MusicCourtesy:Provided to YouTube by [Simca] Sangeeth Sagar Appanu Namma · Ambayya Nuli, Vachana Vaani ℗ 1998 Sagar Music Released on: 1998-06-23
English Translation 2A lesser man than I
No, there is none;
Greater than Śiva's devotees
No, there is none.
Witness Thy feet,
Witness my mind:
This is a test for me,
Lord Saṅgama!
Translated by: L M A Menezes, S M Angadi
Hindi Translationमुझसे कोई छोटा नहीं,
शिवभक्तों से कोई बडा नहीं ।
तव चरण साक्षी है,
मेरा मन साक्षी है,
कूडलसंगमदेव मेरे लिए यही प्रमाण है ॥
Translated by: Banakara K Gowdappa
Telugu Translationనాకన్న పిన్నలు లేరు
శివభక్తులకన్న పెద్దలు లేరు
నీ పాదమే నా మనసే సాక్షి
కూడల సంగమదేవా నాకిదే దివ్యము.
Translated by: Dr. Badala Ramaiah
Marathi Translationमजविणा नाही, अन्य कोणी लहान
शरणाविण महान, नाही कोणी
यासि एकमेव, साक्ष तव चरण
साक्ष माझे मन, यासी एक
कूडलसंगमदेवा! हेचि मज दिव्य
तोचि मज सेव्य, सर्वकाळ
अर्थ - माझ्यापेक्षा कोणीही लहान नाही आणि शिवशरणापेक्षा थोर असाही या जगी कोणी नाही. हे मी तुमच्या चरणांच्या ( कूडलसंगमाच्या ) साक्षीभावाने सांगतो आहे. माझ्या अंतरात्म्याच्या साक्षीने सांगतो आहे. कूडलसंगमदेवा हेच माझे दिव्य जाणावे.
सर्व शिवशरणांना परमेश्वररुपी समजूनच त्यांचे दास्यत्व हेच बसवेश्वरांचे दिव्यत्व. दिव्य म्हणजे हातात तापलेला लाल लोहगोल घेऊन परमेश्वराची शपथ घेणे होय. अर्थात भयंकर जिवावरची कसोटी व कडक परीक्षा होय.
Translated by Rajendra Jirobe, Published by V B Patil, Hirabaug, Chembur, Mumbai, 1983माझ्याहून लहान कोणी नाही,
शिवभक्ताहून मोठा कोणी नाही.
तुमचे चरण साक्षी, माझे मन साक्षी.
कूडलसंगमदेवा, माझ्यासाठी हेच प्रमाण,
Translated by Shalini Sreeshaila Doddamani
Urdu Translationتمھارا پاؤں بھی اورمیرادل بھی شاہد ہے
نہیں ہے مجھ سا زمانے میں کوئی کم مایہ
نہیں ہےشیوکےشیدائی سےبڑا کوئی
مِرےعزیزمرے دیوا کوڈلا سنگم
یہی وہ بات ہےجس پہ میں فخرکرتا ہوں
Translated by: Hameed Almas
ಶಬ್ದಾರ್ಥಗಳುದಿಬ್ಯ = ; ಸಾಕ್ಷಿ = ;
ಕನ್ನಡ ವ್ಯಾಖ್ಯಾನಬಸವಣ್ಣನವರು ಎಲ್ಲ ಭಕ್ತರನ್ನೂ ತಮಗಿಂತ ಹಿರಿಯರೆಂದೂ, ಅವರೆಲ್ಲರಿಗಿಂತ ತಾವೇ ಕಿರಿಯರೆಂದೂ ಹೇಳಿಕೊಳ್ಳುತ್ತಿರುವುದು ಸಾರ್ವಜನಿಕರ ಮನವನ್ನು ಸೂರೆಗೊಳ್ಳಲು ಅಳವಡಿಸಿಕೊಂಡ ಒಂದು ತಂತ್ರವಲ್ಲ. ಅದು ಅವರ ಅಹಂಕಾರನಿರಸನದ ಮಂತ್ರ.
ಅನುಯಾಯಿಗಳು ನಾಯಕನನ್ನು ಮಹನೀಯನೆನ್ನಬೇಕು-ನಾಯಕನು ತನ್ನ ಮಹನೀಯತೆಯನ್ನು ಮನಃಪೂರ್ವಕವಾಗಿ ಅಲ್ಲಗಳೆದುಕೊಳ್ಳಬೇಕು. ಆಗ ಧರ್ಮಸಾಮ್ರಾಜ್ಯದಲ್ಲಿ ವ್ಯಕ್ತಿವ್ಯಕ್ತಿಗಿರಬೇಕಾದ ಸಮರಸತೆ ಏರ್ಪಡುವುದು.
ಆದುದರಿಂದ ಬಸವಣ್ಣನವರಾಡುವ-ಎನಗಿಂತ ಕಿರಿಯರಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಮಾತು ನೈಜವೇ ಆಗಿದೆ. ಆದುದರಿಂದಲೇ ಆ ಮಾತನ್ನು ಅವರು ಶಿವನ ಪಾದವನ್ನು ದಿವ್ಯಸಾಕ್ಷಿಮಾಡಿ ಆಡುತ್ತಿರುವರು-ಒಂದು ಪಕ್ಷ ತಾವಾಡುವ ಮಾತಿಗೆ ತಕ್ಕ ದಾಸೋಹಂಭಾವ ತಮ್ಮಲ್ಲಿಲ್ಲದಿದ್ದರೆ-ತಾವು ನಮಸ್ಕರಿಸಲೆಂದು ಮುಟ್ಟುವ ಶಿವನ ಪಾದ ಕಾದ ಕಬ್ಬಿಣವಾಗಿ ತಮ್ಮ ಕೈಯನ್ನು ಸುಡಲಿ ಎಂದು ಶಪಥ ಮಾಡುತ್ತಿರುವರು ಕೂಡ. ನೋಡಿ ವಚನ-324.
ದಿಬ್ಯ<ದಿವ್ಯ. ದಿಬ್ಯವೆಂದರೆ-ಆಡಿದ ಮಾತನ್ನು ಪ್ರಮಾಣಿಸಲು ಬಳಸುತ್ತಿದ್ದ ಕಾದ ಕಬ್ಬಿಣದ ತುಂಡು.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.