•  
  •  
  •  
  •  
Index   ವಚನ - 830    Search  
 
ಪ್ರಾಣಲಿಂಗಿಯ ಮಾಹೇಶ್ವರಸ್ಥಲ - ಸರ್ವಾತ್ಮಭಾವ
ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ ! ಬೊಬ್ಬಿಡದಿರಿಂ ಭೋ, ನಿಮ್ಮ ಧರ್ಮ ! ಆರಡದಿರಿಂ ಭೋ, ನಿಮ್ಮ ಧರ್ಮ ! ಅಲ್ಲಿ ಉಂಬರೆ ಸಂಗ, ಇಲ್ಲಿ ಉಂಬರೆ ಸಂಗ! ಕೂಡಲಸಂಗಮದೇವ ಏಕೋಭಾವ.
Transliteration Ākaḷa kaḷḷaru koṇḍoydarennadiriṁ bhō, nim'ma dharma! Bobbiḍadiriṁ bhō, nim'ma dharma! Āradiriṁ bhō, nim'ma dharma! Alli umbare saṅga, illi umbare saṅga! Kūḍalasaṅgamadēva ēkōbhāva.
Manuscript
English Translation 2 I pray you, do not say The thieves have taken the cow! I pray you, do not shout! I pray you, do not bawl! Whoever drinks there, is the Lord! Whoever drinks here, is the Lord! Lord Kūḍala Saṅgama Is one and the same! Translated by: L M A Menezes, S M Angadi
Hindi Translation कृपया मत कहो, चोरोंने गाय चुरा ली! कृपया मत चिल्लाओ, कृपया मत चीखो, वहाँ पीनेवाले भी संगमेश है, यहाँ पीनेवाले भी संगमेश है, कूडलसंगमदेव एक भाव के हैं ॥ Translated by: Banakara K Gowdappa
Telugu Translation దొంగలు ఆవుల కొనిపోయిరని; కూతలిడ బోకుడో! దయచేసి; వెతకకుడో! దయచేసి; వెతకకుడో అటతిన్నా సంగడే ఇటతిన్నా సంగడే; ఏకోభావి కూడల సంగమదేవుడు. Translated by: Dr. Badala Ramaiah
Tamil Translation பிராணலிங்கியின் மாகேசுவரத்தலம் பசுக்களைக் கள்ளர் கொண்டு சென்றனர் என்னாதீர் கூக்குரலிடாதீர், உம் அறம் புலம்பாதீர், உம் அறம் அங்கு உண்டால் சங்கன், இங்கு உண்டால் சங்கன் கூடல சங்கமதேவன், மாற்றமற்றவன் அன்றோ! Translated by: Smt. Kalyani Venkataraman, Chennai
Marathi Translation गायींना चोराने नेले असे कृपया म्हणू नका, तुमचा धर्म ! कृपया गोंधळ करु नका, तुमचा धर्म ! कृपया बोंबाबोंब करु नका, तुमचा धर्म ! तेथे जेवणारा संगमनाथ, इथे जेवणारा संगमनाथ. कूडलसंगमदेवा हा एकच माझा भाव आहे. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಬಸವಣ್ಣನವರ ನಿಜ ಜೀವನದಲ್ಲಿ ನಡೆದ ಒಂದು ವಾಸ್ತವ ಘಟನೆಯನ್ನು ಕುರಿತಿದೆ ಈ ವಚನ. ಈ ವೃತ್ತಾಂತವನ್ನು ಹರಿಹರನು ತನ್ನ ಬಸವರಾಜದೇವರ ರಗಳೆಯಲ್ಲಿ (ಸ್ಥಳ 9) ಹೃದಯಂಗಮವಾಗಿ ಚಿತ್ರಿಸಿದ್ದಾನೆ. ಒಂದು ಸಲ ಬಸವಣ್ಣನವರ ಮನೆಯಲ್ಲಿ ಎಂದಿನಂತೆ ಶಿವಾನುಭವಗೋಷ್ಠಿ ನಡೆಯುತ್ತಿದ್ದಾಗ -ಹೊರಗಡೆಯಿಂದ ಕು-ಗುಗು ಗುಗು-ಕೂ ಎಂದು ಕೇಕೆಹಾಕಿದ ಶಬ್ದ ಕೇಳಿಸಿತು. ಬಂದ ಆಪತ್ತನ್ನು ಸೂಚಿಸುವ ಶಬ್ದವದು. ಗಾಬರಿಯಿಂದ ಏನಾಯಿತೆಂದು ಎಲ್ಲರೂ ಹೊರಬಾಗಿಲಿಗೆ ಓಡಿಬಂದರು. ಒಬ್ಬ ಗೊಲ್ಲ ಕು-ಗುಗು ಗುಗು-ಕೂ ಎಂದು ಆ ಕೂಗು ಹಾಕುತ್ತಿದ್ದುದನ್ನು ಕಂಡರು. ಅವನು ಬಸವಣ್ಣನವರ ಕೀಲಾರದ ದನಗಾಹಿಯೇ ಆಗಿದ್ದನು. ಅವನು ಭಯದಿಂದ ಅಸ್ತವ್ಯಸ್ತವಾಗಿ ಕಂಪಿಸುವ ಧ್ವನಿಯಲ್ಲಿ “ಕಳ್ಳರು ಭಕ್ತರ ವೇಷದಲ್ಲಿ ಬಂದು ಹಸುಗಳನ್ನು ಕದ್ದೊಯ್ದರು ಸ್ವಾಮಿ”ಎಂದು ಬಸವಣ್ಣನವರಿಗೆ ಬಿನ್ನವಿಸಿಕೊಂಡನು. ಅವರಿಗೆ “ಭಕ್ತರ ವೇಷದಲ್ಲಿ ಬಂದಿದ್ದವರು ಕಳ್ಳ”ರೆಂದ ಮಾತು ಅಸಂಗತವೆನಿಸಿತು, ಸಂಕಟವೂ ಆಯಿತು. “ಭಕ್ತರ ವೇಷದಲ್ಲಿದ್ದವರು ಭಕ್ತರೇ ಹೊರತು ಕಳ್ಳರಲ್ಲ. ಆ ಭಕ್ತರಿಗೇ ಸೇರಿದ್ದು ನನ್ನ ದನಕರು ಮನೆಮಾರು ಸರ್ವಸ್ವವೂ. ಅವರ ವಸ್ತುವನ್ನು ಅವರು ಕೊಂಡೊಯ್ದರು. ಅವರನ್ನೇಕೆ ಕಳ್ಳರೆನ್ನುತ್ತೀಯೆ. ಆ ಹಸುಗಳನ್ನು ಅವರಿಗೆ ಕೊಡದೆ ಇಟ್ಟು ಕೊಂಡಿದ್ದ ನಾನಲ್ಲವೇ ಕಳ್ಳ? ಈಗ ಅವನ್ನು ಕೊಂಡೊಯ್ದವರು ಶಿವಸ್ವರೂಪಿಗಳೇ –ಆ ಹಸುಗಳು ಇಲ್ಲಿದ್ದರೂ ಹಾಲನ್ನು ಉಣ್ಣುವನು ಶಿವನೇ, ಅಲ್ಲಿದ್ದರೂ ಉಣ್ಣುವನು ಆ ಶಿವನೇ”-ಎನ್ನುತ್ತ ಬಸವಣ್ಣನವರು ಗೊಲ್ಲನನ್ನು ಸಮಾಧಾನಪಡಿಸಿ -ಕರುಹಟ್ಟಿಯಲ್ಲಿರುವ ಕರುಗಳನ್ನೂ ಈ ಕೂಡಲೇ ಬಿಚ್ಚಿಬಿಡು, ಅವು ತಮ್ಮ ತಾಯಿಗಳನ್ನು ಆಗಲಿ ಮರುಗುತ್ತಿವೆ. ಆ ಹಸುಗಳೂ ಕರುಗಳನ್ನು ಆಗಲಿ ಉಮ್ಮಳಿಸುತ್ತಿವೆ. ತಾಯಿ ಮಕ್ಕಳನ್ನು ಅಗಲಿಸಬೇಡ -ಬೇಗ ಕರುಗಳು ತಾಯ್ಗಳನ್ನು ಕೂಡಿಕೊಳ್ಳುವಂತೆ ಮಾಡು –ಎಂದು ತವಕದಿಂದ ದಯೆಯಿಂದ ಮರುಕದಿಂದ ಬಿಗಿದು ಬಂದ ಕಂಠದಿಂದ ಗೊಲ್ಲನಿಗೆ ಅವಸರಪಡಿಸಿದರು. ಹಸುಗಳು ಹೋದವೆಂಬ ಚಿಂತೆಯಲ್ಲ ಬಸವಣ್ಣನವರಿಗೆ –ಕರುಗಳು ಹಸುಗಳನ್ನು ಅಗಲಿ ಹಾಲಿಲ್ಲದೆ ಅಕ್ಕರೆಯಿಲ್ಲದೆ ತಲ್ಲಣಿಸುವವೆಂಬುದು ಅವರ ಚಿಂತೆ ! “ದಯವಿಲ್ಲದ ಧರ್ಮವೇವುದಯ್ಯ” (ವಚನ 248) ಎಂಬ ಅವರ ವಚನ ಎಷ್ಟೊಂದು ನೈಜ!

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು