Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name - Vachana Dhare Vol -3 Singer : B.S.Mallikarjuna, Nanditha, Meghana Music : M.S. Maruthi Label : Ashwini audio
English Translation 2Whenever our own say so
Deem that to be
The auspicious time ;
Think the compatible signs are there,
And that the union is predestinate ;
That favourable are the moon and stars ;
And that
Today is better than tomorrow :
The purchase that accrues
To Lord Kūḍala Saṅgama worshippers
Is thine !
Translated by: L M A Menezes, S M Angadi
Hindi Translationआप्त जनों के पूछने पर कहो, शुभ लग्न है,
कहो, राशिकूट ऋणसंबंध प्रस्तुत है;
कहो, चंद्रबल, ताराबल प्रस्तुत है,
कहो, कल की अपेक्षा आज अच्छा है
कूडलसंगमदेव का पूजा फल तुम्हारा है ॥
Translated by: Banakara K Gowdappa
Tamil Translationஎம்மவர் குறிகேட்பின், மங்கலநேரமென்பீ ரையனே,
இராசிக் கூட்ட, கணஉறவு உண்டென உரைப்பீரையனே.
சந்திரபலன், தாராபலன் உண்டெனப் பகர்வீரையனே,
நாளையைவிட இன்றே நல்லநாளெனக் கூறுவீரையனே.
கூடல சங்கம தேவனை வணங்கிய பலன் உம்மதையனே.
Translated by: Smt. Kalyani Venkataraman, Chennai
Marathi Translationशरणांनी सांगितले तर तेच शुभलग्न समजावे.
हाच उत्तम मुहुर्त, हाच शुभ मुहुर्त सांगावे.
चंद्रबल आहे, ताराबल आहे म्हणूनी सांगावे
उद्यापेक्षा आजचा दिवसच चांगला सांगावे.
कूडलसंगमदेवाच्या पूजेचे फळ आपले आहे.
Translated by Shalini Sreeshaila Doddamani
Urdu Translationبزرگ جب کوئی خدمت تمھیں سُپرد کریں
یہ جان لوکہ بڑی شبھ گھڑی ہے پیشِ نظر
فلک کو،چاند کو، تاروں کومہرباں سمجھو
اوراپنےآپ کوفوراًہی وقفِ کارکرو
نہ ہوگا آج سے بہترکسی طرح فردا
تم اتنا جان کے پوجا کرو، جو روزانہ
ملیں گے تم کویقیناً عبادتوں کے پھل
ہمارےکوڈلا سنگا کی مہربانی سے
Translated by: Hameed Almas
ಕನ್ನಡ ವ್ಯಾಖ್ಯಾನಗುರುಗಳಲ್ಲಿಗೆ ಯಾರಾದರೊಬ್ಬರು ಬಂದು-ದೀಕ್ಷೆ ತೆಗೆದುಕೊಂಡು ಶಿವಪೂಜೆ ಮಾಡಬೇಕೆಂಬ ಹಂಬಲ ನನಗಾಗಿದೆ ಎಂದರೆ-ನೀನು ಕೇಳುವ ದೀಕ್ಷೆಗೆ ನೀನು ಬಂದಿರುವ ಈ ದಿನವೇ ನಾಳಿನ ದಿನಕ್ಕಿಂತ ಪ್ರಶಸ್ತವಾಗಿದೆ, ರಾಶಿಕೂಟಋಣಸಂಬಂಧ ಕೂಡಿಬಂದಿದೆ-ಎಂದು ಹೇಳಿ ಅಗಲೇ ಅವರಿಗೆ ದೀಕ್ಷೆಕೊಡಿರೆಂದು ಬಸವಣ್ಣನವರು ಆ ಗುರುವರ್ಗಕ್ಕೆ ವಿನಂತಿಸಿಕೊಳ್ಳುತ್ತಿರುವರು.
ಅಲ್ಲದೆ ಭಕ್ತರು ದೀಕ್ಷೆಗೊಂಡು ಮಾಡಿದ ಶಿವಪೂಜೆಯ ಫಲದಲ್ಲಿ ಬಹುಪಾಲು ನಿಮ್ಮದೇ ಆಗುವುದೆಂದೂ ಅವರನ್ನು ಸಂಭಾವಿಸುತ್ತಿರುವರು.ಮಾಡಿದವನಿಗಿಂತ ಮಾಡಿಸಿದವನು ಹೆಚ್ಚಾಗಿ ಅನುಭವಿಸುವನೆಂಬುದು ಹೊಸ ಮಾತೇನಲ್ಲ-ಇದನ್ನು ದಂಡನೀತಿಯಿಂದ ಚೆನ್ನಾಗಿ ಮನವರಿಕೆಮಾಡಿಕೊಳ್ಳಬಹುದಾಗಿದೆ.
ಶಿವ-ಜೀವರ ಮಿಲನರೂಪವಾದ ಇಂಥ ದೀಕ್ಷಾಮಂಗಳಕಾರ್ಯಕ್ಕೆ ಯಾವ ಕಾರಣದಿಂದಲಾಗಲಿ ಯಾರೂ ಅಡ್ಡಿಮಾಡಬಾರದೆಂಬಲ್ಲಿ-ಕಾಲ್ಪನಿಕವಾದ ಜ್ಯೋತಿಷ್ಯಕಾರಣಗಳಿಂದ ಅಡ್ಡಿಪಡಿಸುವುದಂತೂ ಸಲ್ಲದು ಎಂಬಂತೆ-ಬಸವಣ್ಣನವರು ಗುರುವರ್ಗದಿಂದ ಹೆಚ್ಚು ವೈಚಾರಿಕತೆಯನ್ನು ನಿರೀಕ್ಷಿಸುತ್ತಿರುವರು.
ಮತ್ತು ದೀಕ್ಷಾರ್ಥಿಯಾಗಿ ಬಂದವರು ಹುಟ್ಟಿನಿಂದ ಲಿಂಗಾಯಿತರೇ ಆಗಿರಬೇಕಾಗಿಲ್ಲವೆಂಬಂತೆ ಎಲ್ಲರನ್ನೂ “ಎಮ್ಮವರು” ಎಂದು ವ್ಯವಹರಿಸುವ ಬಸವಣ್ಣನವರ ಜಾತ್ಯತೀತ ನಿಲುವನ್ನು ಈ ವಚನದಲ್ಲಿ ಗುರುತಿಸಬಹುದಾಗಿದೆ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.