Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album: Vachana Sudhamrutha Dhaare, Singer: Kasturi Shankar, Music Director: Kumar Eshwar, Music Label : Lahari Music
English Translation 2Can the pan taste the pounded rice,
The monkey enjoy the swinging couch ?
Can a crow perched on Indra's bower
Become a cuckoo? Answer me !
Can a crane sitting on a water's edge
Become a royal swan, O Lord
Kūḍala Saṅgama ?
Translated by: L M A Menezes, S M Angadi
Hindi Translationतवा क्या जानता है, चिउडे का स्वाद?
बंदर क्या जानता है, झूले का सुख?
कहो, काक नंदनवन में रहे,
तो वह कोयल बन सकता है?
तटाक तट पर बक पक्षी रहे,
तो वह कल – हँस बन सकता है? कूडलसंगमदेव॥
Translated by: Banakara K Gowdappa
Marathi Translationतव्याला कशी समजणार पोह्याची चव?
माकडाला कसे समजणार बाजल्याचे सुख?
नंदनवनात कावळा राहिला तर कोकीळा बनेल?
सरोवरा काठी बगळा राहिला तर राजहंस होईल का?
कूडलसंगमदेवाच्या
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನಸೆಳೆಮಂಚಕ್ಕೆ ಸುಖವನ್ನು ಕೊಡಬಲ್ಲ ಜೀಕಿದೆ-ಆದರೆ ಅಲ್ಲೊಂದು ಕೋತಿ ಕುಳಿತರೆ ಅದಕ್ಕೆ ಅನುಭವಿಸಬಲ್ಲ ಅನುರಕ್ತಿಯಿರುವುದಿಲ್ಲ-ಇದು ಆಧೇಯದ ದೌರ್ಬಲ್ಯದ ಮಾತಾಯಿತು.
ಇನ್ನು ಆಧಾರದ ದೌರ್ಬಲ್ಯದ ಮಾತು : ಅವಲಕ್ಕಿಗೆ ಸವಿಯನ್ನು ಕೊಡಬಲ್ಲ ಸತ್ವವಿದೆ-ಆದರೆ ಆ ಅವಲಕ್ಕಿಯನ್ನು ಒಳಗೊಂಡಿರುವ ಓಡಿಗೆ ಅದನ್ನು ಸವಿಯಬಲ್ಲ ರಸನೆಯಿಲ್ಲ. ಇಂತು ಭಕ್ತಿಯ ಮನಸ್ಸು, ಎದೆಯ ಮೇಲಣ ಲಿಂಗ ಪರಸ್ಪರ ಸ್ಫಂದಿಸದಿದ್ದರೇನು ಪ್ರಯೋಜನ?
ಹೀಗೆ ಲಿಂಗಧಾರಣೆ ಅಯೋಗ್ಯರಿಗೆ ನಿಷ್ಫಲವೆಂದು ಹೇಳಿಯಾದ ಮೇಲೆ-ಲಿಂಗಧಾರಣೆಯಾದ ಆ ಅಯೋಗ್ಯರು ಮುಗ್ಧರ ಕಣ್ಣಿಗೆ ಭಕ್ತರಂತೆ ಕಾಣಿಸುವರಷ್ಟೆ. ಕಾಗೆಯು ನಂದನವನದಲ್ಲೇ ಅಲೆಯುತ್ತಿದ್ದರೂ ಅದು ಕೋಗಿಲೆಯಾಗುವುದಿಲ್ಲವೆಂದೂ, ಸರೋವರದ ತಡಿಯಲ್ಲಿ ಕುಳಿತ ಮಾತ್ರಕ್ಕೆ ಕೊಕ್ಕರೆ ಕಳಹಂಸವಾಗುವುದಿಲ್ಲವೆಂದೂ ವೇಷಧಾರೀ ಭಕ್ತರನ್ನು ಬಸವಣ್ನನವರು ತಿರಸ್ಕರಿಸಿರುವರು.
ವಿ.ಸೂ : ಈ ವಚನದಲ್ಲಿರುವ ನಾಲ್ಕು ಉಕ್ತಿಗಳೂ ಉಪಮಾನವೇ ಆಗಿ-ಉಪಮೇಯವಿಲ್ಲವಾದರೂ ಸ್ಥಲಬಲದಿಂದ ಲಿಂಗ-ದೀಕ್ಷೆಯ ಹಿನ್ನೆಲೆಯಲ್ಲಿ ಈ ವಚನವನ್ನು ವ್ಯಾಖ್ಯಾನಿಸಲಾಗಿದೆ.
ಈ ವಚನಕ್ಕೆ ಸೋಮಶೇಖರ ಶಿವಯೋಗಿಯು ಬರೆದಿರುವ ವ್ಯಾಖ್ಯಾನದ ಸಾರವನ್ನು ಈ ಮುಂದೆ
ನೋಡಿ : ಜಡವಾದವನಿಗೆ ಗುರುಭಕ್ತಿಯೂ ಅಳವಡದು, ಪ್ರಸಾದಭಕ್ತಿಯ ನಿಲುತಡೆಯ ನರಿಯದವನು ಪ್ರಸಾದಿಸ್ಥಲದಲ್ಲಿದ್ದೂ ಆ ಪ್ರಸಾದವನ್ನು ಸ್ವೀಕರಿಸಿ ಪರಮಾತ್ಮನಾಗಲಾರ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.