MusicCourtesy:Vachana Gaanamruta ℗ 2021 Pebble Productions Released on: 2017-11-09 Music Publisher: Pebble Productions Composer: Revayyaa Vasthramatha
English Translation 2I speak the words of pious speech,
I act even as I talk,
I live up to my word in deed:
In your hand are also
The balance and weights:
Should I give underweight
By even a barley-grain,
You'll drown me and arise and go,
O Kūḍala Saṅgama Lord!
Translated by: L M A Menezes, S M Angadi
Hindi Translationभक्ति सुभाषित उक्ति कहूँगा
कथनानुसार आचरण करुँगा
आचरण में वचन का पालन करुँगा
तुला और तुला-नियम तुम्हारे हाथ में है
जौ भर कम हो तो मुझे डुबोकर
चले जाओ कूडलसंगमदेव ॥
Translated by: Banakara K Gowdappa
Tamil Translationபக்தியைக் குறித்து உயர்ந்த கருத்துக்களைக்
கூறுவேன், கூறியபடி ஒழுகுவேன்
சொல்லும், செயலும் ஒருமித்திருக்கும்
மேலே கட்டியுள்ள துலாக்கோல் உம்
கையிலுள்ளது, கூந்தலின் இழை அளவு
குறையுமெனின் என்னை நீ அழுத்தி
அகல்வாய், கூடலசங்கமதேவனே.
Translated by: Smt. Kalyani Venkataraman, Chennai
Marathi Translationभक्ति बोल हे माझे तोंडून
बोले तैसा दाविन चालून
वाणीपरी आचरणी राहून
वाहून घे शरणाला
बोला हो बोला
मजशी तराजूत तोला ||ध्रु||
तोल आपुले हाती देवून
पाहत राहिन मी सहजेतून
रतीभरही फरका पाहून
कष्ट होई संगाला
बोला हो बोला
मजशि तराजूत तोला ||धृ||
कूडलसंगमदेव मजला
खुशाल बुडवा वेळ कशाला ?
यावीण मागे नच तुम्हाला
वाणी आचरणी फरक दिसला
बोला हो बोला
मजशि तराजूत तोला ||ध्रु||
अर्थ - भक्तिपूर्वक मृदु संभाषण सदैव माझ्या तोंडून बाहेर येईल. जैसे बोलेन तसेच चालेन. माझ्या वाणीत आणि आचरणात तसूभरही फरक पडू देणार नाही. त्यात सदैव समतोल साधीत राहीन. जनहो वाटल्यास तुम्ही आपल्या हाती तराजू घेवून, माझे बोल तोलून पहा. जर त्यात रतीभरही फरक आढळून आल्यास मला हवी ती शिक्षा द्या. मी आपण दिलेल्या शिक्षेच सहर्ष स्वागत करीन.
Translated by Rajendra Jirobe, Published by V B Patil, Hirabaug, Chembur, Mumbai, 1983भक्तीपूर्ण मधुरवाणी बोलेन, बोलल्याप्रमाणे वागेन,
बोले तैसा चाले असेच वर्तन ठेवीन.
जोखण्याचा तराजू तुमच्या हाती आहे.
त्यात एक गुंज कमी पडला तरी मला
बुडवून तू उठून जा कूडलसंगमदेवा.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನಬಸವಣ್ಣನವರು ಈ ವಚನದಲ್ಲಿ ಒಂದು ನಿಷ್ಠುರವಾದ ಕಾರ್ಯಪ್ರಣಾಳಿಕೆಯನ್ನು ಹಾಕಿಕೊಂಡು ಅದರಂತೆ ಶತಾಯುಗತಾಯು ನಡೆಯುವಂತೆಯೂ-ನಡೆಯದಿದ್ದರೆ ತಮ್ಮನ್ನು ದೇವರು ತಿರಸ್ಕರಿಸಬೇಕೆಂದೂ-ಆ ದೇವರ ಮುಂದೆಯೇ ಪ್ರತಿಜ್ಞೆ ಮಾಡುತ್ತಿರುವರು :
ಭಕ್ತಿಯನ್ನು ಕುರಿತು ಒಳ್ಳೆಯದನ್ನು ನುಡಿಯುತ್ತೇನೆ-ನುಡಿದಂತೆ ನಡೆದು ಆ ನಡೆಯಲ್ಲಿ ನಾನು ನುಡಿದಿದ್ದನ್ನೆಲ್ಲ ನೆರವೇರಿಸುತ್ತೇನೆ. ಶಿವನೇ, ತಕ್ಕಡಿ ಮತ್ತು ತೂಕದ ಬಟ್ಟು ಎರಡೂ ನಿನ್ನ ಕೈಯಲ್ಲಿ-ನನ್ನ ಮಾತೆಷ್ಟು ಕೃತಿಯೆಷ್ಟು ಎಂದು ತೂಗಿ ನೋಡು. ನಾನು ಮಾಡಿದ ಕೃತಿ ಆಡಿದ ಮಾತಿಗಿಂತ ಒಂದು ಚೂರು ಕಡಿಮೆಯಾದರೂ ನನ್ನನ್ನು ಈ ಸಂಸಾರಸಾಗರದ ನಡುನೀರಲ್ಲೇ ಮುಳುಗಿಸಿಬಿಟ್ಟು ನೀನು ಹೋರಟುಹೋಗು-ಎನ್ನುತ್ತಿದ್ದಾರೆ ಬಸವಣ್ಣನವರು.
ಇದರ ತಾತ್ಪರ್ಯವೆಂದರೆ-ಬಸವಣ್ಣನವರು ಧರ್ಮಕ್ಕನುಸಾರವಾಗಿ ನಿರ್ಣಾಯಕವಾಗಿ ಮಾತುಗಳನ್ನಾಡುತ್ತಿದ್ದರು-ಅದಕ್ಕನುಸಾರವಾಗಿ ಮಾಡಬೇಕಾದ್ದನ್ನು ನಿಷ್ಕೃಷ್ಟವಾಗಿ ಮಾಡಿ ಮುಗಿಸುತ್ತಿದ್ದರು. ಅವರು ಈ ವಾಕ್-ಕಾರ್ಯ ಸಮಗಮನ ಸೂತ್ರವನ್ನು ನಿತ್ಯಪ್ರತಿಜ್ಞೆಯಾಗಿ ಕೈಕೊಂಡಿದ್ದರು.
ನುಡಿದರೆ ಮುತ್ತಿನಹಾರದಂತಿರಬೇಕು ಎಂಬ ಅವರ 805ನೇ ವಚನವನ್ನು ನೋಡಿ. ಭಕ್ತಿ ಸಂಭಾಷಣೆ : ಭಕ್ತಿಯನ್ನು ಕುರಿತ ಸಲ್ಲಾಪ. ತ್ರಾಸುಕಟ್ಟಳೆ ; ತಕ್ಕಡಿ ಮತ್ತು ತೂಕದ ಕಲ್ಲು. ಜವೆ<ಯವೆ : ಗೋಧಿಯ ಕಾಳು.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.