ಮಾಹೇಶ್ವರನ ಪ್ರಾಣಲಿಂಗಿಸ್ಥಲ - ದೇವರು
ಆನೆ ಅಂಕುಶಕ್ಕೆ ಅಂಜುವುದೆ, ಅಯ್ಯಾ,
ಮಾಣದೆ ಸಿಂಹದ ನಖವೆಂದು ಅಂಜುವುದಲ್ಲದೆ?
ಆನೀ ಬಿಜ್ಜಳಂಗಜುವೆನೆ, ಅಯ್ಯಾ,
ಕೂಡಲಸಂಗಮದೇವಾ,
ನೀನು ಸರ್ವಜೀವ ದಯಾಪಾರಿಯಾದ ಕಾರಣ
ನಿನಗಂಜುವೆನಲ್ಲದೆ?
Transliteration Āne aṅkuśakke an̄juvude, ayyā,
māṇade sinhada nakhavendu an̄juvudallade?
Ānī bijjaḷaṅgajuvene, ayyā,
kūḍalasaṅgamadēvā,
nīnu sarvajīvadayāpāriyāda kāraṇa
ninagan̄juvenallade?
Manuscript
English Translation 2 Does an elephant fear the goad, O Lord,
Save that he thinks it is a lion's claw?
And should I fear this Bijjaḷa, Lord
Kūḍala Saṅgama?
I only fear Thee, because Thou art
Compassionate to all things that live!
Translated by: L M A Menezes, S M Angadi
Hindi Translation हाथी अंकुश से नहीं डरता स्वामी,
उसे सिंह नख समझ कर ही तो डरता है
मैं बिज्जळ से डरता हूँ? कूडलसंगमदेव।
मैं तुम से डरता हूँ क्योंकि
तुम सर्वजीव दयापर हो॥
Translated by: Banakara K Gowdappa
Telugu Translation ఏనుగంకుశమునకు వెఱచునే అయ్యా?
మానక సింహపు గోళ్ళని వెఱచుగాని;
నే నీబిజ్జలునకు వెఱతునే? అయ్యా సంగయ్యా :
సకల జీవదయామయుడ వగుటచే నీకు వెఱతునయ్యా!
Translated by: Dr. Badala Ramaiah
Tamil Translation யானை அங்குசத்திற்கு அஞ்சுமோ ஐயனே
இடையறாது சிங்கத்தின் நகம் என அஞ்சுவதன்றி?
கூடல சங்கம தேவனே, நீ அனைத்து உயிருக்கும்
அருள்வதால் உனக்கு அஞ்சுவதன்றி
நான் பிஜ்ஜளனுக்கு அஞ்சுவேனோ, ஐயனே
Translated by: Smt. Kalyani Venkataraman, Chennai
Marathi Translation
हत्ती अंकुशाला घाबरतो देवा ?
काय माहित, सिंह नखासम समजून घाबरतो.
मी बिजळराजाला घाबरतो काय?
कूडलसंगमदेवा,
तुम्ही सर्व जीवांचे दयाळू असल्याने तुम्हा भितो.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರು ಕಲ್ಯಾಣದಲ್ಲಿದ್ದಷ್ಟು ಕಾಲವೂ ಬಿಜ್ಜಳನ ಆಸ್ಥಾನದಲ್ಲಿದ್ದರು. ವೇದಜಡರು ಅವರ ಪ್ರಗತಿಪರ ಧೋರಣೆಗಳನ್ನು ಸಹಿಸದೆ ರಾಜನನ್ನೇ ಅವರ ಮೇಲೆ ಎತ್ತಿಕಟ್ಟಿದರೂ ಅವರು ಆ ರಾಜನ ಭಂಡಾರಿಯಾಗಿಯೇ ಉಳಿದಿದ್ದು ಗಮನಾರ್ಹವಾದ ಸಂಗತಿ.
ಬಸವಣ್ಣನವರು ಕಲ್ಯಾಣದ ಹೊಲೆಗೇರಿಯ ಸಂಬೋಳಿ ನಾಗಿದೇವನೆಂಬ ದಲಿತ ಶರಣನ ಮನೆಯಲ್ಲಿ ಪ್ರಸಾದ ಸ್ವೀಕರಿಸಿ ಅರಮನೆಗೆ ಬಂದ ದಿನವಂತೂ ಬಿಜ್ಜಳನ ವೈದಿಕರ ಮಾತು ಕೇಳಿ ಅವರನ್ನು “ಅತಿಭಕ್ತಿ ತಲೆಗೇರಿ ಹಿರಿಯ ಮಾಹೇಶ್ವರರೆಂದು ಪೊಲೆಗಲಿಸಿ ಅವರ ಮನೆಯೊಳುಂಡುದಲ್ಲದೆ ಇಲ್ಲಿ ಬಂದ ಎಲ್ಲರಂಗೋಜಾಗತಂ ಮಾಳ್ಪದು ಮಾರ್ಗವಲ್ಲ” ಎಂದು ಕಟುವಾಗಿ ಆಕ್ಷೇಪಿಸುತ್ತಾನೆ. ಮತ್ತೊಂದು ಸಲ -ರಾಜ ಭಂಡಾರವನ್ನು ದುರುಪಯೋಗಪಡಿಸಿರುವುದಾಗಿ ಆಪಾದಿಸಿ ಬಸವಣ್ಣನವರನ್ನು ಹೊರಹಾಕುತ್ತಾನೆ. ಆಗ ಬಸವಣ್ಣನವರು ಮತ್ತಿಘಟ್ಟವೆಂಬ ಪಾಳ್ಗಾನಿಗೆ ಬಂದು ನೆಲಸಿದ್ದರು (ಸಿಂಗಿರಾಜಪುರಾಣ 31-32). ಈ ಅವಧಿಯಲ್ಲಿ ಬಿಜ್ಜಳನಿಗೆ ಬಸವಣ್ಣನವರು ನಿರಪರಾಧಿಗಳೆಂದು ರುಜುವಾತಾಗಲು ಅವರನ್ನು ಮರಳಿ ಕಲ್ಯಾಣಕ್ಕೆ ಕರೆಸಿಕೊಂಡನು.
ಈ ಹಿನ್ನೆಲೆಯಲ್ಲಿ ನಮ್ಮನ್ನು ಕಾಡುವ ಒಂದು ಪ್ರಶ್ನೆಯೆಂದರೆ-ಈ ಅನುಸರಣೆಯಲ್ಲಿ ಬಸವಣ್ಣನವರು ಬಿಜ್ಜಳನಿಗೆ ಹೆದರಿದ್ದರೆ? ಅದು ಹಾಗೆ ಕಂಡರೂ ಜನಪ್ರಿಯರಾಗಿದ್ದ ಬಸವಣ್ಣನವರಿಗೆ ಸಾಕ್ಷಾತ್ ಬಿಜ್ಜಳನೇ ಒಳಗೊಳಗೆ ಹೆದರಿದ್ದನು. ಬಸವಣ್ಣನವರಿಗಾದರೋ ಬಿಜ್ಜಳನಿಗೇನೂ ಅಪಾಯವಾಗಬಾರದೆಂಬ ದಯಾಭೀತಿಯಿತ್ತೇ ಹೊರತು, ಬಿಜ್ಜಳನ ಭಯ ಅವರಿಗಿರಲಿಲ್ಲ.
ಇದರ ಸಮರ್ಥನೆ ಈ ವಚನದಲ್ಲಿಯೇ ದೊರೆಯುವುದು. ಇಲ್ಲಿ ಬಸವಣ್ಣನವರು ತಮ್ಮನ್ನು ಆನೆಗೆ ಹೋಲಿಸಿಕೊಂಡು –ಅದು ಅಂಕುಶಕ್ಕೇಕೆ ಹೆದರುವುದೆಂದು ತಾವೇ ಪ್ರಶ್ನಿಸುತ್ತ –ಆ ಅಂಕುಶ ಸಿಂಹದ ಉಗುರೆಂದು ತೋರುವುದರಿಂದ ಆನೆ ಅದಕ್ಕೆ ಹೆದರುವುದೇ ಹೊರತು –ಆ ಲೋಹದ ಚೂರಿಗಲ್ಲವೆಂದಿರುವರು.
ಹಾಗೆಯೇ ಬಸವಣ್ಣನವರು ಬಿಜ್ಜಳನಿಗೆ (ಆತಂಕಮಿಶ್ರಿತ) ಭಯವನ್ನು ಪಟ್ಟಿದ್ದರು–ಅದಕ್ಕೆ ಕಾರಣ–ಆ ಬಿಜ್ಜಳನೊಬ್ಬ ಶೈವ–ಅವನಿಗೆಲ್ಲಿಯಾದರೂ ಕೇಡಾದೀತೆಂಬ ದಯೆಯಿಂದ ಮಾತ್ರ. ಆದುದರಿಂದ ಆ ರಾಜನನ್ನು ಮೃದುಮಾರ್ಗವಾಗಿಯೇ ತಿದ್ದುವುದು ಸೂಕ್ತವಷ್ಟೇ ಅಲ್ಲ, ಅದು ತಮ್ಮ ಕರ್ತವ್ಯವೆಂದೂ ಬಸವಣ್ಣನವರು ಭಾವಿಸಿದ್ದರು.
ಈ ವಚನದಿಂದ ಹೊಳೆಯುವ ಬಹುಮುಖ್ಯವಾದ ಚಾರಿತ್ರಿಕ ಅಂಶವೆಂದರೆ-ಬಿಜ್ಜಳನು ಸತ್ತಿದ್ದು ಶರಣರ ದೊಂಬಿಯಿಂದ ಮತ್ತು ಬಸವಣ್ಣನವರು ಅದರ ಮುಂಚೂಣಿಯಲ್ಲಿದ್ದರು ಎಂದು ಮುಂತಾದೆಲ್ಲಾ ಕಟ್ಟುಕತೆಯೆಂಬುದು.
ಆದ್ದರಿಂದ ಬಿಜ್ಜಳನನ್ನಷ್ಟೇ ಅಲ್ಲ–ವೈದಿಕರನ್ನೂ, ಕುಲಬಾಂಧವರೇ ಆದ ವೀರಶೈವಸಂಪ್ರದಾಯವಾದಿಗಳನ್ನೂ ಬಸವಣ್ಣನವರು ಎದುರಿಸಿದ್ದು ವೈಚಾರಿಕವಾಗಿಯೇ ಹೊರತು ಹಿಂಸಾಮತಿಯಿಂದಲ್ಲವೆಂಬುದನ್ನು ತಿಳಿಯಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು