•  
  •  
  •  
  •  
Index   ವಚನ - 528    Search  
 
ಮಾಹೇಶ್ವರನ ಜ್ಞಾನಿಸ್ಥಲ - ಪುರಾಣ
ಶ್ರುತಿಗಗಮ್ಯ, ದ್ವಾದಶಾಂತ್ಯನಪ್ರತಿಮಮಹಿಮಂಗೆ ಪ್ರತಿಯುಂಟೆ? `ಸೋಮಃ ಪವತೇ' ಎಂಬ ಶ್ರುತಿಯನರಿತು, `ಶಿವನೇಕೋದೇವ, ರುದ್ರನದ್ವಿತೀಯ'ನೆಂದು ನಂಬುವುದು, ಕಾಣಿರಣ್ಣಾ. ʼಕೂಡಲಸಂಗಮದೇವನಲ್ಲದೆ ಇಲ್ಲʼವೆಂದೆತ್ತಿದೆ. ಬಿರುದ, ಜಗವೆಲ್ಲರಿಯಲು.
Transliteration Śrutigagamya, dvādaśāntyanapratimamahimaṅge pratiyuṇṭe? `Sōmaḥ pavatē' emba śrutiyanaritu, `śivanēkōdēva, rudranadvitīya'nendu nambuvudu, kāṇiraṇṇā. ʼkūḍalasaṅgamadēvanallade illaʼvendittide. Biruda, jagavellariyalu.
Manuscript
English Translation 2 Is there a parallel to the majesty, Peerless, above the twelve, beyond The understanding of the holy books? They know that 'Uma's husband purifies'; Mark you, My brothers: you should believe That 'Śiva' is the only God, Rudra without a second.' I sing Hosannas that the world may know: 'Tere is no God But Kūḍala Saṅgama'. Translated by: L M A Menezes, S M Angadi
Hindi Translation जो श्रुति को अगम्य और द्वादशादित्यों से अधिक है उस अप्रतिम महिमावान सम कोई है? ’सोमः पवते’ यह श्रुति जानकर ‘शिव एको देवः, रुद्र अद्वितीय’ भाई इस पर विश्वास रखो वेद कहता है, कूडलसंगमदेव के सिवा और कोई नहीं ॥ Translated by: Banakara K Gowdappa
Telugu Translation శ్రుతి కగమ్యుడు; ద్వాదశాంత్యుడు అప్రతిమ మహిమునకు ప్రతియున్నదే ‘‘సోమః పవతే’’ యను శ్రుతి తెలిపె శివుడొకడే దేవుడు; రుద్రుడద్వితీయు డని నమ్మదగునయ్యాకూడల సంగమదేవుడు గాక వేరు లేడను బిరుదుండె జగమెల్ల తెలియ Translated by: Dr. Badala Ramaiah
Tamil Translation சுருதிகள் அறியாத, பன்னிரு ஆதித்யர்களுடன் ஒப்பிடவியலா மகிமையுடையவனுக்கு ஈடு உண்டோ? “ஸோம: பவதே” என்னும் சுருதியை அறிந்து சிவ ஏகோ தேவ: ருத்ரோ ந த்விதீய:” என்று நம்புமின், காணீர் கூடல சங்கம தேவனின்றி இல்லை என்று உலகெலாம் அறிய புகழை விளங்கச் செய்தேன் Translated by: Smt. Kalyani Venkataraman, Chennai
Marathi Translation श्रृतीला अगम्य, अप्रतिम, महिमावान, द्वादशादित्यासारखे कोण आहे? `सोमः पवते` या श्रुतीनुसार ` शिव एको देव रुद्र अद्वितीय` समजून विश्वास ठेवला पाहिजे. कूडलसंगमदेवाविना दुसरा कोणता देव जगात नाही. Translated by Shalini Sreeshaila Doddamani
ಶಬ್ದಾರ್ಥಗಳು ಅಗಮ್ಯ = ತಿಳಿಯಲಿಕ್ಕೆ ಬಾರದ; ಅಪ್ರತಿಮ = ಸಾಟಿ ಇಲ್ಲದ; ಆದಿತ್ಯ = ರವಿ, ಸೂರ್ಯ; ಜಗ = ; ದ್ವಾದಶ = ; ಪವತೆ = ; ಪ್ರತಿ = ; ಬಿರಿದ = ; ಮಹಿಮ = ; ರುದ್ರ = ; ಶ್ರುತಿ = ; ಸೋಮ: = ;
ಕನ್ನಡ ವ್ಯಾಖ್ಯಾನ ಈ ವಚನದಲ್ಲಿ ಪರಶಿವನ ತಾತ್ತ್ವಿಕಪಾರಮ್ಯವನ್ನು ನಿರೂಪಿಸಲಾಗಿದೆ. ತತ್ತ್ವಗಳು(ಷಟ್ತ್ರಿಂಶತ್) ಮೂವತ್ತಾರು. ಅವುಗಳಲ್ಲಿ ಮೊದಲನೆಯದು ಶಿವತತ್ತ್ವ-ಇದು ನಿಷ್ಕಳ. ಈ ಶಿವತತ್ತ್ವದಿಂದ ಹೊಮ್ಮಿದ ಸದಾಶಿವತತ್ತ್ವವು ಶಿವಸಾದಾಖ್ಯ ಮುಂತಾದ ಐದು ಸಾದಾಖ್ಯಗಳನ್ನು, ಶಾಂತ್ಯತೀತ ಮುಂತಾದ ಐದು ಕಲೆಗಳನ್ನು ಒಳಗೊಂಡಿರುವುದು. ಈ ಸದಾಶಿವತತ್ತ್ವದಶಕವನ್ನು ವಿದ್ಯಾತತ್ತ್ವ ಎಂದು ಕರೆಯುವರು-ಇವು ಸಕಳನಿಷ್ಕಳ. ಈ ಸದಾಶಿವತತ್ತ್ವದಿಂದ ಹೊಮ್ಮಿದ(ಉಮಾ)ಮಾಹೇಶ್ವರತತ್ತ್ವವು ಆಕಾಶಾದಿ ಐದು ಭೂತಗಳನ್ನೂ, ಶ್ರೋತ್ರಾದಿ ಐದು ಜ್ಞಾನೇಂದ್ರಿಯಗಳನ್ನು, ಶಬ್ದಾದಿ ಐದು ವಿಷಯ(ತನ್ಮಾತ್ರ)ಗಳನ್ನು, ಮನ-ಚಿತ್ತ-ಬುದ್ಧಿ-ಅಹಂಕಾರವೆಂಬ ನಾಲ್ಕು ಅಂತಃಕರಣಗಳನ್ನು-ಮತ್ತೆ ಜೀವಾತ್ಮ ಒಂದನ್ನು-ಒಟ್ಟು ಇಪ್ಪತ್ತೈದು(ಪಂಚವಿಂಶತಿ)ತತ್ತ್ವಗಳನ್ನು ಒಳಗೊಂಡಿರುವುದು. ಈ ಪಂಚವಿಂಶತಿ ತತ್ತ್ವಗಳನ್ನು ಆತ್ಮತತ್ತ್ವವೆಂದು ಕರೆಯುವರು- ಇದು ಸಕಳ. ಷಟ್ತ್ರಿಂ ಶತ್ ತತ್ತ್ವಗಳಲ್ಲಿ ಈ ಸಕಳವಾದ ಪಂಚವಿಂಶತಿ ತತ್ತ್ವಗಳನ್ನು ಬಿಟ್ಟು ಉಳಿದ ಹನ್ನೊಂದು (ಪಂಚಸಾದಾಖ್ಯ+ಪಂಚಕಲೆ+ಶಿವ) ತತ್ತ್ವಗಳಿಗೆ ಅತೀತವೂ ಪರಾತ್ಪರವೂ ಆದ ಪರಶಿವ ಸಚ್ಚಿದಾನಂದವು ಹನ್ನೆರಡನೆಯದಾಗುವುದು. ಅದನ್ನೇ “ದ್ವಾದಶಾಂತ್ಯ” ಎಂದು ಈ ವಚನದಲ್ಲಿ ನಿರ್ದೇಶಿಸಲಾಗಿದೆ. ಸೃಷ್ಟಿಗೆಲ್ಲಾ ಪರಶಿವನೇ ಮೂಲಾಧಾರನೆಂಬ ಮಾತನ್ನು-“ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾಃ” ಎಂಬ ಋಗ್ವೇದೋಲ್ಲೇಖದಿಂದಲೂ, “ಏಕೋ ಹಿ ರುದ್ರೋ ನ ದ್ವಿತೀಯಾಯ ತಸ್ಥುರ್ಯ ಇಮಾಲ್ಲೋಕಾನೀಶತ ಈಶನೀಭಿಃ | ಪ್ರತ್ಯಙ್ ಜನಾಸ್ತಿಷ್ಠತಿ ಸಂಚುಕೋಚಾಂತಕಾಲೇ ಸಂಸೃಜ್ಯ ವಿಶ್ವಾಭುವನಾನಿ ಗೋಪಾಃ”(ಶ್ವೇತಾಶ್ವತರ 3-2) ಎಂಬ ಉಪನಿಷದ್ವಾಕ್ಯದಿಂದಲೂ ಸಮರ್ಥಿಸುತ್ತಿರುವರು ಬಸವಣ್ಣನವರು. ಈ ರೀತಿಯ ನೂರು ಉಲ್ಲೇಖಗಳಿಂದಲೂ ಪರಶಿವನ ಪೂರ್ಣದರ್ಶನವಾಗುವುದಿಲ್ಲವಾದ್ದರಿಂದ-ಸಂಪೂರ್ಣ ನಂಬಬೇಕೆಂದೂ-ತಾವು ನಂಬಿ ಎತ್ತಿಹಿಡಿದಿರುವ ಶಿವನ ಬಿರುದನ್ನು ಜನರೂ ನಂಬಬೇಕೆಂದೂ-ಆ ಶಿವನಿಗಿಂತ ಅನ್ಯವಾದ ಮಹಾದೈವವಿನ್ನೊಂದಿಲ್ಲವೆಂದೂ ಬಸವಣ್ಣನವರು ಉದ್ಘೋಷಿಸುತ್ತಿರುವರು. ವಿ : ಏಕೋ ಹಿ ರುದ್ರಕ್ಕೆ ಸರಳಾನುವಾದ : ಯಾವನು ಈ ಲೋಕಗಳನ್ನು ತನ್ನ ಶಕ್ತಿಯಿಂದ ಅಧಿಕರಿಸಿಕೊಂಡಿರುವನೋ ಆ ರುದ್ರನೊಬ್ಬನೇ ನಿಜ-ಎರಡನೆಯದಾದುದೇನೊಂದೂ ನಿಲ್ಲದು. ಎಲ್ಲ ಜನರಲ್ಲಿ ಅಂತರ್ಯಾಮಿಯಾಗಿ ಅವನಿದ್ದಾನೆ. ಎಲ್ಲ ಭುವನಗಳನ್ನೂ ಸಂಸೃಜಿಸಿ ಗೋಪ(ರಕ್ಷಕ)ನಾಗಿ-ಅಂತ್ಯಕಾಲದಲ್ಲಿ ಆ ಎಲ್ಲವನ್ನೂ ತನ್ನೊಳಗುಮಾಡಿಕೊಂಡವನು ಅವನೇ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು