ಬಸವಣ್ಣ   
  ವಚನ - 43     
 
ವಿಕಳನಾದೆನು ಪಂಚೇಂದ್ರಿಯಧಾತುವಿನಿಂದ; ಮತಿಗೆಟ್ಟೆನು ಮನದ ವಿಕಾರದಿಂದ; ಧೃತಿಗೆಟ್ಟೆನು ಕಾಯವಿಕಾರದಿಂದ, ಶರಣುವೊಕ್ಕೆನು, ಕೂಡಲ ಸಂಗಮದೇವಯ್ಯಾ.