ಕಬ್ಬುನದ ಕೋಡಗವ ಪರುಷ ಮುಟ್ಟಲು,
ಹೊನ್ನಾದರೇನು ಮತ್ತೇನಾದರೇನು,
ತನ್ನ ಮುನ್ನಿನ ರೂಹ ಬಿಡದನ್ನಕ್ಕ?
ಕೂಡಲಸಂಗಮದೇವಾ,
ನಿಮ್ಮ ನಂಬಿಯೂ ನಂಬದ ಡಂಭಕರಿಗಯ್ಯಾ?
Transliteration Kūsuḷḷa sūḷe dhanadāsege otteya koṇḍare
kūsiṅgalla, bojagaṅgalla!
Kūsanom'me santaisuvaḷu; bojagananom'me nerevaḷu:
Dhanadāse biḍadu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If the philosopher's stone
Touches an iron ape,
What if it turns to gold
Or any other thing,
So long as its former form remains ?
O Kūḍala Saṅgama Lord,
What an impostor I-
Believing with little faith!
Translated by: L M A Menezes, S M Angadi
Hindi Translation लोहे का बंदर पारस स्पर्श से
स्वर्ण हो या और कुछ
जब तक उसका पूर्व रूप नहीं छूटता
कूडलसंगमदेव तुम पर अपूर्ण विश्वास रखनेवाले
दंभियों को ॥
Translated by: Banakara K Gowdappa
Telugu Translation ఇనుప కోతికి శ్చర్శవేది తగుల
బంగార మైననేమి? ఏమైననేమి
తన తొంటిరూపము విడనంతదాక ?
కూడల సంగమదేవయ్యా;
నిన్ను నమ్మి యూ నమ్మని డాంబికులకయ్యా!
Translated by: Dr. Badala Ramaiah
Tamil Translation இரும்புக் குரங்கைப் பரிசவேதி தீண்டின்
பொன்னாயினென்? மற்றென் னாயினென்?
தன் இயல்பான உருவினை விடாதவரை?
கூடல சங்கம தேவனே.
உம்மை நம்பியும் நம்பாத பகட்டினர்க்கு ஐயனே.
Translated by: Smt. Kalyani Venkataraman, Chennai
Marathi Translation
लोखंडाच्या माकडाला परीसस्पर्श झाला तर
तो सोने झाला काय ? आणखी काय झाला?
इष्टलिंग दीक्षा घेऊनही सदाचार न करणारा पाखंडीप्रमाणे आहे
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಕಬ್ಬುನ = ಕಬ್ಬಿಣ; ಕೋಡಗ = ಮಂಗ; ಡಂಭಕ = ; ಪರುಷ = ಪರುಷ ಮಣಿ; ರೂಹು = ರೂಪ;
ಕನ್ನಡ ವ್ಯಾಖ್ಯಾನ ಡಾಂಬಿಕನು ಲಿಂಗಧರಿಸಿದ ಮಾತ್ರದಿಂದ-ಸತ್ಪರಿಣಾಮವೇನೂ ಇಲ್ಲವೆಂದು ಮುಂದಿನ ವಚನಗಳಲ್ಲಿ ಕೆಲವು ನಿದರ್ಶನಗಳನ್ನು ಕೊಟ್ಟು ವಿವರಿಸಲಾಗಿದೆ :
ಸಗಣಿಯಿಂದ ಮಾಡಿದ ಬೆನಕ(ವಿನಾಯಕ)ನಿಗೆ ಸಂಪಿಗೆ ಹೂವಿಂದ ಪೂಜೆ ಮಾಡಿದರೆ ಅಲಂಕಾರವಾಗಿ ಕಾಣುವುದಾದರೂ-ಆ ಸಗಣಿಯ ದುರ್ನಾತ ತಪ್ಪಿದ್ದಲ್ಲ.
ಮತ್ತು ಹಸಿಯ ಮಣ್ಣಿನ ಗೊಂಬೆ (ಕ್ಷುದ್ರದೇವತೆ) ಯನ್ನು ಬೆಳಗಿ ಝಳಝಳ ಮಾಡುತ್ತೇನೆಂದು ಅಭಿಷೇಕಿಸಿ ತೊಳೆದರೆ-ಅದು ತೊಳೆದಷ್ಟೂ ಕೆಸರೇಳುವುದೇ ಹೊರತು ಹೊಳಪಾಗುವುದಿಲ್ಲ.
ಮತ್ತು ಕಬ್ಬಣದ ಕೋತಿ (ಪ್ರತಿಮೆ) ಯನ್ನು ಸ್ಪರ್ಶಮಣಿ ಸೋಕಿದರೆ-ಅದು ಚಿನ್ನದ ಕೋತಿಯಾದೀತೇ ಹೊರತು-ಅದು ತನ್ನ ಹಾಸ್ಯಾಸ್ಪದ ರೂಪವನ್ನು ಕಳೆದುಕೊಳ್ಳುವುದಿಲ್ಲ.
ಹಾಗೆಯೇ ಬೇರೆ ಧರ್ಮದಲ್ಲಿದ್ದ ದುಷ್ಟನೊಬ್ಬನು ಶಿವಮತಕ್ಕೆ ಮತಾಂತರಗೊಂಡರೆ-ಅವನು ಶೈವಮತದ ದುಷ್ಟನೆನಿಸುವನೇ ಹೊರತು-ಶಿಷ್ಟನೆನಿಸುವುದಿಲ್ಲ-ಅವನ ಮೂಲಧಾತುವೇ ಅದು.
ತನ್ನ ದುರ್ವಾಸನೆಯನ್ನೂ ದುರ್ಲಕ್ಷಣವನ್ನೂ ಬಂಡವಾಳವಿಲ್ಲದ ಬಡಾಯನ್ನೂ ನೀಗಿಕೊಂಡ ಹೊರತು ಯಾವನೂ ಕೇವಲ ಲಿಂಗಧಾರಣೆಯಿಂದ ಭಕ್ತನಾಗುವುದಿಲ್ಲವೆಂಬುದಭಿಪ್ರಾಯ.
*ವಿ.ಸೂ: ಒಂದು ಕೋಮಿನ ಸಂಖ್ಯಾಬಾಹುಳ್ಯವನ್ನು ಹೆಚ್ಚಿಸಲಿಕ್ಕಾಗಿ ಬಸವಣ್ಣನವರೆಂದಿಗೂ ಲಿಂಗ(ಧಾರಣ)ವನ್ನು ಬೀದಿಗಿಟ್ಟು ಮಾರಲಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು