•  
  •  
  •  
  •  
Index   ವಚನ - 625    Search  
 
ಮಾಹೇಶ್ವರನ ಜ್ಞಾನಿಸ್ಥಲ - ಸದಾಚಾರ
ಅರಸು ವಿಚಾರ ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ: ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು, ನೋಡಾ! ಒಬ್ಬ ಜಂಗಮದಭಿಮಾನದಿಂದ ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು, ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ!
Transliteration Arasu vicāra siriyu, śr̥ṅgāra, sthiravalla mānava: Keṭṭittu kalyāṇa, hāḷāyittu, nōḍā! Obba jaṅgamadabhimānadinda cāḷukyarāyana āḷike tegeyittu, sandittu, kūḍalasaṅgamadēvā nim'ma kavaḷige!
Manuscript
English Translation 2 Beauty and wealth and thoughts of kings Do not endure, O man! Lo,Kalyāṇa is utterly destroyed! For a single Jaṅgama's injury The reign of the Cālukya king Lay low and dropped into Thy skull-bowl O Kūḍala Saṅgama Lord! Translated by: L M A Menezes, S M Angadi
Hindi Translation रे मानव, राज-विचार, संपत्ति, श्रृंगार स्थिर नहीं है, देखो कल्याण नगर नष्ट हुआ, चौपट हुआ, एक जंगम के स्वाभिमान से । चालुक्य राजा का शासन समाप्त हुआ कूडलसंगमदेव,वह तव कपाल में समा गया ॥ Translated by: Banakara K Gowdappa
Telugu Translation వేసవిత్తువిత్తి బెల్లముతో కట్టకట్టి ఆలపాల దడిపి తేనెవాకల ముంచ చేదుగాక తీపు గా నేర్చునే? శివభక్తులు గానివారల చేరి పల్కరింపరాదు సంగమదేవా Translated by: Dr. Badala Ramaiah
Tamil Translation மனிதனே, அரசு தீர்மானம், செல்வம் அழகு நிலையானதன்று கல்யாணம் கெட்டது, பாழாயிற்று காணாய் ஒரு ஜங்கமனின் அபிமானத்தால் சாளுக்கிய அரசனின் ஆட்சி அகன்றது கூடல சங்கமதேவனே, உன் கபாலத்திற்குள் சென்றது. Translated by: Smt. Kalyani Venkataraman, Chennai
Marathi Translation स्थिर नोहे राज्य, संपत्ती वैभव अंत त्या सर्वव, जाणूनी घ्या जंगमाभिधानी, जळाले कल्याण चालुक्य शासन, गेले लया तुझिया कवळी, कूडलसंगमदेवा कल्याण विसावा, लया गेला अर्थ - हे मानवा! राजाचा विचार आणि त्याची श्री संपत्ती वैभव स्थिर राहू शकत नाहीत. केवळ एका जंगमाच्या अभिधानाने, वाडीने सम्राट चालुक्य राज्य समूळ नष्ट झाले. हे कूडलसंगमदेवा ! (परमेश्वरा) सुजलाम सुफलाम असे कल्याणमय वातावरण तुझ्या एका ग्रासात लयास गेले. आश्चर्य हे की वरील वचन भगवान बसवेश्वर कल्याण नगरात असतानाच पुढील भाकीत स्वरुपात कसे लिहले असतील ? म्हणजेच ते कालज्ञानी होते हे सिद्ध होते. Translated by Rajendra Jirobe, Published by V B Patil, Hirabaug, Chembur, Mumbai, 1983 राजाचे विचार, श्रीमंती, शृंगार स्थिर नाही मानवा. नष्ट झाले कल्याण, ओसाड झाले कल्याण. एका जंगमाच्या अभिमानामुळे चालुक्य राज्यकारभार नष्ट झाला. तुमच्या भिक्षापात्रात सामावले राज्य कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಭಿಮಾನ = ಪ್ರೀತಿ, ಗೌರವ; ಕವಳು = ; ಜಂಗಮ = ; ವಿಚಾರ = ; ಸಂದು = ; ಸ್ಥಿರ = ;
ಕನ್ನಡ ವ್ಯಾಖ್ಯಾನ ಈ ವಚನದ ಸರಳಾನುವಾದ : ಅಧಿಕಾರ ಐಶ್ವರ್ಯ ಸೌಂದರ್ಯ ಸ್ಥಿರವಲ್ಲ. ಜಂಗಮನೊಬ್ಬನ ಅಭಿಮಾನ ನೆಪವಾಗಿ ಉದ್ಭವಿಸಿದ ಪ್ರಸಂಗವೊಂದರ ಕಾರಣದಿಂದಾಗಿ ನಾಲ್ಕನೇ ಸೋಮೇಶ್ವರನು ತನ್ನ ರಾಜ್ಯವನ್ನು ಕಳೆದುಕೊಳ್ಳಬೇಕಾಯಿತು. ಆಗ (ಕ್ರಿ.ಶ. 1189) ಅತ್ಯಂತ ವೈಭವಯುತವಾಗಿ ಕರ್ನಾಟಕವನ್ನು ಕೇಂದ್ರ ಮಾಡಿಕೊಂಡು ದಖನ್ಭಾಗವನ್ನು ಆಳಿದ ಚಾಳುಕ್ಯ ರಾಜಮನೆತನವು ಶಿವನ ಹಳೆಯ ಲೆಕ್ಕಕ್ಕೆ ಸೇರಿಹೋಯಿತು. ಇಷ್ಟಾದರೂ ಅಧಿಕಾರ ಮುಂತಾದುವು ಅಶಾಶ್ವತವೆಂದು ಮನಗಾಣಲಾಗದೆ ? ಅಧಿಕಾರ ಐಶ್ವರ್ಯ ಸೌಂದರ್ಯ ಈ ಯಾವುದೂ ಸ್ಥಿರವಲ್ಲವಾದರೂ ಅವು ಮಾನವನ ಮೈಮೇಲೆ ಬಂದಾಗ-ತಾವಿರುವ ಅಲ್ಪ ಕಾಲದಲ್ಲೇ ಅವು ಅವನ ಬುದ್ಧಿಯನ್ನು ಬುಡಮಟ್ಟ ಧ್ವಂಸಮಾಡುವವು. ಬಸವಣ್ಣನವರು ತಮ್ಮ ಜೀವಿತಕಾಲದಲ್ಲಿ. ತಮ್ಮ ನಾಡಿನಲ್ಲೇ ತಮ್ಮ ಕಣ್ಣೆದುರಿಗೇ-ಚಕ್ರವರ್ತಿಯಾದ ತ್ರೈಲೋಕ್ಯಮಲ್ಲ ನೂರ್ಮಡಿ ತೈಲ iii (ಕ್ರಿ.ಶ. 1150-1163)ನನ್ನು ಅವನ ಸೈನ್ಯಾಧಿಪತಿಯಾಗಿದ್ದ ಬಿಜ್ಜಳನು ಕ್ರಿ.ಶ. 1163ರಲ್ಲಿ ಸಿಂಹಾಸನದಿಂದಿಳಿಸಿ ತಾನೇ ಚಕ್ರವರ್ತಿಯೆಂದು ಘೋಷಿಸಿಕೊಂಡುದನ್ನೂ, ಕ್ರಿ.ಶ. 1183 ರಲ್ಲಿ ಆ ಬಿಜ್ಜಳನ ಸಂತತಿಯನ್ನೇ ಚಾಳುಕ್ಯ ತ್ರಿಭುವನಮಲ್ಲ ವೀರಸೋಮೇಶ್ವರ iv (ಕ್ರಿ.ಶ. 1183-1189)ನು ದಂಡಿಸಿ ಮರಳಿ ಸಾಮ್ರಾಜ್ಯವನ್ನು ಕಸಿದುಕೊಂಡುದನ್ನೂ ಕಂಡಿದ್ದರು. ಮಿಕ್ಕಂತೆ ಆಗರ್ಭಶ್ರೀಮಂತರು ದಟ್ಟದರಿದ್ರರಾದುದನ್ನೂ, ರೋಗರುಜಿನಾದಿಗಳಿಂದ ಮತ್ತು ಮುಪ್ಪು ಆಘಾತಗಳಿಂದ ಸ್ಫುರದ್ರೂಪಿಗಳು ಕುರೂಪಿಗಳಾದುದನ್ನೂ ಬಸವಣ್ಣನವರು ಕಂಡಿದ್ದರು. ಕಂಡು ಈ ಅಧಿಕಾರಾದಿಗಳು ಎಷ್ಟು ಕ್ಷಣಿಕವೆಂಬುದನ್ನು ಚೆನ್ನಾಗಿ ಮನಗಂಡಿದ್ದರು. ಆದ್ದರಿಂದಲೇ ಅವನ್ನು ನಚ್ಚಿ ಯಾರಾಗಲಿ ಮದದಲ್ಲಿ ಲೋಭದಲ್ಲಿ ಕಾಮದಲ್ಲಿ ಮೈಮರೆಯುವುದು ತೀರ ಲಜ್ಜಾಸ್ಪದವೆಂದು ಎಚ್ಚರಿಸುತ್ತಿರುವರು ಈ ವಚನದ ಮೂಲಕ. ಕಲ್ಯಾಣ ಹಾಳಾದ ಮಾತು ಈ ವಚನದಲ್ಲಿರುವುದರಿಂದ ಈ ವಚನ ಕ್ರಿ.ಶ. ಸುಮಾರು 1190 ರಿಂದೀಚೆಗೆ ಬಸವಣ್ಣನವರು ಬರೆದುದೆಂದು ಹೇಳಲವಕಾಶವಿದೆ. ಆದುದರಿಂದಲೇ ಅವರು ಪುರಾಣಗಳಲ್ಲಿ ಹೇಳಿರುವಂತೆ ಬಿಜ್ಜಳನ ಆಳ್ವಿಕೆ ತೆಗೆದ ಕ್ರಿ.ಶ. ಸುಮಾರು 1168 ರ ಸುತ್ತುಮುತ್ತಿನಲ್ಲಿ ಲಿಂಗೈಕ್ಯರಾಗದೆ, ಆಮೇಲೂ ದೀರ್ಘಕಾಲ ಕೂಡಲಸಂಗಮದಲ್ಲಿ ಜೀವಿಸಿದ್ದರೆಂಬುದಕ್ಕೆ ಸಾಕ್ಷಿ ನುಡಿಯುತ್ತಿದೆ ಈ ವಚನ. ಬಿಜ್ಜಳನ ಮಕ್ಕಳ ಕಾಲಕ್ಕೆ ಯಾದವ ಬಿಲ್ಲಮನು ಕಲ್ಯಾಣವನ್ನು ವಶಪಡಿಸಿಕೊಂಡಂದಿನಿಂದ-ಅವರ (ಕಲ್ಯಾಣದ) ಜೀವಕಳೆಗೆ ಇತಿಶ್ರೀಯಾಗಿರಬೇಕೆಂದು ಗೋವಿಂದ ಪೈಗಳ(ಮೂರು ಉಪನ್ಯಾಸಗಳು-ಪುಟ 73) ಊಹಿಸಿರುವುದು ನಿಜವಾದರೆ ಕಲ್ಯಾಣ ಹಾಳಾದುದು ಕ್ರಿ.ಶ. ಸುಮಾರು 1187-1191 ರ ಮಧ್ಯಂತರದಲ್ಲಿ. ಕನಿಷ್ಠ ಪಕ್ಷ ಅಲ್ಲಿಯವರೆಗಾದರೂ ಬಸವಣ್ಣನವರು ಬದುಕಿದ್ದರು. ಹೀಗಾಗಿ ಚಾಳೋಕ್ಯರಾಯನ ಆಳ್ವಿಕೆ ಮುಗಿದ ಮತ್ತು ಕಲ್ಯಾಣ ಹಾಳಾದ ಮಾತಿರುವ ಈ ವಚನ-ಬಸವಣ್ಣನವರ ಭಂಡಾರಿಪದವಿಯಿಂದ ನಿವೃತ್ತರಾಗಿ ಕೂಡಲಸಂಗಮಕ್ಕೆ ಹೋಗಿ ಅಲ್ಲಿ ನೆಲೆಸಿದ್ದ ಕಾಲಕ್ಕೆ ಬರೆದುದಾಗಿರಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು