MusicCourtesy:Taala Maana Sarasa Album/Movie: Vachana Gaanambudhi Singer: Ravindra Soragavi Music Director: Devendra Kumar Mudhol Lyricist: Basavanna Music Label : Lahari Music
English Translation 2I don't know anything like time-beats and metre
nor the arithmetic of strings and drums;
I don't know the count of iamb and dactyl.
My lord of the meeting rivers,
as nothing will hurt you
I'll sing as I love.
Translated by: A K Ramanujan Book Name: Speaking Of Siva Publisher: Penguin Books ----------------------------------
I do not know the prosody
Of beat or measure, nor the count
Of rhythm and of tone;
I do not know
This kind of feet or that!
O Kūḍala Saṅgama Lord,
Since Thou art past offence,
I sing as love commands the tune!
Translated by: L M A Menezes, S M Angadi
Hindi Translationताल मान की गिनती मैं नहीं जानता:
वाद्य-वादन की विद्या नहीं जानता;
अमृतगण, देवगण नहीं जानता
कूडलसंगमदेव, तुम हानि के परे हो
अतः मैं मनमाना गाता हूँ ॥
Translated by: Banakara K Gowdappa
Telugu Translationతాళమానముల గతి యేమో తెలియ!
ఓజభజావణుల లెక్క యెటులో తెలియ!
అమృత దేవగణములేవో తెలియ!
దేవ! నీకు కీడు కల్గనిరీతి నే
వలచినట్లు పాడుకొందునయ్య.
Translated by: Dr. Badala Ramaiah
Tamil Translationதாள அளவுகளின் சமானத்தை அறியேன்
தோல் கருவிகளை இசைக்கும் முறைகளை அறியேன்
அமுதகணம், தேவ கணங்களை அறியேன்
கூடல சங்கமதேவனே, உனக்குக் கேடற்ற
முறையில் நான் விரும்பியவாறு பாடுவேன்.
Translated by: Smt. Kalyani Venkataraman, Chennai
Marathi Translationलय तालातील मधुरता जाणत नाही.
ढोल-मृदुंगाचे बोल जाणत नाही.
अमृतगण, देवगण जाणत नाही.
कूडलसंगा, तुमची हानी होणार नाही
असे मनाला येईल तसे गातो.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನಛಂದಶ್ಯಾಸ್ತ್ರ ಮತ್ತು ಸಂಗೀತಶಾಸ್ತ್ರಗಳಿಗೆ ವಿರುದ್ಧವಾಗಿ ಪ್ರಬಂಧಗಳನ್ನು ಕಟ್ಟಿ ಹಾಡಿದರೆ-ಹಾಡಿಸಿಕೊಂಡವನಿಗೆ ಕೇಡಾಗುವುದೆಂಬುದೊಂದು ನಂಬಿಕೆ-ಶಿವನಿಗೆ ಯಾವ ಕೇಡೂ ತಟ್ಟದಾಗಿ-ತಮ್ಮ ಭಕ್ತಿ ಭಾವಕ್ಕನುಗುಣವಾಗಿ ವಚನ(ಮತ್ತು ಹಾಡು)ಗಳನ್ನು ಕಟ್ಟಿ ತಮಗೆ ಪ್ರಿಯವಾದಂತೆ ಹಾಡುತ್ತಿರುವೆನೆನ್ನುವರು ಬಸವಣ್ಣನವರು ಶರಣ ಸಮ್ಮೇಳನದಲ್ಲಿ. ಗೇಯಕೃತಿಗಳಿಗೆ ರಾಗ ತಾಳ(ವಾದ್ಯ)ಗಳು ಅವಶ್ಯಕವೆಂಬುದು ನಿಜವಾದರೂ-ಅವೆಲ್ಲಕ್ಕಿಂತಲೂ “ಭಾವ” ಅಥವಾ “ಮನೋಧರ್ಮ” ಅತಿಶಯವಾದುದೆಂಬುದನ್ನು ಎಲ್ಲ ಸಂಗೀತ ವಿದ್ವಾಂಸರೂ ಒಪ್ಪಿರುವರೆಂಬುದನ್ನು ಮರೆಯಬಾರದು.
ವಿ: ಬಸವಣ್ಣ ಮುಂತಾದ ಶರಣರ ವಚನಗಳನ್ನು ಅನುಕರಿಸಿ ಮುಂದೆ ಹರಿದಾಸರು ಉಗಾಭೋಗಗಳನ್ನು ಬರೆದರೆಂಬುದು ಪ್ರಸಿದ್ಧವೇ ಇದೆ-ನೋಡಿ ಶಿವದಾಸ ಗೀತಾಂಜಲಿ, ಪೀಠಿಕೆ ಪುಟ 105. ಈ ಉಗಾಭೋಗ(ವಚನ)ಗಳು ತಾಳಪ್ರಧಾನವಲ್ಲ ರಾಗಪ್ರಧಾನವೆಂದು ವಿದ್ವಾಂಸರು ಅಭಿಪ್ರಾಯಪಡುವರು-ನೋಡಿ ಕರ್ನಾಟಕ ಸಂಗೀತವೂ ದಾಸಕೂಟವೂ-ಹುಲಗೂರು ಕೃಷ್ಣಾಚಾರ್ಯರು, ಪುಟ 91-96.
ತಾಳಮಾನ-ಓಜೆಬಜಾವಣೆಯ ಲೆಕ್ಕ : ಗ್ರಾಮವರ್ಜ್ಯಗಳನ್ನು ಪರೀಕ್ಷಿಸಿ, ಜನ್ಮಜನಕ(ರಾಗ)ಗಳನ್ನು ಗುರುತಿಸಿಕೊಂಡು, ಚತುರ್ವಿಧ ಸ್ವರಗಳನ್ನು ಪರುಠವಿಸಿ, ರೀತಿತ್ರಯಗಳನ್ನು ಕೂಡಿಸಿಕೊಂಡು ಚತುರ್ವಿಧ ದಂಡಿಯಲ್ಲಿ ತಾಳಹೀನ ಮುಂತಾದ ಹದಿನೈದು ಸ್ವರದೋಷಗಳಿಲ್ಲದೆ ಹಾಡಬೇಕೆನ್ನುವ ಸಂದರ್ಭದಲ್ಲಿ-“ಆಳಾಪ-ಬಜಾವಣೆ ಛಾಯೆದಪ್ಪದೆ ನಾದಾವತಿ-ನಂದಾವತಿ-ಭದ್ರಾವತಿ-ವಿನಯಾವತಿ-ಭೋಗಾವತಿ ಎಂಬೈದು ತೆರದಿಂದಳಾಪಿಸುವ ಪದಕ್ರಮ”ವನ್ನು ಹಾಡುಗಾರನು ಗಮನಿಸಬೇಕೆಂದು ನಿಜಗುಣ ಶಿವಯೋಗಿ ಹೇಳಿದ್ದಾರೆ-ನೋಡಿ ವಿವೇಕಚಿಂತಾಮಣಿ 4ನೇ ಪರಿಚ್ಛೇದ.
ದೇವಗಣ: “ಮೂರಕ್ಕರ | ಬಿಡದತಿ ಲಘುವಾಗೆ [ನಗಣ] ದೇವಗಣ ಸರ್ವಜಯಂ” (ಕವಿಜಿಹ್ವಾಬಂಧನ 1-25). “ಭಾವಿಸೆ ಪದ ಪದ್ಯಂಗಳಿ 1 ಗಾವಗ ಮೊದಲಲ್ಲಿ ಗಣದೊಳದುಯಿದುಯೆನ್ನದೆ | ದೇವಗಣವಿಟ್ಟು ಮುಂದಕ್ಕಾವಗಣಂ ಬಂದೊಡುತ್ತಮಂ” (ಅದೇ 1-62) ಬಸವಣ್ಣನವರ ಕಾಲಕ್ಕೂ ಈ ಗಣಗಳ ಶುಭಾಶುಭಗಳ ಪುಕಾರು ಕೃತಿಕರ್ತರನ್ನು ಹಿಂತುಳಿಯುವಂತೆ ಮಾಡಿದೆ. ಈ ಮುಂತಾದ ವಿಚಾರವನ್ನು ವಿವರವಾಗಿ ತಿಳಿಯಬಯಸುವವರು ನೋಡಿ ಡಾ. ಎಲ್. ಬಸವರಾಜು ಅವರ ಕನ್ನಡ ಛಂಧಸ್ಸಂಪುಟ, ಪುಟ 145-156.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.