•  
  •  
  •  
  •  
Index   ವಚನ - 516    Search  
 
ಭಕ್ತನ ಐಕ್ಯಸ್ಥಲ - ಅನುಭಾವ
ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ! ಆ ಕೂಸು ಬೀದಿಯಲ್ಲಿ ಒತ್ತೆಗೊಳ್ಳಲು ನಿಂದಿತ್ತಯ್ಯಾ! ಇದರ ಸಂಗಸುಖದನುಭಾವವನು ಕೂಡಲಸಂಗಮದೇವ ತಾನೇ ಬಲ್ಲ!
Transliteration ಇಂದು ಹುಟ್ಟಿದ ಕೂಸಿಂಗೆ ಇಂದೆ ಜವ್ವನವಾಯಿತ್ತಯ್ಯಾ! ಆ ಕೂಸು ಬೀದಿಯಲ್ಲಿ ಒತ್ತೆಗೊಳ್ಳಲು ನಿಂದಿತ್ತಯ್ಯಾ! ಇದರ ಸಂಗಸುಖದನುಭಾವವನು ಕೂಡಲಸಂಗಮದೇವ ತಾನೇ ಬಲ್ಲ!
Manuscript
Music Courtesy:
English Translation 2 Lo, that a baby born today Should just today have grown to youth! That baby now has taken its stand Upon the street, soliciting! But Lord Kūḍala Saṅgama alone can tell How happy the experience of their love! Translated by: L M A Menezes, S M Angadi
Hindi Translation आज ही जन्मे शिशु को आज ही यौवन प्राप्त हुआ वह शिशु पथ पर वेश्या-शुल्क लेने खडी थी इसका संगसुखानुभाव कूडलसंगमदेव स्वयं जानता है ॥ Translated by: Banakara K Gowdappa
Telugu Translation ఇప్పుడు పుట్టిన బిడ్డకు ఇప్పటి కప్పుడే వయసు వచ్చి విటద్రవ్యమునకై వీథి నిలచె దాని యాసంగ సౌఖ్యానుభూతి సంగమదేవుడే తెలియునయ్య! Translated by: Dr. Badala Ramaiah
Tamil Translation இன்று பிறந்த குழந்தை இன்றே ஞானம் எய்தியது அக்குழந்தை வீதியிலே செல்வம் பெறுவதற்கு நின்று கொண்டிருந்தது ஐயனே. இந்த பேரின்ப நிலையின் உணர்வை கூடல சங்கம தேவனே அறிவான். Translated by: Smt. Kalyani Venkataraman, Chennai
Marathi Translation आज जन्मलेल्या शिशुला आजच यौवनावस्था प्राप्त झाली. तो शिशु बाजारात प्रेमव्यवहार करु लागला प्रभू, संगसुखाचा अनुभाव कूडलसंगम जाणे. Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ; ಒತ್ತೆ = ; ಜವ್ವನ = ; ಸಂಗ = ;
ಕನ್ನಡ ವ್ಯಾಖ್ಯಾನ ಇವತ್ತು ಹುಟ್ಟಿದ ಹೆಣ್ಣುಮಗುವಿಗೆ ಇವತ್ತೇ ಯೌವನವಾಗಿದೆ. ಆಗಲೇ ಅದು ಬೀದಿಯಲ್ಲಿ ನಿಂತು ಕಂಡವರ ಕಡೆ ಕಣ್ಣು ಹೊಡೆಯತೊಡಗಿದೆ. ಆ ಚೆಲುವಬಾಲೆಯ ಸಂಗಸುಖವನ್ನು ಶಿವನೇ ಬಲ್ಲ-ಎಂಬುದು ವಚನದ ಸರಳ ವಿವರ. ಇದರ ಧಾಟಿಯಿಂದ-ವೇಶ್ಯಾವಾಟಿಕೆಯಲ್ಲಿ ವಿಟರ ಅನ್ವೇಷಣೆಯಲ್ಲಿ ತೊಡಗಿರುವ ಒಬ್ಬ ಬಾಲಮುಗ್ದೆಯ ಚಿತ್ರ ಥಟ್ಟನೆ ಮೂಡುವುದಾದರೂ-ಇಂದೇ ಹುಟ್ಟಿದ ಕೂಸಿಂಗೆ ಇಂದೇ ಜವ್ವನವಾಯಿತ್ತು ಎಂಬ ಅಘಟಿತ ಘಟನೆಯಿಂದ ಅದರ ಸುತ್ತಲೂ ಅಲೌಕಿಕ ವಾತವರಣವೊಂದು ಏರ್ಪಟ್ಟು ಇಂದು ಎಂದರೆ ಈ ಜನ್ಮವೆಂದೂ, ಕೂಸು ಎಂದರೆ ಸಾಧಕನೆಂದೂ, ಜವ್ವನವೆಂದರೆ ವಿವೇಕೋದಯವೆಂದೂ, ಬೀದಿಯೆಂದರೆ ಶಿವಧರ್ಮ ಮಾರ್ಗವೆಂದೂ, ಒತ್ತೆ ಎಂದರೆ ಶಿವದೀಕ್ಷೆಯೆಂದೂ, ಅಂಗಸುಖವೆಂದರೆ ಲಿಂಗಾಂಗ ಸಾಮರಸ್ಯವೆಂದೂ, ಅನುಭಾವವೆಂದರೆ ದಿವ್ಯಸ್ಥಿತಿಯೆಂದೂ ಥಟ್ಟನೆ ಮಾರ್ಪಟ್ಟು ಹೊಳೆದು-ಶಿವಕಾಮಿಯಾದ ಭಕ್ತನೊಬ್ಬನ ವರ್ಣಚಿತ್ರವಾಗಿ ಮಾರ್ಪಟ್ಟು ಕಂಗೊಳಿಸುವುದು. ಒತ್ತೆಗೊಳ್ ಎಂದರೆ ಸೂಳೆಯೊಬ್ಬಳು ವಿಟನಿಂದ ಮುಂಗಡವನ್ನು ಸ್ವೀಕರಿಸಿ ಅಗಲಿರುವ ಸಂಗಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದ ಜವ್ವನ<ಯೌವ್ವನ. “ಇದರಂಗಸುಖದನು ಭಾವವನು ಕೂಡಲ ಸಂಗಮದೇವ ತಾನೇ ಬಲ್ಲ”ನೆಂದರೆ ಬ್ರಹ್ಮಾನಂದವು ಅನಿರ್ವಚನೀಯವೆಂದರ್ಥ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು