ಬಸವಣ್ಣ   
  ವಚನ - 26     
 
ಒಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಏರಿ ನೀರುಣ್ಬೊಡೆ, ಬೇಲಿ ಕೆಯ್ಯೆ ಮೇವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೊಡೆ, ಇನ್ನಾರಿಗೆ ದೂರುವೆ, ಕೂಡಲ ಸಂಗಮದೇವಾ?