಾನ ಮೊಳದುದ್ದ ಅಂಕುಶ ಆನೆಯನ್ನೂ ಬಗ್ಗಿಸುವುದು, ಎಳೆಎಳೆಯಾದ ಸಿಡಿಲು ಆಕಾಶದೆತ್ತರದ ಪರ್ವತವನ್ನೂ ಪುಡಿಗುಟ್ಟುವುದು, ಕೈದೀವಿಗೆಯೊಂದು ಹತ್ತೂ ಕಡೆಗೆ ಆವರಿಸಿ ಲಗ್ಗೆ ಹತ್ತಿದ ಕತ್ತಲೆಯನ್ನೂ ಓಡಿಸುವುದು, ನವಿರಾದ ಬೆಂಕಿಯ ಜ್ವಾಲೆ ದಟ್ಟವಾದ ಕಾಡನ್ನೂ ಸುಟ್ಟು ಬೂದಿಮಾಡುವುದು. ಹೀಗೆ ಆನೆ ಮುಂತಾದ ದೊಡ್ಡ ದೊಡ್ಡ ವಸ್ತುಗಳು ಅಂಕುಶ ಮುಂತಾದ ಚಿಕ್ಕಪುಟ್ಟ ಸಾಧನಗಳಿಗೆ ಅಂಜುವಂತೆ, ಮಹಾಪಾತಕಗಳೂ ಶಿವನಾಮದೈದಕ್ಷರಕ್ಕೆ ಅಂಜುತ್ತವೆ.ನಮಶ್ಯಿವಾಯ ಎಂಬ ಮಹಾಮಂತ್ರದಲ್ಲಿರುವ ಒಂದೊಂದಕ್ಷರಕ್ಕೂ-ಪಾತಕವೇನು-ಮಹಾಪಾತಕವೂ ಅಂಜುತ್ತದೆಂಬುದು ಅಭಿಪ್ರಾಯ. ಅಂದರೆ ಅಶಿವವಾದುದನ್ನು ಧಿಃಕರಿಸಿ ಶಿವನಿಗೆ ಶರಣಾಗತನಾದವನೆಂದಿಗೂ ಪಾಪಬುದ್ದಿಯವನಾಗುವುದಿಲ್ಲ : ಅವನು ದಯಾಪರನಾದುದರಿಂದ ಕೊಲೆ ಮತ್ತು ಸುಲಿಗೆಯಲ್ಲಿ, ನಿಯತೇಂದ್ರಿಯನಾದುದರಿಂದ ಗುರುತಲ್ಪಗಮನ ಮುಂತಾದ ವಿಕೃತಕಾಮದಲ್ಲಿ, ಪ್ರಸಾದಜೀವಿಯಾದುದರಿಂದ ಸುರಾಪಾನ ಮತ್ತು ಮಾಂಸ ಭಕ್ಷಣೆ ಮುಂತಾದ ಅಪೇಯಪಾನ ಅಭಕ್ಷ್ಯಭಕ್ಷಣ ಮುಂತಾದ ಕಟುರುಚಿಯಲ್ಲಿ ಎಂದಿಗೂ ತೊಡಗನು, ಅದುದರಿಂದಲೇ ಬಸವಣ್ಣನವರು ಹೇಳಿರುವುದು-“ಪಂಚಮಹಾಪಾತಕವಂಜುವುದು ಕೂಡಲಸಂಗನ ನಾಮಕ್ಕಯ್ಯ” ಎಂದು. ಮನುಷ್ಯನು ಪಾಪಗಳನ್ನು ಮಾಡುವುದೇ ಕಾಮದಿಂದ ಕ್ರೋಧದಿಂದ ಮೋಹದಿಂದ ಅಹಂಕಾರದಿಂದ. ಅದರೆ ಶಿವಭಕ್ತನಿಗೆ-ಶಿವಪ್ರೇಮವಲ್ಲದೆ ಮತ್ತೊಂದು ಕಾಮವಿಲ್ಲವಾಗಿ, ಸತ್ಯಾಗ್ರಹವಲ್ಲದೆ ಮತ್ತೊಂದು ಕ್ರೋಧವಿಲ್ಲವಾಗಿ, ಶರಣಸಂಗಮೋಹವಲ್ಲದೆ ಮತ್ತೊಂದು ವ್ಯಾಮೋಹವಿಲ್ಲವಾಗಿ, ಶಿವದಾಸೋಹಂಭಾವವಲ್ಲದೆ ಮತ್ತೊಂದು ಅಹಂಕಾರವಿಲ್ಲವಾಗಿ-ಅವನಿಗೆ ಪಾಪ ಎದುರಾಗುವ ಅಥವಾ ಬೆಂಬೀಳುವ ಪ್ರಮೇಯವೇ ಇಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು