ಆಡಿ ಕಾಲು ದಣಿಯವು, ನೋಡಿ ಕಣ್ಣು ದಣಿಯವು,
ಹಾಡಿ ನಾಲಿಗೆ ದಣಿಯದು: ಇನ್ನೇವೆನಿನ್ನೇವೆ?
ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೆವೆ?
ಕೂಡಲಸಂಗಮದೇವ ಕೇಳಯ್ಯಾ,
ನಿಮ್ಮುದರವ ಬಗಿದಾನು ಹೋಗುವ ಭರವೆನಗೆ.
MusicCourtesy:Provided to YouTube by Super Cassettes Industries Limited Manave Ninna Jananada, Bellava Thinda Kodagadanthe · Puttru Narsinha Nayak Vachana Vaibhava ℗ Super Cassettes Industries Limited Released on: 2001-02-09 Auto-generated by YouTube.
English Translation 2Feet will dance,
eyes will see,
tongue will sing,
and not find content.
What else, what else
shall I do?
I worship with my hands,
the heart is not content.
What else shall I do?
Listen, my lord,
it isn't enough.
I have it in me
to cleave thy belly
and enter thee
O lord of the meeting rivers !
Translated by: A K Ramanujan Book Name: Speaking Of Siva Publisher: Penguin Books ----------------------------------
My legs tire not with dancing,
My eyes tire not with gazing,
My tongue tires not with singing:
What else, what else?
My heart tires not with worshipping
Thee with full hands:
What else, what else?
Hark unto me, Kūḍala Saṅgama Lord,
What I'd love most to do
Is burst Thy belly and enter it!
Translated by: L M A Menezes, S M Angadi
Hindi Translationनृत्य कर पैर नहीं थकते, दर्शन कर नेत्र नहीं थकते,
गाकर जिह्ना नहीं थकती, क्या करूँ क्या करूँ?
स्वहस्त से पूजा कर मन नहीं थकता, क्या करूँ क्या करूँ?
सुनो कूडलसंगमदेव तव उदर चीरकर
समा जाने की आतुरता है मुझे ॥
Translated by: Banakara K Gowdappa
Telugu Translationఆడి కాళ్లు దనీయవు; చూచి కన్నులు దనియవు
పాడి నాలుక దనియదు; ఏమందు నేమందు?
నిను చేతులారా పూజించి మది దనియదు.
ఏమందు నేమందునయ్యా, సంగయ్యా
నీ పొట్ట చీల్చికొనిపోవుచుండె నా సంబరము వినవయ్యా!
Translated by: Dr. Badala Ramaiah
Tamil Translationஆடி கால் தணியாது, நோக்கிக் கண் தணியாது
பாடி நாக்கு தணியாது. என் செய்வேன், என் செய்வேன்
நான் உம்மைக் கை நிறைந்து பூசித்து
மனம் நிறைய இன்னும் என் செய்வேன்?
கூடல சங்கம தேவனே, கேளாய் ஐயனே
உம் வயிற்றைக் கிழித்து உட்புகும்
வேகம் என்னுடையதையனே.
Translated by: Smt. Kalyani Venkataraman, Chennai
Marathi Translationखेळता खेळता, थकती न पाय
नयना अपाय, थकवा न ये
गीत गाता जिव्हे , कधी न ये थकवा
काय करु देवा ऐसे झाले
आनावर झाली, माझी ही इंद्रिये
मन मिलनीये, चैतन्य ते
आपुल्या हाताने, तुझी करी पूजा
तल्लीन सहज, न ये थकवा
कूडलसंगमदेव ! रिघो तुझे पोटी
उल्हासाची दाटी, थोर झाली
अर्थ - हे कूडलसंगमदेवा (परशिवा) तुझ्या स्मरणात बेभान होऊन कितीही खेळत राहिलो तरी माझे पाय थकले नाहीत. तुला पाहून माझे नयन थकले नाहीत. तुझे गुणगाण करुन माझी जिव्हा थकली नाही. तुझे स्मरण करुन माझे मन थकले नाही. तुझी पूजा करुन माझे हात थकले नाहीत. आणि आतील उत्साह देखील कमी झाला नाही. आता यापुढे काय करु? काहीच सुचेनासे झाले आहे. हे कूडलसंगमदेवा! (परशिवा) तुझ्या पोटात शिरून राहावे एवढा अदम्य उत्साह माझ्यात निर्माण झाला आहे. हे पाहून माझा मीच धन्य झालो असे वाटते.
Translated by Rajendra Jirobe, Published by V B Patil, Hirabaug, Chembur, Mumbai, 1983खेळून पाय दमत नाही, पाहून नयन थकत नाही.
गाऊन जीभ थकत नाही,
आता काय करु, काय करु?
मी तुमची आपल्या हाताने पूजा करुन मन थकत नाही.
आता काय करु? आता काय करु?
कूडलसंगमदेवा ऐका,
आपले उदर चिरुन घुसून जाण्याचा उत्साह माझ्यात आहे.
Translated by Shalini Sreeshaila Doddamani
ಶಬ್ದಾರ್ಥಗಳುಉದರ = ; ದಣಿವು = ; ಭರ = ; ಹೊಗು = ;
ಕನ್ನಡ ವ್ಯಾಖ್ಯಾನಬಸವಣ್ಣನವರು ಶಿವಪೂಜೆಗೆ ಮುನ್ನವೋ ಆಮೇಲೆಯೋ ಅಥವಾ ಆಗುವಾಗಲೇಯೋ ಕುಣಿಯುತ್ತಿದ್ದರು, ಹಾಡುತ್ತಿದ್ದರು, ಕುಣಿಯುತ್ತ ಹಾಡುತ್ತಿದ್ದರು. ಬಹುಶಃ ಲಿಂಗವನ್ನು ಕೈಯಲ್ಲಿಟ್ಟುಕೊಂಡೇ ಅದರತ್ತ ದೃಷ್ಟಿಯಾಡಿಸುತ್ತ ಹಾಡುತ್ತ ಕುಣಿಯುತ್ತಿದ್ದರು. ಆದರೆ ಅವರಿಗೆ ಅದೇನು ಭಕ್ತಿಯುನ್ಮಾದವೋ ಶಿವತನ್ಮಯವೋ ಕುಣಿದಷ್ಟೂ ಕಾಲು ಚಿಗಿಯುತ್ತಿತ್ತು. ಹಾಡಿದಷ್ಟೂ ನಾಲಗೆ ನನೆಕೊನೆವೋಗುತ್ತಿತ್ತು. ಕುಣಿದು ಮೈದಣಿಯದು, ಪೂಜಿಸಿ ಮನದಣಿಯದು-ಅವರ ಭಕ್ತಿಗೆ ಮೆಚ್ಚಿ, ಶಿವ ಪ್ರತ್ಯಕ್ಷವಾಗಿ-ಬಾ ನನ್ನ ಮುದ್ದು ಕಂದಾ ಎಂದು ಬಸವಣ್ಣನವರನ್ನು ಬಿಗಿಯಪ್ಪಿದನೆನ್ನಿ-ಅಷ್ಟರಿಂದಲೂ ತೃಪ್ತಿಯಿಲ್ಲ ಬಸವಣ್ಣನವರಿಗೆ-ಶಿವನ ಉದರವನ್ನೇ ಸೀಳಿಕೊಂಡು ಒಳಹೋಗಿ ಐಕ್ಯವಾಗುವ ಒಲುಮೆಯಾಸರ ಶಿವನ ಮೇಲವರಿಗೆ. ಇಂದ್ರಿಯಗಹ್ವರಗಳ ಒಳನುಗ್ಗಿ ಆಗುವ ಈ ಅತೀಂದ್ರಿಯ ಐಕ್ಯವೇ ಬಸವಣ್ಣನವರ ಭಕ್ತಿಯ ವಿಶ್ರಾಮಧಾಮ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.