•  
  •  
  •  
  •  
Index   ವಚನ - 324    Search  
 
ಭಕ್ತನ ಭಕ್ತಸ್ಥಲ - ಸತ್ವಪರೀಕ್ಷೆ
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯಾ; ಬಡವನೆಂದೆನ್ನ ಕಾಡದಿರಯ್ಯಾ: ಎನಗೆ ಒಡೆಯರುಂಟು ಕೂಡಲಸಂಗನ ಶರಣರು.
Transliteration Aḍigaḍige enna manava jaḍidu nōḍadirayya; baḍavanendenna kāḍadirayyā: Enage oḍeyaruṇṭu kūḍalasaṅgana śaraṇaru.
Manuscript
English Translation 2 Do not, O Lord, at every step Tap at my heart by way of test; Do not, O Lord. plague me Because I am a waif I have my masters too; Kūḍala Saṅga's Śaraṇās. Translated by: L M A Menezes, S M Angadi
Hindi Translation पग पग पर मेरे मन को ठोंककर, मत देखो, अनाथ समझ मुझे मत सताओ, मेरे नाथ हैं कूडलसंग के शरण ॥ Translated by: Banakara K Gowdappa
Telugu Translation అడుగడుగున నా మనసు నడలించి చూడకయ్యా! బడుగని నను బాధపెట్టకయ్యా! ఒడయులుగలరు నాకు సంగని శరణులు! Translated by: Dr. Badala Ramaiah
Marathi Translation पावला पावलाला माझ्या मनाची परीक्षा पाहू नका देवा. गरीबाला त्रास देवू नका. माझे मालक कूडलसंगमदेवाचे शरण. Translated by Shalini Sreeshaila Doddamani
ಶಬ್ದಾರ್ಥಗಳು ಜಡಿ = ;
ಕನ್ನಡ ವ್ಯಾಖ್ಯಾನ ಯಾವನಾದರೊಬ್ಬನನ್ನು ತಡೆದು ನಿಲ್ಲಿಸಿ ಬೈದು ಬೆದರಿಸುತ್ತಿದ್ದರೆ-ದಿನದಿನವೂ ಇದೇ ಗತಿಯಾದರೆ-ಅವನಿಗೆ ಯಾರೂ ರಕ್ಷಕರಿಲ್ಲ. ಅವನನ್ನು ಕೊಂದರೂ ಕೇಳುವವರಿಲ್ಲವೆಂಬುದು ಸ್ಪಷ್ಟ ತಾನೆ ? ಸ್ಪಷ್ಟ ! ಶಿವನೂ ಬಸವಣ್ಣನವರನ್ನು ವಿಧವಿಧವಾಗಿ ಕಷ್ಟಗಳಿಗೆ ಒಡ್ಡುತ್ತಿದ್ದಾನೆ. ಅವರ ಮನಸ್ಸು ಗಟ್ಟಿಗಿದೆಯೋ ಇಲ್ಲವೋ ಎಂದು ಪರೀಕ್ಷಿಸಲೇ ಆಗಲಿ ಹಿಗ್ಗಾಮುಗ್ಗಾ ಹಿಡಿದು ಜಗ್ಗುತ್ತಿದ್ದಾನೆ. ಈ ನಿತ್ಯಾಗ್ನಿ ಪರೀಕ್ಷೆಗಳಿಂದ ಬೆಂದ-ಆದರೂ ಚಿನ್ನವಾದ ಬಸವಣ್ಣನವರು ದೇವರನ್ನು ಎದುರಿಸಿ ನಿಂತು-ನನ್ನನ್ನು ನೀನು ಯಾರೂ ಇಲ್ಲದ ಪರದೇಶಿಯೆಂದು ತಿಳಿದು ಕಾಡುತ್ತಿರುವೆಯೇನು ?ನನಗೆ ಶರಣೆರೆಂಬ ಒಡೆಯರಿದ್ದಾರೆ.ಅವರು ತಮ್ಮ ಆಳಾದ ನನಗೆ ಹಿಂಸೆಯಾದರೆ ಸಹಿಸುವರಲ್ಲ ಜೋಕೆ ಎಂದು ಶಿವನಿಗೆ ಎಚ್ಚರಿಸಿದರೆಂಬಂತೆ ಈ ವಚನದ ಧೋರಣೆಯಿದ್ದು-ಶಿವನಿಗಿಂತಲೂ ಶಿವಶರಣರೇ ಪ್ರಬಲರೆಂಬ, ಅವರಿಗೆ ಶಿವನೂ ಸಗ್ಗುವನೆಂಬ ಆಶಯ ಅಲ್ಲಿ-ಅಡಗಿದೆ. ಸಾಧಕನಿಗೆ ಶಿವನನ್ನು ತೋರಿದವರೂ ಶಿವಶರಣರೇ.ಆ ಸಾಧಕನಿಗೂ ಶಿವನಿಗೂ ಗಂಟುನಂಟು ಹಾಕಿದವರೂ ಶಿವಶರಣರೇ. ಇಬ್ಬರ ನಡುವೆ ಘರ್ಷಣೆಯೇರ್ಪಟ್ಟರೆ ಸುಗಮ ಮಾಡಬಲ್ಲವರು ಶಿವಶರಣರೆ, ಅವಶ್ಯಬಿದ್ದರೆ-ಶಿವಶರಣರು ಶಿವನ ಸವಾಲಿಗೆ ಪ್ರತಿಸವಾಲಾಗಿ ನಿಲ್ಲಬಲ್ಲರು-ಶಿವಭಕ್ತರ ಪರವಾಗಿ ಭಕ್ತರ ದಿವ್ಯ ಜೀವನದಲ್ಲಿ ಶರಣರಿಗೆ ಬಸವಣ್ಣನವರು ಕೊಡಮಾಡಿರುವ ಸ್ಥಾನಮಾನ ಅಸದೃಶವಾದುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು