•  
  •  
  •  
  •  
Index   ವಚನ - 897    Search  
 
ಶರಣನ ಮಾಹೇಶ್ವರಸ್ಥಲ - ಷಟ್ ಸ್ಥಲ
ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣನೈಕ್ಯನು ಮೆಲ್ಲಮೆಲ್ಲನೆ ಆದೆಹೆನೆಂಬನ್ನಬರ ನಾನೇನು ವಜ್ರದೇಹಿಯೆ? ನಾನೇನು ಅಮೃತವ ಸೇವಿಸಿದೆನೆ? ಆನು ಮರುಜೇವಣಿಯ ಕೊಂಡೆನೆ? ನುಡಿದ ನುಡಿಯೊಳಗೆ ಷಡುಸ್ಥಲ ಬಂದು ಎನ್ನ ಮನವನಿಂಬುಗೊಳ್ಳದಿದ್ದರೆ, ಸುಡುವೆನೀ ತನುವ, ಕೂಡಲಸಂಗಮದೇವಾ!
Transliteration Bhakta, māhēśvara, prasādi, prāṇaliṅgi, śaraṇanaikyanu mella mellane adēhenembannabara nānēnu vajradēhiye? Nānēnu amr̥tava sēvisidene? Ānu marujēvaṇiya koṇḍene? Nuḍida nuḍiyoḷage ṣaḍusthala bandu enna manavanimbugoḷḷadiddare, suḍuvenī tanuva, kūḍalasaṅgamadēvā!
Manuscript
English Translation 2 Though I would be, by slow degrees, Bhakta,Mahēśvara ,Prasādi ,Prāṇaliṅgi Śaraṇa, And Aikya, is my body adament? What drink immortal have I drunk? Or eaten the life-restoring plant? If the six-fold discipline on my lips Does not possess my heart, I burn this body of mine, O Lord Kūḍala Saṅgama! Translated by: L M A Menezes, S M Angadi
Hindi Translation भक्त, माहेश्वर, प्रसादी, प्राणलिंगी, शरण, ऐक्य क्रमशः बनना चाहूँ, तो मैं वज्रदेही हूँ? मैंने अमृत का सेवन किया है? मैंने संजीवनी का सेवन किया है? कथित वचनों से मेरे मन में षट्स्थल आश्रय न पायें तो यह तन जला दूँगा कूडलसंगमदेव ॥ Translated by: Banakara K Gowdappa
Telugu Translation తను మన ధనములనెడి అద్దమును చూడుమయ్యా ఇది నాదీకాదు నీదీ కాదు వట్టి పిచ్చిమాట; ఈ పిచ్చికి లోనై మీ శ్రీచరణము విడను ‘దేవా! Translated by: Dr. Badala Ramaiah
Tamil Translation பக்தன், மாகேசுவரன் பிரசாதி பிராணலிங்கி, சரணன், ஐக்கியன் என மெல்ல மெல்ல ஏறினோம் என்பர் நான் வைரம் பாய்ந்த உடலுள்ளவனோ? நான் என்ன அமுதத்தை அருந்தியவனோ? ஸஞ்ஜீவினியைக் கொண்டவனோ? கூறும் கூற்றில் ஆறுதலம் வந்து என் மனத்தில் நிலைக்காது எனின் உடலைச் சுடாதோ கூடல சங்கமதேவனே. Translated by: Smt. Kalyani Venkataraman, Chennai
Marathi Translation भक्त, माहेश्वर, प्रसादी, प्राणलिंगी, शरण, ऐक्य हळूहळू झालो म्हणावे तर मी वज्रदेही आहे? मी काय अमृतपान केले ? मी संजीवनी सेवन केली? वाणीने उभारलेली षट्स्थळे मनात सामावली नाही तर जाळून टाकावी तनू कूडलसंगमदेवा. Translated by Shalini Sreeshaila Doddamani
ಕನ್ನಡ ವ್ಯಾಖ್ಯಾನ ಸದ್(ಶ್ರದ್ಧಾ)ಭಕ್ತಿಯಿಂದ ಭಕ್ತನು ಆಚಾರ(ಲಿಂಗ)ವಂತನಾಗಿ ಲಿಂಗಸ್ವರೂಪಿಯಾದ ಗುರುವಿನ ಬಳಿಸಾರಿ ಅವನನ್ನು ನಿಷ್ಠಾಭಕ್ತಿಯಿಂದ ಸೇವಿಸಿದರೆ –ಆ ಗುರು ಅವನಿಗೆ ಶಿವ(ಇಷ್ಟ)ಲಿಂಗವನ್ನು ದೀಕ್ಷಾಪೂರ್ವಕವಾಗಿ ಕೊಡವನು. ಹಾಗೆ ಲಿಂಗವಂತನಾದ ಭಕ್ತನು ಆ ಇಷ್ಟಲಿಂಗೋಪಾಸನೆಯಲ್ಲಿ ಅವಧಾನ (ಭಕ್ತಿ)ದಿಂದ ತೊಡಗಿದರೆ ಅವನಿಗೆ ಜಂಗಮ(ಲಿಂಗ)ನು ಪ್ರಸನ್ನನಾಗುವನು. ಆ ಜಂಗಮ(ಲಿಂಗ)ನ ಶಿವಾನುಭಾವಪ್ರಸಂಗವನ್ನು ಭಕ್ತನು ಭಕ್ತಿಯಿಂದ ಆಲಿಸಿ ಆಚರಿಸಿದರೆ ಅವನಿಗೆ ಮನಃಪ್ರಸಾದ(ಲಿಂಗ)ದೊರೆಯುವುದು, ಆ ಮನಃಪ್ರಸಾದದಲ್ಲಿ ಆನಂದ(ಭಕ್ತಿ ಭಾವ)ದಿಂದ ತಲ್ಲೀನವಾದರೆ ಅವನು ತಾನೇ ಮಹಾಲಿಂಗ ಪರಶಿವನಾಗುವನು. ಅದೇ ಸಮರಸ ಭಕ್ತಿ –ಅದೇ ಜೀವನ್ಮುಕ್ತಿ. ಎಂಬಲ್ಲಿಗೆ ಸಾಧಕನು ಭಕ್ತ ಮಾಹೇಶ್ವರ -ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯನೆಂದು ಏನೆಲ್ಲವೂ ಆದಂತೆಯೇ. ಷಟ್ಸ್ಥಲವನ್ನು ಭಕ್ತನು ಆಚರಿಸಬೇಕೆಂಬ ಪುರಾತನೋಕ್ತಿಯ ರಹಸ್ಯಾರ್ಥವಿದೇ ಆಗಿದೆ. ಭಕ್ತ ಸದ್ಭಕ್ತಿ ಆಚಾರಲಿಂಗ ಮಾಹೇಶ್ವರ ನಿಷ್ಠಾಭಕ್ತಿ ಗುರುಲಿಂಗ ಪ್ರಸಾದಿ ಅವಧಾನಭಕ್ತಿ ಶಿವಲಿಂಗ ಪ್ರಾಣಲಿಂಗಿ ಅನುಭಾವಭಕ್ತಿ ಚರಲಿಂಗ ಶರಣ ಆನಂದಭಕ್ತಿ ಪ್ರಸಾದಲಿಂಗ ಐಕ್ಯ ಸಮರಸಭಕ್ತಿ ಮಹಾಲಿಂಗ ಹೀಗಲ್ಲದೆ ಭಕ್ತನಾಗಲು ಇಂತಿಷ್ಟು ವರ್ಷ ಬೇಕು, ಮಾಹೇಶ್ವರನಾಗಲು ಮತ್ತಷ್ಟು ವರ್ಷ ಬೇಕು, ಪ್ರಸಾದಿಯಾಗಲು ಮೇಲೆ ಬಹಳಷ್ಟು ವರ್ಷ ಬೇಕು –ಮುಂದೆ ಮುಂದೆ ಪ್ರಾಣಲಿಂಗಿಯಾಗಲು ಶರಣನಾಗಲು ಐಕ್ಯನಾಗಲು ಅಪಾರಕಾಲ ಬೇಕೆನ್ನುತ್ತ ಷಟ್ಸ್ಥಲಗಳನ್ನು ಭಿನ್ನಭಿನ್ನವಾಗಿ ಪ್ರತ್ಯೇಕಿಸಿ ಪ್ರತಿಬಂಧಿಸಿಡುವುದು ಸಲ್ಲದು. ಲಿಂಗವಂತನು ಜಂಗಮವನ್ನು ಕೂಡಿಕೊಂಡು ಲಿಂಗಪೂಜೆ ಮಾಡಿ ಆ ಜಂಗಮದ ಶಿವಾನುಭಾವ ಪ್ರಸಂಗದಲ್ಲಿ ಮಗ್ನನಾಗಿರುವ ಸುಮುಹೂರ್ತವೊಂದರಲ್ಲೇ ಷಟ್ಸ್ಥಲಾವಸ್ಥೆಗಳೂ ಒಂದರಲ್ಲೊಂದು ನಿಮಗ್ನವಾಗುವವು. ಆದುದರಿಂದಲೇ “ನುಡಿದ ನುಡಿಯೊಳಗೆ ಷಟ್ಸ್ಥಲ ಬಂದು ಎನ್ನ ಮನವನಿಂಬುಗೊಳ್ಳದಿದ್ದರೆ ಸುಡುವೆನೀ ತನುವ”ನೆಂದು ಬಸವಣ್ಣನವರು ಪರಿಚ್ಛೇದಿಸಿರುವರು. ಯಾವನಾದರೊಬ್ಬನ ಜೀವನಾವಧಿಯೂ ಅತ್ಯಂತ ಹ್ರಸ್ವ ಮತ್ತು ಭಂಗುರು. ಈ ಅನಿಶ್ಚಿತಮರಣದ ಅಲ್ಪಾವಧಿಯ ಜೀವಮಾನದಲ್ಲಿ -ದಿವ್ಯಜೀವನಕ್ಕೆ ಬೇಕಾದ ಎಲ್ಲ ಅಂಶಗಳನ್ನೂ ಏಕಕಾಲದಲ್ಲಿ ಏಕತ್ರಗೊಳಿಸಿಕೊಂಡಿರಬೇಕೆಂದು ಈ ವಚನದ ತಾತ್ಪರ್ಯ. ಕಾಲದ ಉಪಾಧಿಯಿಂದ –ಇಂದು ನಾಳೆಯೆಂಬ ಕಲ್ಪನೆಯುಂಟಾಗುವುದಾದರೂ -ಭಕ್ತಿಯೆಂಬುದು ಲಿಂಗವೆಂಬುದು ದಿವ್ಯಜೀವನವೆಂಬುದು ಅಖಂಡ ಮತ್ತು ಸಂಪೂರ್ಣ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು