ಬಸವಣ್ಣ   
  ವಚನ - 33     
 
ಮರನನೇರಿದ ಮರ್ಕಟನಂತೆ ಹಲವು ಕೊಂಬೆಗೆ ಹಾಯುತಲಿದೆ; ಬೆಂದ ಮನವ ನಾನೆಂತು ನಂಬುವೆನಯ್ಯಾ? ಎಂತು ನಚ್ಚುವೆನಯ್ಯಾ? ಎನ್ನ ತಂದೆ ಕೂಡಲ ಸಂಗಮದೇವನಲ್ಲಿಗೆ ಹೋಗಲೀಯದಯ್ಯಾ!