•  
  •  
  •  
  •  
Index   ವಚನ - 340    Search  
 
ಭಕ್ತನ ಭಕ್ತಸ್ಥಲ - ಪ್ರಯತ್ನ
ನಡೆವರಯ್ಯಾ ಒಡೆಯರು ತನು-ಮನ-ಧನದ ಮೇಲೆ; ನುಡಿವರಯ್ಯಾ ಒಂದು ನಿಮಿಷ ಬಾರದಿರ್ದೊಡೆ; ಜರೆವರಯ್ಯಾ ಒಡೆಯರು ಮನಬಂದ ಪರಿಯಲಿ, ಶಿವ, ಶಿವಾ! ಅಣೆವರಯ್ಯಾ ಮಂಡೆಯನೂರಿ. ಪ್ರಾಣದೊಡೆಯರಯ್ಯಾ, ಕೂಡಲಸಂಗಮದೇವಾ, ನಿಮ್ಮ ಶರಣರು.
Transliteration Naḍevarayya oḍeyaru tanu-mana-dhanada mēle; nuḍivarayya ondu nimiṣa bāradirdoḍe; jarevarayya oḍeyaru manabanda pariyali, śiva, śivā! Aṇevarayya maṇḍeyanūri. Prāṇada oḍeyarayya, kūḍalasaṅgamadēvā, nim'ma śaraṇaru.
Manuscript
English Translation 2 The masters go By all one is and has: If but a moment late, They will not scold me! The masters blame me at their own sweet will! O God, good Śiva! How they press My head low to the ground And stamp it down! Yea, Thy Śaraṇās, O Kūḍala Saṅgama Lord, The masters of my soul! Translated by: L M A Menezes, S M Angadi
Hindi Translation प्रभु तन, मन, धन पर चलते हैं, एक क्षण विलंब हो, तो पूछते हैं । प्रभु मनमाना निंदा करते हैं, शिव शिव, सिर दबाकर ठोंकते हैं मेरे प्राणों के प्रभु, तव शरण कूडलसंगमदेव ॥ Translated by: Banakara K Gowdappa
Telugu Translation తను మన ధనముల దిగదొక్కి ఒడయులు నడతురయ్యా! క్షణము దడసిన ప్రచండులై తిట్టెదరయ్యా ఇచ్చవచ్చినట్లు హేళన సేతురయ్యా మాటిమాటికి; శివశివా! తలగుంజి క్రిందికి వంచి చావకొట్టెదరయ్యా మీ శరణులు నాకు ప్రాణ ప్రభువులై యుండిరయ్యా. Translated by: Dr. Badala Ramaiah
Marathi Translation माझ्या तन-मन-धनाचे मालक होऊन देखरेख करतात. एक क्षण उशीर केला तर माझ्यावर रागवतात. शरण मनाला येईल तसा तिरस्कार करतात. शिवशिवा, गुडघ्यांनी मारतात. प्राणाचे मालक कूडलसंगमदेवा तुमचे शरण. Translated by Shalini Sreeshaila Doddamani
ಶಬ್ದಾರ್ಥಗಳು ಆಣೆ = ಪ್ರಮಾಣ, ವಚನ; ಜರಿ = ; ತನು = ; ಪರಿ = ;
ಕನ್ನಡ ವ್ಯಾಖ್ಯಾನ ಇದೊಂದು ಊಳಿಗಮಾನ್ಯ ಪದ್ಧತಿಯ ಅನುಸರಣೆಗೆ ಆಹ್ವಾನ ಕೊಡುವ ವಚನವೆಂದರೆ-ಭಕ್ತಿಪಂಥದ ಸೇವಾಮಾರ್ಗದ ಕಠೋರತೆಯನ್ನು ಅರಿಯದವರು ಆಡುವ ಮಾತಾಗುವುದು. ಶರಣರು ಶಿವನಿಗೆ ದಾಸರಾದರೆ-ಬಸವಣ್ಣನವರು ಆ ಶರಣರಿಗೆ ತಾವು ದಾಸರೆಂದೂ, ಅವರೇ ತಮ್ಮ ತನು ಮನ ಧನಕ್ಕೂ ಪ್ರಾಣಕ್ಕೂ ಒಡೆಯರೆಂದೂ-ಮರಳಿ ಮರಳಿ ಮನವರಿಕೆಮಾಡಿಕೊಳ್ಳುತ್ತಿರುವರು.ಶಿವ ಶರಣರ ಊಳಿಗ ಮಾಡಲೇ ತಮ್ಮ ತನುವನ್ನು, ಅವರ ಹಿತಚಿಂತನೆ ಮಾಡಲೇ ತಮ್ಮ ಮನವನ್ನು, ಅವರ ಪರವಹಿಸಿ ವ್ಯಯಮಾಡಲೇ ತಮ್ಮ ಧನವನ್ನು ಮೀಸಲಿಟ್ಟಿರಬೇಕು-ಆಯಾ ಸಮಯಕ್ಕೆ ಆಯಾ ಪದಾರ್ಥವನ್ನು ವಿಳಂಬವಿಲ್ಲದೆ ವಿನಿಯೋಗಿಸಬೇಕು.ವಿಳಂಬವಾದರೆ ಒಡೆಯರಾದ ಶಿವಶರಣರು ತಮಗಿರುವ ಧಾರ್ಮಿಕ ಹಕ್ಕನ್ನು ಚಲಾಯಿಸಿ ಭಕ್ತನ ತನು ಮನ ಧನದ ಮೇಲೆ ದಾಳಿ ಮಾಡುವರು-ಅಂದರೆ ಆ ಭಕ್ತನ ತನುಮನ ಧನಗಳು ಅವನ ಸ್ವಾರ್ಥಕ್ಕೇ ಬಳಕೆಯಾಗದಂತೆ ನಿರೋಧಿಸುವರು. ಹೀಗೆ ಹಿಂದೆಷ್ಟೋ ಸಲ ಎಚ್ಚರಿಸಿದ್ದರೂ ಯಥಾ ರೀತಿ ವಂಚನೆ ಮಾಡುತ್ತಲೇ ಬಂದಿದ್ದ ಆ ಭಕ್ತನನ್ನು ಜರಿದು-ಮುಂದಿನ್ನೊಂದು ಸಲ ಹಾಗೆ ಮಾಡುವೆಯಾ ಎಂದು ಗದರಿಸಿ, ಕೆಳಕ್ಕೆ ಕೆಡವಿ, ನೆಲಕ್ಕೆ ಅವನ ತಲೆಯನ್ನು ಅಪ್ಪಳಿಸುವರು. ಈ ವಿಧವಾಗಿ ಶಿಕ್ಷಿಸುವಲ್ಲಿ ಆ ಭಕ್ತನ ಪ್ರಾಣ ಹೋದರೇನು-ಅವನ ಆ ಪ್ರಾಣಕ್ಕೂ ಒಡೆಯರು ಅವರೇ ಅಲ್ಲವೆ? ಎಂದು ಬಸವಣ್ಣನವರು ಶಿವಶರಣರಿಗೆ ತಮ್ಮ ಸರ್ವಾಂಗಶರಣಾಗತಿಯನ್ನು ಘೋಷಿಸಿ-ಆಜ್ಞಾವರ್ತಿಯಾಗಿ ಅಂಜಿ ನಡೆಯಲು ತಮಗಿರುವ ಇರಾದೆಯನ್ನು ಎಗ್ಗುಸಿಗ್ಗಿಲ್ಲದೆ ವ್ಯಕ್ತಪಡಿಸುತ್ತಿರುವರು. ಇದು ಬಸವಣ್ಣನವರು ಸ್ವತಃ ಅನುಸರಿಸಲು ಸಿದ್ಧವಾಗಿದ್ದ ಸೇವಾವಿಧಾನದ ನಿರೂಪಣೆಯೇ ಹೊರತು ಇತರರಿಗೆ ಹೊರಡಿಸಿದ ನಿರೂಪವಲ್ಲವೆಂಬುದನ್ನು ಗುರಿತಿಸಿಕೊಳ್ಳಬೇಕಾಗಿದೆ. ಬಸವಣ್ಣನವರು ಶಿವಶರಣರ ಮನೆಗಳಲ್ಲಿ ಸೇವಕರಾಗಿದ್ದರೆಂಬಂಥ ಈ ವಿಧವಾದ ವಚನಗಳನ್ನು ಬರೆದಿರುವುದು ವಚನರಚನೆಯ ತಮ್ಮ ಕಾವ್ಯ ಕೌಶಲ್ಯವನ್ನು ಮೆರೆಯಲಿಕ್ಕಾಗಿ ಅಲ್ಲ-ಅವರು ಕಲ್ಯಾಣದಲ್ಲಿ-ಮಹಾ ಶಿವಭಕ್ತರೆಂದು ಪ್ರಖ್ಯಾತರಾಗುವ ಮುನ್ನ-ಬಿಜ್ಜಳನಲ್ಲಿ ಭಂಡಾರಿಯಾಗುವುದಕ್ಕೂ ಮುನ್ನವೇ-ಈ ರೀತಿ ಚಾಕರಿ ಮಾಡಿದ್ದು ವಾಸ್ತವವಿರಬೇಕು. ಇದನ್ನೆಲ್ಲಾ ಪುರಾಣಿಕರು ಬಹುಮಟ್ಟಿಗೆ ಮುಚ್ಚಿ ಹಾಕಿರಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು