Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name - Vachana Dhare Vol -2 Singer : B.S.Mallikarjuna, B.R.Chaya, Raj Srinath, Raagini Music : M.S. Maruthi Label : Ashwini audio
English Translation 2Setting up a large shop on the earth,
Our Mahadãvasetti, the merchant, sits.
He speaks at once if your mind is one;
He doesn't at all if your mind is in two.
He does not lose a single pie,
Nor earns, too, even half a pie...
Behold, O Mother, how wise he is,
Our Lord Kūḍala Saṅgama !
Translated by: L M A Menezes, S M Angadi
Hindi Translationधरती पर एक बडी दुकान खोल,
हमारे व्यापारी महादेव सेठ बैठे हैं
मन एक हो, तो झट बोलते हैं,
मन दो हो तो नहीं बोलते।
वे न एक पैसे का नष्ट उठाते
न आधा पैसा कमाते
देखो माँ बडे निपुण है, मम कूडलसंगमदेव॥
Translated by: Banakara K Gowdappa
Telugu Translationధరిత్రియం దొక బిరుదైన యంగడిని వెట్టి
బచ్చు కూర్చుండె మహాదేవ సెట్టి,
ఒమ్మనంబై న వెంటనే పల్కును:
ఇమ్మనంబైన పల్కడు
కాసు నోడడు: ు అరకాసు గెల్వడు!
జాణ చూడమ్మ! మా కూడల సంగమ దేవుడు.
Translated by: Dr. Badala Ramaiah
Tamil Translationஅவனியிலே ஒரு பெருங் கடையினையிட்டு
வணிகனாயமர்ந்தான் நம் மகாதேவன் செட்டி
ஒரு மனமெனின் உடனே பகர்வான்
இருமனமெனின் பகரான்
காணிதோலா னரைக்காணி வெல்லான்
திறவோன் காணாயம்மா, நம் கூடல சங்கம தேவன்.
Translated by: Smt. Kalyani Venkataraman, Chennai
Marathi Translationधरतीवर एक मोठे दुकान थाटले.
व्यापार मांडून बसले आमचे महादेवशेट्टी.
मनी एक भाव येता सत्त्वर बोले.
दुजा भाव मनी येता अबोल होतो.
एका दमडीचा तोटाही सहन करीत नाही.
अर्ध्या दमडीचा नफाही घेत नाही. असा
आहे शहाणा आमचा कूडलसंगमदेव
Translated by Shalini Sreeshaila Doddamani
Urdu Translationجہاں میں حق وصداقت کوبیچنے کے لیے
سجی سجائی سی موزوں دوکان کھولے ہوئے
زمیں پہ آکے مہادیو شیٹی بیٹھے ہیں
ملےجوان کوکوئی ایک ہمنوا گاہک
بہ التفاتِ خصوصی وہ بات کرتے ہیں
مگرجولوگ کم وبیش میں اُلجھ جائیں
توپھر وہ کچھ نہ کہیں گے ، نہ بات طے ہوگی
کبھی وہ تول میں کوتاہیاں نہیں کرتے
نہ ان کوسود و زیاں کا خیال رہتا ہے
بڑے ہی زیرک ودانا ہیں کوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನಸರ್ವಶ್ರೇಷ್ಠ ನ್ಯಾಯದಾನಿ
ಇಲ್ಲಿ ಬಸವಣ್ಣನವರು ನಾವು ನಮ್ಮ ಭಕ್ತಿಗೆ ತಕ್ಕ ಫಲವನ್ನು ಪಡೆಯುತ್ತೇವೆಂಬುದನ್ನು ಒಂದು ಸುಂದರ ಚಿತ್ರಣದ ಮೂಲಕ ತೋರಿಸಿದ್ದಾರೆ.
ಈ ವಿಸ್ತಾರವಾದ ಪ್ರಪಂಚವೇ ಒಂದು ದೊಡ್ಡ ಅಂಗಡಿ. ಇಲ್ಲಿರುವ ಭೋಗ ಭಾಗ್ಯಗಳೇ ಆ ಅಂಗಡಿಯಲ್ಲಿರುವ ಸರಕು ಸಾಮಾನುಗಳು. ದೇವರೇ ಆ ಅಂಗಡಿಯಲ್ಲಿ ವ್ಯಾಪಾರ ಮಾಡುವ ಶೆಟ್ಟಿ. ನಾವೆಲ್ಲಾ ಆ ಅಂಗಡಿಗೆ ಬರುವ ಗಿರಾಕಿಗಳು. ಹಣ ಗಳಿಸುವುದನ್ನೇ ಪ್ರಧಾನವಾಗಿಟ್ಟುಕೊಂಡು ಬಂದ ಗಿರಾಕಿಗಳನ್ನೆಲ್ಲಾ ಮಾತನಾಡಿಸುವವನಲ್ಲ ಈ ಮಹಾದೇವಶೆಟ್ಟಿ. ಬಹು ಗಂಭೀರ ಸ್ವಭಾವ ಅವನದು. ಒಮ್ಮನಸ್ಸಿನಿಂದ ಹೋದರೇನೇ ಈ ಮಹಾದೇವ ಶೆಟ್ಟಿ ಮಾತನಾಡುವುದು; ಇಲ್ಲದಿದ್ದರೆ ಮಾತೇ ಆಡುವುದಿಲ್ಲ. ತೂಕ ಮಾಡುವುದರಲ್ಲಂತೂ ತುಂಬಾ ಜಾಣ. ಒಂದು ಕಾಣಿ ಕಡಿಮೆ ಮಾಡುವುದಾಗಲೀ ಅಥವಾ ಅರ್ಧ ಕಾಣಿ ಜಾಸ್ತಿ ಕೊಡುವುದಾಗಲೀ ಇಲ್ಲ. ಅವನು ಕೊಡುವ ಭಕ್ತಿಯೆಂಬ ನಾಣ್ಯವನ್ನು, ಭಕ್ತಿ ಯಾವ ಮಟ್ಟದ್ದೋ ಅವನು ಕೊಡುವ ಫಲವೂ ಅದೇ ಮಟ್ಟದ್ದೇ. ಇದನ್ನರಿಯದ ಮೂಢ ಜನರು ನಾಲ್ಕಾಣೆಯ ಹಣ್ಣು ಹಂಪಲಿನ ಭಕ್ತಿಯನ್ನು ಮುಂದಿಟ್ಟು ಮೇರೆ ಮೀರಿದ ಫಲವನ್ನು ಬಯಸಿದರೆ ಇಷ್ಟೊಂದು ಪರಿಣಿತನಾದ ಮಹಾದೇವಶೆಟ್ಟಿಯು ಅವರಿಗೆ ಅಷ್ಟೊಂದು ಫಲವನ್ನು ಕೊಡಲು ಅವನೇನು ದಡ್ಡನೇ? ನಾಲ್ಕಾಣೆಯ ಭಕ್ತಿಗೆ ಅವನು ನೀಡುವುದು ನಾಲ್ಕಾಣೆ ಬೆಲೆಯ ಫಲವನ್ನೇ. ನಾಲ್ಕಾಣೆಗಿಂತ ಕಮ್ಮಿ ಫಲವನ್ನೂ ನೀಡ. ಅದಕ್ಕಿಂತ ಅಧಿಕ ಫಲವನ್ನೂ ಕೊಡ. ‘ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ'.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.