Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:BHAKTHI MUSIC, BASAVANNA VACHANAGALU, Singer : Ananthakumar and Suma, Music : Music : Ananthakumar
English TranslationWhy try to correct
The crooked ways of others?
First, correct yourself—
Your own deceitful thoughts and actions.
Our Lord Kūḍala Saṅgama is not pleased
With those who shed crocodile tears
For their neighbor’s grief! Translated by: Dr Shivamurthy Shivacharya Mahaswamiji, Taralabalu Math, Sirigere
English Translation 2Why should you try to mend
The failings of the world?
Assuage your bodies first,
Each one of you!
Assuage your minds, each one!
Lord Kūḍala Saṅgama
Does not approve
Those who bemoan
The neighbour's grief.
Translated by: L M A Menezes, S M Angadi
Russian TranslationЗачем исправлять полный омрачений мир?
О теле своем заботься,
Душу свою береги.
Стенаний о бедах соседей не оценит
Бог Кудаласангама. Translated by: Prof Harishankar, Mysore and Mrs. Galina Kopeliovich, Russia
Hindi Translationलोक-वक्रता तुम क्यों सुधारते हो?
अपने अपने तन शांत कर लो
अपने अपने मन शांत कर लो
पडोसियों के दुःख से रोनेवालों पर
कूडलसंगमदेव प्रसन्न नहीं होते ॥
Translated by: Banakara K Gowdappa
Telugu Translationచిలుక చదువ ఫలమేమి?
పిల్లి రాక చెప్పజాలదు,
జగమెల్ల చూచు కన్ను
తను జంపు కత్తిని కనజాలదు!
ఎదిరి గుణము తెలిసితిమందురేగాని
తమ గుణము తామే తెలియలేరు
కూడల సంగమదేవా!
Translated by: Dr. Badala Ramaiah
Marathi Translationकासया पाहता, दुजियांचे दोष
स्वतः निर्दोष, व्हावे आधी
आपलेचि तन, आपलेचि मन
सर्वे सुधारून, घ्यावे आधी
वक्रता आपुली, मुळीच न पाहता
दुजास्तव वाहता, अश्रु व्यर्थ
शेजऱ्यासाठी, अश्रु तो वाही
नको तुमची घाई, काळजी ते
कूडलसंगमदेवा! प्रयत्न न पावे
सुधारून घ्यावे, आपणचि
अर्थ - लोकांची वक्रता किंवा त्यांच्यातील दोष सुधारण्यापेक्षा प्रथम आपापले तन व आपापले मन सुधारुन घ्यावेत. लोकांचे दोष शोधण्यात वेळ वाया घालवू नये. त्याऐवजी आपल्या शरीरातील व आपल्या मनातील दोष काढून टाकण्यात सदैव प्रयत्नशील राहावे. हेच तुमची सर्वश्रेष्ठ साधना ठरेल. शेजाऱ्यांच्या दुःखात अश्रू ढाळण्यात अर्थ नाही. त्यासाठी माझा कूडलसंगमदेव ( परमेश्वर) समर्थ आहे तो कर्तव्यदक्ष आहे. म्हणून त्यांची काळजी वाहण्याची गरज नाही.
Translated by Rajendra Jirobe, Published by V B Patil, Hirabaug, Chembur, Mumbai, 1983लोकांचे दोष तुम्ही का दुरुस्त करता ?
तुमच्या तुमच्या तनला समाधानी करा.
तुमच्या तुमच्या मनाला समाधानी करा.
कूडलसंगमदेवाला शेजाऱ्यांच्या दुःखाने रडणारे आवडत नाहीत.
Translated by Shalini Sreeshaila Doddamani
Urdu Translationخطائے شخص دگرکی گرفت سے پہلے
تم اپنےجسم کو،دل کوسنبھال کررکھّو
جواپنا دامنِ د ل ہی اگرہوآلودہ
کسی پہ اشک بہانےسے فائدہ کیا ہے
نہ ہوں گےشاد کبھی اس سےکوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನಪರೋಪದೇಶಕರು ಪರಿಶುದ್ಧರಾಗಿರಬೇಕು
ಪರರಿಗೆ ಉಪದೇಶ ಮಾಡುವವರು ಮೊದಲು ತಾವು ಪರಿಶುದ್ಧರಾಗಿರಬೇಕು. ಇಲ್ಲದಿದ್ದರೆ ಅವರು ಬೇರೆಯವರಿಗೆ ಉಪದೇಶಿಸಲು ಯಾವ ಹಕ್ಕೂ ಇಲ್ಲ. ಆದ್ದರಿಂದಲೇ ಅಣ್ಣನವರು “ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.......” ಎಂದು ಇತರರ ಡೊಂಕನ್ನು (ಲೋಪ ದೋಷಗಳನ್ನು) ತಿದ್ದಲು ಹೊರಡುವ ಮೊದಲು ತಮ್ಮಲ್ಲೇ ಇರುವ ಡೊಂಕನ್ನು ತಿದ್ದಿಕೊಳ್ಳಲು ಕರೆ ನೀಡಿದ್ದಾರೆ. ಇದನ್ನೇ ಕ್ರೈಸ್ತರು ಒಂದೆಡೆ ಹೀಗೆ ಹೇಳುತ್ತಾರೆ. “Why do look at the speak of sawdust in your brother’s eye, with never a thought for the great plank in your own?...... you hypocrite! First take the plank out of your own eye, and then you will see clearly to take the speek out of your brothers” ಅಂದರೆ ನಿನ್ನ ಕಣ್ಣಿನಲ್ಲಿಯೇ ಧೂಳು ಒಂದು ದೊಣ್ಣೆಯಷ್ಟು ಬಿದ್ದಿರುವಾಗ ಪರರ ಕಣ್ಣಿನಲ್ಲಿ ಕಣದಷ್ಟು ಬಿದ್ದಿರುವುದನ್ನು ನೋಡುವೆಯೇಕೆ? ಆದ್ದರಿಂದ ಕಪಟಿಯೇ ಮೊದಲು ನಿನ್ನ ಕಣ್ಣಿನ ಧೂಳನ್ನು ಒರೆಸಿಕೋ, ಆ ನಂತರ ಪರರ ಕಣ್ಣಿನ ಧೂಳನ್ನೊರೆಸಲು ಸರಿಯಾಗಿ ಕಾಣುವುದು ಎಂದರ್ಥ.
ಹೀಗೆ ಇನ್ನೊಬ್ಬರನ್ನು ಸುಧಾರಿಸುವುದಕ್ಕೆ ಮೊದಲು ತನ್ನನ್ನೇ ಸುಧಾರಿಸಿಕೊಳ್ಳಬೇಕೆಂದು ಹೇಳುವುದರಲ್ಲಿ ಒಂದು ಔಚಿತ್ಯವಿದೆ. ಅದೇನೆಂದರೆ ಅಂತಹ ಸುಧಾರಣಾ ಕ್ರಮವೇ ಬೇರೆಯವರ ಮನಸ್ಸಿನ ಮೇಲೆ ಪರಿಣಾಮಕಾರಿಯಾಗಲು ಸಾಧ್ಯ. ಉಳಿದವರಿಂದ ಆಗುವ ಪ್ರಯೋಜನ ಕಡಿಮೆ. ಉದಾಹರಣೆಗೆ ಸಿಗರೇಟನ್ನು ಸೇದುವ ಉಪಾಧ್ಯಾಯರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಸಿಗರೇಟನ್ನು ಸೇದಬಾರದೆಂದು ಆದೇಶಿಸಿದೆ, ಸಿಗರೇಟು ಆರೋಗ್ಯಕ್ಕೆ ಹಾನಿಕಾರವೆಂಬ ಅವರ ಅನುಭವ ಎಷ್ಟೇ ನಿಜವಾಗಿದ್ದರೂ ವಿದ್ಯಾರ್ಥಿಗಳು ‘ಓಹೋ! ಇವರಾದರೆ ಸೇದಬಹುದೇನೋ’ ಎಂದು ಗೊಣಗುಟ್ಟಿ ಕದ್ದು ಸೇದುವುದನ್ನು ಮಾತ್ರ ಬಿಡುವುದಿಲ್ಲ. ಆದ್ದರಿಂದ ತಮ್ಮ ಆಚರಣೆಯಲ್ಲಿ ಇಲ್ಲದುದನ್ನು ಅನ್ಯರಿಗೆ ಬೋಧಿಸ ಹೊರಟರೆ ಅದು ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ.
ಈ ರೀತಿ ಪರೋಪದೇಶಕರ ಡೊಂಕನ್ನೇ ತಿದ್ದಲು ಹೊರಟು ಅಣ್ಣನವರು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ’ ಎಂಬ ತಮ್ಮ ಮಾತಿನ ಸುಳಿಯಲ್ಲಿ ತಾವೇ ಸಿಕ್ಕಿಬಿದ್ದಿದ್ದಾರಲ್ಲವೇ ಎಂದು ಆಪಾತತಃ ತೋರಬಹುದು. ಇದು ಸರಿಯಲ್ಲ. ಏಕೆಂದರೆ ಅವರು ಪರರಿಗೆ ಉಪದೇಶ ಮಾಡಲೇಬಾರದೆಂದೇನೂ ಹೇಳಲಿಲ್ಲ; ತನ್ನ ಉಪದೇಶದಂತೆ ತಾನೇ ನಡೆಯದಿದ್ದರೆ ಬೇರೆಯವರಿಗೆ ಉಪದೇಶಿಸುವ ಅರ್ಹತೆಯನ್ನು ಕಳೆದುಕೊಳ್ಳುವೆಯೆಂದಷ್ಟೇ ಎಚ್ಚರಿಸಿದ್ದಾರೆ. ಹಾಗೆ ಎಚ್ಚರಿಸುವ ಅಧಿಕಾರವನ್ನು ಅವರು ಈ ಹಿಂದೆ ಅನೇಕ ವಚನಗಳಲ್ಲಿ ನೋಡಿರುವಂತೆ ತಮ್ಮಲ್ಲಿರುವ ನಡೆನುಡಿಗಳ ಹೊಂದಾಣಿಕೆಯಿಂದಲೇ ಪಡೆದುಕೊಂಡಿದ್ದಾರೆ. ಹೀಗೆ ಅಣ್ಣನವರಂತೆ ನುಡಿದಂತೆಯೇ ನಡೆಯುವ ವ್ಯಕ್ತಿಗಳು ಅತಿ ವಿರಳ. ಆದುದರಿಂದಲೇ ತುಳಸೀದಾಸರು ತಮ್ಮ ರಾಮಚರಿತ ಮಾನಸ ಎಂಬ ಗ್ರಂಥದಲ್ಲಿ ಈ ರೀತಿ ಉದ್ಗರಿಸಿದ್ದಾರೆ;
“ಪರ ಉಪದೇಸ್ ಕುಸಲ್ ಬಹುತೇರೇ!
ಜೆ ಆಚರಹಿ ತೇ ನರ್ ಘನೇರೇ!”
ಅಂದರೆ ಪರರಿಗೆ ಉಪದೇಶವನ್ನು ನೀಡುವ ಜಾಣರು ಅನೇಕರಿದ್ದಾರೆ. ಆದರೆ ಅದನ್ನೇ ಆಚರಣೆಯಲ್ಲಿ ತಂದಿರುವ ಜನರು ಬಹಳವಿಲ್ಲ.
ತಾವು ಆಚರಣೆಯಲ್ಲಿ ತರದಿದ್ದರೂ ಇತರರ ಹಿತದೃಷ್ಟಿಯಿಂದ ಬೋಧಿಸುತ್ತೇವೆಂದರೆ ಅಂತಹ ಪರೋಪದೇಶದ ಹಿಂದೆ ಇರುವ ಕಳಕಳಿಯು ಅತ್ಯಂತ ಸಂದೇಹಾಸ್ಪದವಾದುದು. ‘ನೆರಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವಾ.........’ ತನ್ನ ಸ್ಥಿತಿಯೇ ಚಿಂತಾಜನಕವಾಗಿರುವಾಗ ಅಳುವುದನ್ನು ಬಿಟ್ಟು, ಪರರ ದುಃಖಕ್ಕೆ ಅಳುವುದಾಗಿ ಹೇಳಿದರೆ ಅದರಲ್ಲಿ ಎಷ್ಟರಮಟ್ಟಿಗೆ ಸಹಜತೆ ಇರುವುದೆಂದು ನಂಬಲು ಸಾಧ್ಯ? ಅದು ಮೊಸಳೆಯ ಕಣ್ಣಿರಿನಂತೆ (Crocodile tears) ಕೃತ್ರಿಮವಾದುದು, ದುರುದ್ದೇಶಪೂರಿತವಾದುದು ಎನ್ನದೆ ಗತ್ಯಂತರವಿಲ್ಲ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.