ಭಕ್ತನ ಭಕ್ತಸ್ಥಲ - ಡಾಂಭಿಕತೆ
ಹೊರಿಸಿಕೊಂಡು ಹೋದ ನಾಯಿ: ಮೊಲನೇನ ಹಿಡಿಯುವುದಯ್ಯಾ?
ಇರಿಯದ ವೀರ; ಇಲ್ಲದ ಸೊಬಗುವ ಹೇಳುವುದೇ ನಾಚಿಕೆ!
ಆನು ಭಕ್ತನೆಂತಪ್ಪೆನಯ್ಯಾ, ಕೂಡಲಸಂಗಮದೇವಾ?
Transliteration Horisikoṇḍu hōda nāyi: Molanēna hiḍivudayyā?
Iriyada vīra; illada sobaguva hēḷuvudē nācike!
Ānu bhaktanentappenayyā, kūḍalasaṅgamadēvā?
Manuscript
English Translation 2 A dog borne on the shoulders: how can it catch
A rabbit,Lord?
A warrior impotent to throw a spear:
He ought to blush
At his unfounded boastfulness!
How can I be a devotee,
O Kūḍala Saṅgama Lord?
Translated by: L M A Menezes, S M Angadi
Hindi Translation ढोकर ले गया हुआ कुत्ता
खरगोश को क्या पकडेगा?
भाला भोंकने में असमर्थ
वीर की असत्य प्रशंसा लज्जाजनक है ।
अपने को भक्त कैसे कहूँ कूडलसंगमदेव?
Translated by: Banakara K Gowdappa
Telugu Translation ఎత్తులబడి వచ్చు కుక్క కుందేటిని పట్టు టెట్లయ్యా?
పొడవలేని వీరుడు లేని బిరుదులు బల్కుటే సిగ్గు
భక్తు డెట్ల గుదునయ్యా నేను
కూడల సంగమదేవా!
Translated by: Dr. Badala Ramaiah
Marathi Translation
उठून घेवून जाणारे कुत्रे सश्याला कसे पकडणार?
न लढणाऱ्या वीराने वल्गणा मारने लज्जास्पद आहे.
मी कसला भक्त आहे कूडलसंगमदेवा ?
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯುದ್ಧರಂಗಕ್ಕೆ ನುಗ್ಗಿ ಹೋರಾಡಲಾರದವನು-ತಾನು ಶೂರನೆಂದು. ಕುರೂಪಿಯಾದವನು-ತಾನು ಸ್ಫುರದ್ರೂಪಿಯೆಂದು ವರ್ಣಿಸಿಕೊಂಡು ಬೀಗುವುದು ಎಷ್ಟು ಹಾಸ್ಯಾಸ್ಪದವೋ-ಭಕ್ತಿಯಿಲ್ಲದ ತಮ್ಮನ್ನು ತಾವೇ ಭಕ್ತನೆಂದು ಕರೆದುಕೊಳ್ಳುವುದೂ ಅಷ್ಟೇ ಹಾಸ್ಯಾಸ್ಪದವೆನ್ನುವರು ಬಸವಣ್ಣನವರು. ಆ ಬಸವಣ್ಣನವರು ತಮ್ಮನ್ನು ಜಂಗಮ(ಲಿಂಗ)ವೆಂದುಕೊಳ್ಳುವುದಿರಲಿ, ಶರಣರೆಂದುಕೊಳ್ಳುವುದಿರಲಿ-ಭಕ್ತನೆಂದು ಕೊಳ್ಳುವುದಕ್ಕೂ ಅವರಿಗೆ ಅರ್ಹತೆಯಿಲ್ಲವೆ ? ಮಹಾತ್ಮರ ನಿರಹಂ ನಿಲುವುಗಳು ಅದ್ಭುತಗಳಲ್ಲಿ ಅದ್ಭುತ !
ಬಸವಣ್ಣನವರ ಅಭಿಪ್ರಾಯದಲ್ಲಿ-ಭಕ್ತನೆಂದರೆ ಗುರು ಲಿಂಗ ಜಂಗಮರ ಸೇವಕ-ಅವನಿಗಿರಬೇಕಾದ್ದು ದಾಸೋಹಂಭಾವ. ಅಂದಮೇಲೆ ಅವನು ಬಹಳ ಸರಳವಾದ ವಿನಮ್ರವಾದ ಜೀವನವಿಧಾನವನ್ನು ಅಳವಡಿಸಿಕೊಳ್ಳಬೇಕು. ಹಾಗಲ್ಲದೆ ಜರತಾರಿಯನ್ನು ಉಟ್ಟುಕೊಂಡು, ಪಲ್ಲಕ್ಕಿಯನ್ನು ಏರಿಕೊಂಡುಹೋದರೆ ಹೇಗೆ ?
ಯಜಮಾನನಿಗೆ ಮೊಲ ಹಿಡಿದುಕೊಡಬೇಕಾದ ನಾಯಿ ವೇಗವಾಗಿ ಓಡುವುದರಲ್ಲಿ ಪಟುವಾಗಿರಬೇಕು ಅದು ಪಲ್ಲಕ್ಕಿಯಲ್ಲಿ ಕುಳಿತು ಚಾಮರ ಹಾಕಿಸಿಕೊಂಡು ಬೇಟೆಗೆ ಹೋಗುವುದಾದರೆ ತೀರ ಅನುಚಿತವಷ್ಟೇ ಅಲ್ಲ ಲಜ್ಜಾಸ್ಪದ ಕೂಡ.
ಈ ವಿವೇಕದ ಈ ವಿನಯದ ಈ ಸರಳದ ಬಸವಣ್ಣನವರು ತಮ್ಮ ಮಹಾಮನೆಯಲ್ಲಿ ಯಾವ ಪೋಷಾಕಿನಲ್ಲಿರುತ್ತಿದ್ದರೋ ? “ಮಂಡೆಯ ಬೋಳಿಸಿಕೊಂಡು ಗಂಡುದೊತ್ತುವೊಕ್ಕೆನಯ್ಯ” ಎಂಬ ಅವರ 498 ನೇ ವಚನವನ್ನು ನೋಡಿ, ಅವರೊಬ್ಬ ನಿರಾಭರಣ ನೀರವ ನಿಷ್ಠ ಶ್ರಮಿಕರಾಗಿದ್ದರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು