ಬಸವಣ್ಣ   
  ವಚನ - 50     
 
ಬೆಳೆಯ ಭೂಮಿಯಳೊಂದು ಪ್ರಳಯದ ಕಸ ಹುಟ್ಟಿ ತಿಳಿಯಲೀಯದು, ಎಚ್ಚರಲೀಯದು! ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯಾ, ಲಿಂಗತಂದೆ; ಸುಳಿದೆಗೆದು ಬೆಳೆವೆನು, ಕೂಡಲ ಸಂಗಮದೇವಾ.