MusicCourtesy:Provided to YouTube by [Simca] Sangeeth Sagar Singer: Lavanya Dinesh, Vachana Chandana ℗ 2000 Sagar Music Released on: 2000-12-21
English Translation 2If you sow a seed of neem
And make it a bank of jaggery,
Pour honey and cow's milk,
Will it from bitter become sweet?
One must not speak
With, such are not
Śiva's devotees, O Lord
Kūḍala Saṅgama!
Translated by: L M A Menezes, S M Angadi
Hindi Translationनीम का बीज बोकर
गुड की क्यारी बनाकर
गोक्षीर और मधु से सींचने से
वह कडुआ ना तो मीठा होगा?
शिवभक्ति हीनों से
बोलना नहीं चाहिए कूडलसंगमदेव ॥
Translated by: Banakara K Gowdappa
Tamil Translationவேம்பின் விதையை விதைத்து, வெல்லப்பாத்தியைக் கட்டி
பசுக்களின் பாலை இறைத்து, தேனைச் சேர்ப்பின்
கசக்காமல் இனிக்கவல்லதோ?
சிவபக்தரல்லாதாருடன் பேசுதல் கூடாது
கூடலசங்கமதேவனே
Translated by: Smt. Kalyani Venkataraman, Chennai
Marathi Translationकडूनिंबाचे बी पेरुन, गुळाचा चबुतरा घातला.
गायीचे दूध, मधाचे सिंचन त्याला केले.
ते काय गोड होईल? कडूपणा नष्ट होईल?
सद्भक्ताविना कोणा बरोबरही बसून अनुभाव करता येत नाही
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳುಹೊಯ್ಧುಡೆ = ;
ಕನ್ನಡ ವ್ಯಾಖ್ಯಾನಶಿವಭಕ್ತರಾಗಲೊಲ್ಲದವರ ಕೂಡ ವಾದ ಮಾಡುವುದನ್ನು ಬಸವಣ್ಣನವರು ನಿಷ್ಪ್ರಯೋಜಕವೆಂದು ಭಾವಿಸಿದ್ದರು. ಅವರೊಬ್ಬ ಮಹಾನ್ ಮತಾಚಾರ್ಯರೇ ಆದರೂ ಮಿಕ್ಕ ಮತಾಚಾರ್ಯರಂತೆ ಭಿನ್ನ ಮತೀಯರೊಡನೆ ಖಂಡನಾತ್ಮಕವಾಗಿ ಮಾತನ್ನು ಮಚಾಯಿಸುವ ಹವ್ಯಾಸ ಅವರದಲ್ಲ. ಬಸವಣ್ಣನವರು ಮೊದಮೊದಲಿಗೆ ಮೀಮಾಂಸಕ(ಮುಂತಾದವ)ರೊಡನೆ ವಾದ ಮಾಡಿದ್ದಕ್ಕೆ ಸಾಕ್ಷಿ ಅವರ ವಚನ (531, 747)ಗಳಲ್ಲಿದೆಯಾದರೂ-ಆ ವಾದಕಾಂಡವನ್ನು ಮುಂದುವರಿಸಲು ಅವರಿಗೆ ಆಸಕ್ತಿಯಿರಲಿಲ್ಲ (ನೋಡಿ : ವಚನ 447,578).
ಅವರ ಮಾರ್ಗ ಖಂಡನಮಂಡನಾತ್ಮಕವಾದುದಾಗಿರದೆ ಅನುಭಾವಿಕ ಜೀವನಾತ್ಮಕವಾದುದಾಗಿತ್ತು. ಆದುದರಿಂದಲೇ ಅವರು ಮಾತನ್ನು ತಮ್ಮ ಬೋಧನೆಯ ಮಾಧ್ಯಮ ಮಾಡಿಕೊಳ್ಳದೆ-ಜೀವಿಸಿ ಪ್ರಭಾವಿಸುವುದನ್ನು ಮಾಧ್ಯಮ ಮಾಡಿಕೊಂಡಿದ್ದರು. ಅವರ ಕ್ಷೇತ್ರ-ವೇದಿಕೆಯಲ್ಲ, ಆಯುಧ-ನಾಲಗೆಯಲ್ಲ, ಜಯ-ಇತರರ ಬಾಯನ್ನು ಮುಚ್ಚಿಸುವುದಲ್ಲ.
ಆದುದರಿಂದಲೇ ಅವರು ವಿಪರೀತವಾದಿಗಳೊಡನೆ ವಾದಿಸಬಾರದೆಂದು ತಮ್ಮ ಶಿಷ್ಯವರ್ಗಕ್ಕೆ ಬುದ್ಧಿ ಹೇಳುತ್ತಿರುವರು. ಬೇವಿನ ಬೀಜವನ್ನು ಮಾವಿನ ಮರವಾಗಿ ಬೆಳೆಸುವೆನೆಂಬುದು-ಆ ಮೂಲಕ ಬೆಲ್ಲ ಹಾಲು ಜೇನುತುಪ್ಪವನ್ನು ವ್ಯಯಿಸುವುದು ಹುಂಬತನವೆಂಬುದು ಅವರ ಅಭಿಪ್ರಾಯ.
ಇದೇ ಸಂದರ್ಭದಲ್ಲಿ ಸ್ಮರಿಸಬೇಕಾದ ಒಂದು ಎಚ್ಚರಿಕೆಯ ಮಾತೆಂದರೆ-ಕೆಲವು ಮತಾಚಾರ್ಯರಂತೆ ಬಸವಣ್ಣನವರು ಸಮಾಜದ ಯಾವ ಒಂದು ನಿಮ್ನವರ್ಗದವರನ್ನೂ ಅಭವ್ಯರೆಂದಾಗಲಿ ನಿತ್ಯನಾರಕಿಗಳೆಂದಾಗಲಿ ತಿರಸ್ಕರಿಸಲಿಲ್ಲ. ಅವರ ಪ್ರಕಾರ ಎಲ್ಲರೂ ಭವ್ಯರೇ, ಎಲ್ಲರೂ ಮುಕ್ತಿಯೋಗ್ಯರೇ, ಎಲ್ಲರೂ ದಿವ್ಯಜೀವನವನ್ನು ನಡೆಸಬಲ್ಲ ಅಧಿಕಾರದವರೇ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.