MusicCourtesy:Album Name - Vachana Dhare Vol -2 Singer : B.S.Mallikarjuna, B.R.Chaya, Raj Srinath, Raagini Music : M.S. Maruthi Label : Ashwini audio
English Translation 2I do not seek
The Brahma rank;
I do not seek
The Viṣṇu rank;
I do not seek
The Rudra rank.
I seek, O Lord,
No other rank!
Give me of Thy grace
The privilege to know the feet
Of Thy true devotees!
Translated by: L M A Menezes, S M Angadi
Hindi Translationमैं ब्रह्मपद नहीं चाहता,
विष्णुपद नहीं चाहता,
रुद्रपद नहीं चाहता,
मैं और कोई पद नहीं चाहता।
कूडलसंगमदेव, मुझे
तव निज, सद्भक्तों के चरणज्ञ
बनने का महापद प्रदान करो ॥
Translated by: Banakara K Gowdappa
Telugu Translationబ్రహ్మపదవినొల్ల విష్ణుపదవినొల్ల
రుద్రపదవినొల్ల మఱి యే పదవియూ
నే నొల్లనయ్యా, కూడల సంగమదేవా
నీ సద్భక్తుల పాదము జూచు
మహాపదవినే ప్రసాదింపుమయ్యా!
Translated by: Dr. Badala Ramaiah
Marathi Translationनको ब्रम्ह पदवी, नको विष्णू पदवी
नको रुद्र पदवी, क्षुद्र माते
नको अन्य पद, अथवा ती पदवी
सेवा ती घडावी, शरणांची
कूडलसंगमदेवा! भक्त चरण महिमा
कळो यावी आम्हां, तीच थोर
अर्थ – ब्रम्ह, विष्णू, रूद्र या पदव्या मला नको आहेत. किंवा इतर कसल्याही पदपदांची मला इच्छा नाही. मला सदैव तुझ्या सद्भक्तांची सेवा करण्यास जाणीव दे. हीच महापदवी देवून अनुग्रह करावे अशी माझी नम्र विनंती आहे.
Translated by Rajendra Jirobe, Published by V B Patil, Hirabaug, Chembur, Mumbai, 1983ब्रह्मपदवी नको, विष्णूपदवी नको, रुद्रपदवी नको.
मला आणखी कोणतीही पदवी नको.
कूडलसंगमदेवा,
तुमच्या सद्भक्तांचा चरणमहिमा जाणण्याच्या
श्रेष्ठ पदाचा अनुग्रह करावा देवा.
Translated by Shalini Sreeshaila Doddamani
Urdu Translationنہیں ہےیہ میری خواہش کہ میں برہما بنوں
نہ وِشنواوررُدرا ہی بننا چاہتا ہوں
نہیں ہےمجھ کوکسی مرتبے کی چاہ نہیں
مرے حضورمرےدیوا کوڈلا سنگم
عطا ہوایسی نظرجس سےنیک بھگتوں کے
چَرن بھی چھوسکوں،ان کےخصال پہچانوں
Translated by: Hameed Almas
ಶಬ್ದಾರ್ಥಗಳುರುದ್ರ = ;
ಕನ್ನಡ ವ್ಯಾಖ್ಯಾನತತ್ತ್ವಾತೀತನಾದ ಪರಶಿವನು ಲೀಲೆಯಿಂದ ಸೃಷ್ಟ್ಯುನ್ಮುಖವಾದಾಗ ಶಿವ-ಸದಾಶಿವ-ಉಮಾಮಹೇಶ್ವರ ಎಂಬ ಅನುಕ್ರಮದ ಮೂರು ತತ್ತ್ವಗಳಾಗಿ ಅವತರಿಸುತ್ತಾನೆ. ಈ ಉಮಾಮಹೇಶ್ವರನ ಸಹಸ್ರ ಕೋಟ್ಯಂಶದಲ್ಲಿ ರುದ್ರನು, ರುದ್ರನ ಸಹಸ್ರಕೋಟ್ಯಂಶದಲ್ಲಿ ವಿಷ್ಣು, ವಿಷ್ಣುವಿನ ಸಹಸ್ರಕೋಟ್ಯಂಶದಲ್ಲಿ ಬ್ರಹ್ಮನು ಉದಯಿಸುವರು. ಕೊನೆಯವನಾದ ಈ ಬ್ರಹ್ಮನಿಂದಲೇ ಈ ಬ್ರಹ್ಮಾಂಡ ಸೃಷ್ಟಿಯಾಗಿರುವುದು.
ಈ ರುದ್ರ-ವಿಷ್ಣು-ಬ್ರಹ್ಮರು ತ್ರಿಗುಣ ಸ್ವರೂಪರು. ಬಸವಣ್ಣನವರ ದೃಷ್ಟಿಯಿರುವುದು ಗುಣಾತೀತವಾದ ತತ್ತ್ವಾತೀತವಾದ ಪರಶಿವನ ಅಂಶವಾದ ಶಿವಶರಣರ ಸಂಗಸಹವಾಸದ ಕಡೆಗೇ-ಬ್ರಹ್ಮಪದವಿಯ ಕಡೆಗಲ್ಲ, ವಿಷ್ಣುಪದವಿಯ ಕಡೆಗಲ್ಲ, ರುದ್ರಪದವಿಯ ಕಡೆಗೂ ಅಲ್ಲ.
ಬ್ರಹ್ಮ ಮುಂತಾದವರು ಬಂಧನ ರೂಪವಾದ ಪ್ರಾಕೃತ ಸೃಷ್ಟಿಗೆ ಕಾರಣಕರ್ತರಾದರೆ-ಶರಣರು ಸಚ್ಚಿದಾನಂದಸ್ವರೂಪವಾದ ಹೊಚ್ಚಹೊಸದೊಂದು ದೃಷ್ಟಿಗೆ ಕಾರಣಕರ್ತರು. ಆ ಶರಣರ ಈ ದೃಷ್ಟಿಗೆ ತಕ್ಕ-ಒಂದು ನೂತನ ಸೃಷ್ಟಿ ಕ್ರಿಯೆಗೆ ಬಸವಣ್ಣನವರು ತಮ್ಮ ಅಳಿಲು ಸೇವೆಯನ್ನು ಸಲ್ಲಿಸಲು ಹಂಬಲಿಸುತ್ತಿರುವರು.
“(ನಾನು)ಮತ್ತಾವ ಪದವಿಯನೊಲ್ಲೆ”ನೆಂಬ ಮಾತಿನಿಂದ ಅವರು ಶರಣ-ಜಂಗಮ ಪದವಿಗಳಿಗೂ ಆಶೆಪಡರು. ಅವರ ಹಗಲಿರುಳಿನ ಆಶೆ ಎಂದರೆ-ಆ ಶರಣರನ್ನು ಜಂಗಮರನ್ನೂ ಉಪಚರಿಸುವ ಭಕ್ತನಾಗಿರುವುದೊಂದೇ. ಸದ್ಬಕ್ತ : ಶರಣ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.