•  
  •  
  •  
  •  
Index   ವಚನ - 701    Search  
 
ಮಾಹೇಶ್ವರನ ಮಾಹೇಶ್ವರಸ್ಥಲ - ಕರ್ಮ
ಕಟ್ಟಿದೆ ಒರೆಯ, ಬಿಟ್ಟೆ ಜನ್ನಿಗೆಯ, ಮುಟ್ಟಿ ಬಂದಿರಿದರೆ ಓಸರಿಸುವನಲ್ಲ: ಓಡದಿರು, ಓಡದಿರು!- ನಿಮ್ಮ ಶರಣರ ಮನೆಯ ಬಿದುರಿನ ಅಂಕಕಾರ- ಓಡದಿರು, ಓಡದಿರು, ಎಲೆ ಎಲೆ ದೇವಾ, ಎಲೆ ಎಲೆ ಸ್ವಾಮೀ, ಎಲೆ ಎಲೆ ಹಂದೇ! ಕೂಡಲಸಂಗಮದೇವಾ!
Transliteration Kaṭṭide oreya, biṭṭe jannigeyara, muṭṭi bandiddare ōsarisuvanalla: Ōḍadiru, ōḍadiru!- Nim'ma śaraṇara maneya birudina aṅkakāra- ōḍadiru, ōḍadiru, ele ele dēvā, ele ele svāmī, ele ele handē! Kūḍalasaṅgamadēvā!
Manuscript
English Translation Took the sword in my hands Leaving aside the sacred thread. Will fight tooth and nail undeterred, For I am a titled knight in the royal house of your devotees! Don't run away! don't run away, O God! Don't run away like a coward O my Master! Kūḍala Saṅgama Lord!
Translated by: Dr Shivamurthy Shivacharya Mahaswamiji, Taralabalu Math, Sirigere
English Translation 2 Sword at my side, leaving the priests, I will not flinch In fighting close at hand. Don't run away! don't run away! I am a titled servant of Thy 'Śaraṇās house! Don't run away! don't run away, O God, O Lord, you runaway- Kūḍala Saṅgama Lord! Translated by: L M A Menezes, S M Angadi
Hindi Translation मैं ने म्यान बाँधा, याज्ञिकों को त्यागा निकट आकर शस्त्र भोंक दो, तो पीछे नहीं हटूँगा; मत भागो, मत भागो, तव शरणों के घर का बिरदांकित योद्धा हूँ मत भागो, मत भागो हे देव, हे स्वामी, हे भीरु, कूडलसंगमदेव ॥ Translated by: Banakara K Gowdappa
Telugu Translation పట్టితికత్తి విడిచితివిప్రుల పై బడి పొడిచిన పరుగిడు వాడగాను పాఱకు పాఱకయ్యా నీ శరణులయింట బిరుదున్న భటుడ నేనయ్యా! నను విడిచి పాఱకు పాఱకుమో ప్రభూ! పాఱకు మో స్వామీ! పాఱకు మో తండ్రీ! కూడల సంగయ్యా! Translated by: Dr. Badala Ramaiah
Tamil Translation வாளைக் கட்டிக் கொண்டேன், கறக்கும் பசுவை நேர்ந்து கொண்டேன் போராடவரினும், பின்னடையேன் ஓடாய், ஓடாய் உம் அடியாரின் இல்லத்தின் பெயர் பெற்ற வீரன் ஓடாய், ஓடாய், தேவனே. சுவாமியே, பேடியே கூடல சங்கம தேவனே. Translated by: Smt. Kalyani Venkataraman, Chennai
Marathi Translation वेद शास्त्र आगम पुराण बांधून ठेवले, जानेवे असलेल्यांचा संबंध सोडून दिला. पारखण्यास आले तर मागे नाही हाटणार. पारखल्याशिवाय पळू नको, पळू नको! तुमच्या शरणाच्या घराच्या गौरव पदाचा वीर रक्षक मी आहे. पळू नको, पळू नको, अरेअरे देवा. अरेअरे स्वामी, अरेअरे भित्र्या! कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಯುದ್ಧ ವೀರನು ರಣರಂಗಕ್ಕೆ ಹೋಗುವ ಮುನ್ನ ಖಡ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುವ ಸಮಾರಂಭವೊಂದು ವಿಧಿವತ್ತಾಗಿ ನಡೆಯಬೇಕು. ಅದಾದಮೇಲೆ ಯೋಧನು ದೇವಾಲಯಕ್ಕೆ ಹೋಗಿ ದೇವರಿಗೆ “ಕರೆಯುವ ಹಸು”ವನ್ನು ಬಿಟ್ಟು –ಆ ದೇವರು ತನ್ನನ್ನು ಕಾಪಾಡಲೆಂದು ಪ್ರಾರ್ಥಿಸಿಕೊಂಡ ರಣರಂಗದ ಕಡೆಗೆ ಹೊರಡುವನು. ಹೊರಟರಾಯಿತು -ಶತ್ರುವಿನ ಮೇಲೆ ಬಿದ್ದು ಇರಿಯದೆ ಹಿಮ್ಮೆಟ್ಟುವುದಿಲ್ಲ –ಆ “ಸ್ವಾಮಿ”ಭಕ್ತಿ ಅವನದು. ಹಾಗೆಯೇ ಈ ದೇಹವನ್ನು ಕಟ್ಟಿಕೊಂಡು, ಮನಸ್ಸನ್ನು ಶಿವಭಕ್ತರ ಸೇವೆಗೆ ಬಿಟ್ಟಮೇಲೆ-ಬಂದ ಎಡರುತೊಡರುಗಳನ್ನು ಎದುರಿಸುವುದೇ ಬಸವಣ್ಣನವರ ಜಾಯಮಾನ. ತಮ್ಮ ಸೇವಾ ಮಾರ್ಗದಲ್ಲಿ ಶಿವನೇ-ಪರಿಕ್ಷಾರ್ಥವಾಗಿಯೇ ಆಗಲಿ ಅಡ್ಡ ಬಂದನೆಂದರೆ ಅವನನ್ನೂ ಪ್ರತಿಭಟಿಸುವ ಪೌರುಷ ಅವರದಾಗಿತ್ತು. ಮಾನವರ ಜೊತೆಗಿದ್ದು ಆ ಮಾನವರ ನೋವು ನಲವಿಗೆ ಸ್ಪಂದಿಸುತ್ತ -ನೋವನ್ನು ನಿವಾರಿಸಿ ನಲಿವನ್ನು ಬೆಳೆಸಲು ಶ್ರಮಿಸುವುದೇ ಅವರ ನಿಲುವಾಗಿತ್ತು, ಅವರು ಪರಿಣಾಮದಲ್ಲಿ ಬಯಸಿದ್ದು ಮನುಕುಲದ ಯೋಗಕ್ಷೇಮವನ್ನೇ ಹೊರತು ಶಿವನ ಸರ್ವಾಧಿಕಾರಷಾಹಿಯನ್ನಲ್ಲ. ರಾಜನೊಬ್ಬನು ಪ್ರಜೆಗಳಿಗೆ ದುಂಡಾವರ್ತಿಯಿಂದ ದಂಡಿಸುತ್ತಿದ್ದರೆ- ಅವನನ್ನು ಪ್ರತಿಭಟಿಸಿ ಓಡಿಸುವ ಜನನಾಯಕನ ನೆನಪನ್ನು ತರುವುದು- ಈ ವಚನದಲ್ಲಿ ಕಾಣಸಿಗುವ ಶಿವನ ಮತ್ತು ಬಸವಣ್ಣನವರ ಸಂಬಂಧ ವೈಖರಿ. ದೇವರಿಲ್ಲದ ಅಧ್ಯಾತ್ಮಿಕೆಯ ಕಲ್ಪನೆಯೆಂದಾದರೂ ಬಸವಣ್ಣನವರ ಮನಸ್ಸಿನಲ್ಲಿ ಹಾದುಹೋಗಿತ್ತೋ? ವಚನಸಾರ : ಎಲೇ ಶಿವನೇ, ಶರಣರ ಮನೆಯ ಬಂಟ ನಾನು, ನೀನು ಏನೇ ತೊಡರನ್ನು ಒಡ್ಡಿದರೂ ಆ ಶರಣರ ಸೇವೆಯನ್ನು ಮಾಡಲು ನಾನು ಸಿದ್ಧವಾಗಿದ್ದೇನೆ. ಬಾ ಕಾಡು, ಸೋತು ಹೇಡಿಯಾಗಿ ಓಡಬೇಡ, ಮರಳಿ ಬಂದು ನೀನು ಕಾಡದಂತಾಗಲಿ -ನಿನ್ನನ್ನು ಕೊಲ್ಲುತ್ತೇನೆ –ಎಂದು ತಮ್ಮ ಸೇವೆಗೆ ಅಡ್ಡಿಯಾಗಿ ಕಿರುಕುಳಯುದ್ಧ ಮಾಡುವನೆಂಬ ಪ್ರತೀತಿಯ ಶಿವನನ್ನು ಬಸವಣ್ಣನವರು ಮೂದಲಿಸುತ್ತಿರುವರು. (ನೋಡಿ ವಚನ 148). ವಿ : “ಬೇಡಿಬೇಡಿದ ಶರಣಂಗೆ ನೀಡದಿರ್ದಡೆ ತಲೆ ದಂಡ ಕೂಡಲಸಂಗ ಅವಧಾರು” ಎಂಬ ಬಸವಣ್ಣನವರ ವಚನ (ವಚನ 432, 707 ?)ವನ್ನು ಕಳಿಂಗದೇಶದ ಮಹಾದೇವಶೆಟ್ಟಿ ಓದಿ ಅವರನ್ನು ಪರೀಕ್ಷಿಸಲೆಂದು ಬರುತ್ತಿರುವ ವಾರ್ತೆಯನ್ನು ಶಿವನು ಆ ಬಸವಣ್ಣನವರ ಯೋಗನಿದ್ರೆಯಲ್ಲಿ ತಿಳಿಸಿ “ಎಂತು ಮಾಡಿದಪೆ” ಎಂದು ಆ ತಂಕಪಟ್ಟು ಮಾಯವಾಗುವನು. ಆಗ ಎಚ್ಚತ್ತ ಬಸವಣ್ಣನವರು “ಅಂಜದಿರಂಜದಿರುದೇವ. ಪರೀಕ್ಷೆಗೆ ತೆರಹಿಲ್ಲಂ ಕಟ್ಟಿದೆನೊರೆಯ ಬಿಟ್ಟೆ ಜನ್ನಿಗೆಯ, ಓಡದಿರೋಡದಿರು. ಶರಣರ ಮನೆಯ ಬಿರುದಿನಂಕಕ್ಕೆ ಹಿಮ್ಮೆಟ್ಟದಿರಲೆ ದೇವ, ಎಲೆ ತಂದೆ, ಎಲೆಲೆ ಹಂದೆ ಕೂಡಲಸಂಗ ಸ್ವಯವಾಗು ಸ್ವಯವಾಗು” ಎಂದು (ಈ 703ನೇ ವಚನವನ್ನೇ ನುಡಿದು) ಉತ್ಸಾಹಿಸಿದಂತೆ ಹರಿಹರನು ಬಸವರಾಜದೇವರ ರಗಳೆಯಲ್ಲಿ ಪ್ರಸ್ತಾಪಿಸಿರುವನು (ನೋಡಿ 12ನೇ ಸ್ಥಳದ ಆರಂಭದಲ್ಲಿ).

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು