ಮಾಹೇಶ್ವರನ ಜ್ಞಾನಿಸ್ಥಲ - ಅಸಹಾಯಕತೆ
ಶ್ರುತಿತ ಶಿಶಿರದ ಮೇಲೆ 'ಅತ್ಯತಿಷ್ಠದ್ದಶಾಂಗುಲ'ನ ನಾನೇನೆಂಬೆನಯ್ಯಾ,
ಘನಕ್ಕೆ ಘನಮಹಿಮನ, ಮನಕ್ಕಗೋಚರನ?
`ಅಣೋರಣೀಯಾನ್ ಮಹತೋ ಮಹೀಯಾನ್'
ಮಹಾದಾನಿ ಕೂಡಲಸಂಗಮದೇವ.
Transliteration Śrutita śiśirada mēle'atyatiṣṭaddaśāṅgula'na nānēnembenayyā,
ghanakke ghanamahimana, manakkagōcarana?
`Aṇōraṇīyān mahatō mahīyān'
mahādāni kūḍalasaṅgamadēva.
Manuscript
English Translation 2 What shall I say, O Lord,
Of one who stands ten fingers above
The heighest of the holy books-
A glory greater than the great,
Inscrutable to the intellect?
O greater than the great,
And subtler the subtlest, Thou
Most bountiful Lord
Kūḍala Saṅgama!
Translated by: L M A Menezes, S M Angadi
Hindi Translation जो श्रुति के सिर से दस अंगुल पर स्थित हैं
उनके संबंध में क्या कहूँ?
महान से महान मन को अगोचर
अणोरणीयान् महतोमहीयान् है
महादानी कूडलसंगमदेव ॥
Translated by: Banakara K Gowdappa
Telugu Translation శ్రుతి తతి శిరంబుపై
అత్యతి, దశాంగుళుని
ఘనంబునకు ఘనమహిముని
మనంబున కగోచరుని
అణోరణీయుని
మహతో మహీయుని
మహాదాత కూడల సంగమదేవుని
ఏమందునయ్యా?
Translated by: Dr. Badala Ramaiah
Tamil Translation வேதம், சுருதியின் சிரத்தின்மீது
“அத்யதிஷ்டத்த சாங்குல என்பதை
நான் என்னென்பேன் ஐயனே?
சீர்மைக்கு சீர்மையான மகிமை உடையவனை
மனத்தால் உணரவியலாதவனன்றோ
“அணோரணீயான், மஹதோ மஹீயான்”
பெருவள்ளல் கூடலசங்கமதேவன்.
Translated by: Smt. Kalyani Venkataraman, Chennai
Marathi Translation
श्रुतीच्या अतीत शिरावर `अत्यतिष्ठद्दशांगुला` चे वर्णन मी कसे करु ?
घनाल श्रेष्ठ महिमा, मनाला अगोचर !
`अणोरणीयान् महतो महीयान`
आहे महादानी कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಅಣೋರಣೆ = ; ಅತಿಷ್ಟ = ; ಅತ್ಯ = ; ಗೋಚರ = ; ಘನ = ; ತತಿ = ; ಮಹತೋ = ; ಮಹಿಮ = ; ಮಹೀ = ; ಶಾಂಗುಲ = ; ಶ್ರುತಿ = ;
ಕನ್ನಡ ವ್ಯಾಖ್ಯಾನ ಶಿವನು ಆ ವೇದಗಳಿಂದಾಚೆಗೂ ಎಟುಕದೆ ನಿಂತಿರುವನು. ಅವನು ಮಹತ್ತಿಗೆ ಮಹತ್ತಾಗಿ-ಜ್ಞಾನೇಂದ್ರಿಯಗಳಿರಲಿ-ಮನಸ್ಸಿಗೂ ಅಗೋಚರನಾಗಿರುವನು. ಅವನು ಅಣುವಿಗೂ ಅಣುಸ್ವರೂಪಿ-ಕೂಡಲ ಸಂಗಮದೇವನು ಕಣ್ಣು ಅಥವಾ ಕಲ್ಪನೆಗೆ ಈಡಾಗುವನೆಂದು ತಿಳಿದೆಯಾ-ಎನ್ನುತ್ತ ಬಸವಣ್ಣನವರು ಅನಾದ್ಯನಂತ ಶಿವನ ಅನುಭೂತಿ (ದಾಸೋಹದಿಂದಲ್ಲದೆ) ಅಗಮ್ಯವೆನ್ನುತ್ತಿರುವರು-“ಮಹಾದಾನಿ” ಎಂದು ಆ ಶಿವನನ್ನು ವಿಶೇಷಿಸುವುದರ ಮೂಲಕ.
ಈ ವಚನದಲ್ಲಿ ಅವರು ಪ್ರಸ್ತಾಪಿಸಿರುವ ಉಪನಿಷದ್ ವಾಕ್ಯಗಳು ಈ ಮುಂದಿನಂತಿವೆ-“ಸಹಸ್ರ ಶೀರ್ಷೋಪುರಷಃ ಸಹಸ್ರಾಕ್ಷಃ ಸಹಸ್ರಪಾತ್ ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತಿಷ್ಠದ್ದಶಾಂಗುಲಂ(ಶ್ವೇತಾಶ್ವತರ 3-14). “ಅಣೋರಣಿಯಾನ್ ಮಹತೋ ಮಹೀಯಾನಾತ್ಮಾ ಗುಹಾಯಾಂ ನಿಹಿತೋsಸ್ಯ ಜಂತೋಃ | ತಮಕ್ರತುಃ ಪಶ್ಯತಿ ವೀತಶೋಕೋ ಧಾತುಃ ಪ್ರಸಾದಾನ್ಮಮಿಮಾನಮೀಶಂ” (ಅದೇ. 3-20) ಇವುಗಳ ಸರಳಾನುವಾದ ಈ ಮುಂದಿನಂತೆ : ಶಿವನಿಗೆ ಸಾವಿರ ತಲೆ, ಸಾವಿರ ಕಣ್ಣು, ಸಾವಿರ ಕಾಲು. ಅವನು ಈ ವಿಶ್ವವನ್ನು ಎಲ್ಲ ಕಡೆಯಿಂದಲೂ ವ್ಯಾಪಿಸಿಕೊಂಡು ಅಲ್ಲಿಂದ ಮೇಲೆ ಹತ್ತುಂಗುಲದಾಚೆಗೂ ಇರುವನು. ಅಣುವಿಗೆ ಅಣು, ಮಹತ್ತಿಗೆ ಮಹತ್ತೂ ಆದ ಶಿವನು ಜೀವಿಗಳ ಹೃದಯ ಗುಹೆಯಲ್ಲಿ ನಿಹಿತವಾಗಿರುವನು. ಭಕ್ತನು ಶೋಕ ಮೋಹವಿಲ್ಲದವನಾಗಿ-ಶಿವನ ಪ್ರಸಾದಕ್ಕೆ ಪಾತ್ರನಾದಾಗ ಮಾತ್ರ-ಅಂಥವನಿಗೆ ಮಹಿಮಾನ್ವಿತನಾದ ಆ ಶಿವನ ದರ್ಶನವಾಗುವುದು.”
ವಿ: ಅತ್ಯತಿಷ್ಠದ್ದಶಾಂಗುಲವೆಂದರೆ-ಹೊಕ್ಕುಳಿಂದ ಹತ್ತಂಗುಲ ಮೇಲಿರುವ ಹೃದಯ ಕಮಲದಲ್ಲಿ ಶಿವನಿರುವನೆಂದೂ-ಬ್ರಹ್ಮಾಂಡವನ್ನೆಲ್ಲ ವ್ಯಾಪಿಸಿಕೊಂಡಿರುವ ಅವನು ಪಿಂಡಾಂಡದಲ್ಲಿ ಆವಾಸವಾಗಿರುವನೆಂದೂ ಅರ್ಥೈಸಬಹುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು