ಬಸವಣ್ಣ   
  ವಚನ - 74     
 
ನೀರಿಂಗೆ ನೈದಿಲೆ ಶೃಂಗಾರ; ಸಮುದ್ರಕ್ಕೆ ತೆರೆಯೇ ಶೃಂಗಾರ; ನಾರಿಗೆ ಗುಣವೇ ಶೃಂಗಾರ; ಗಗನಕ್ಕೆ ಚಂದ್ರಮನೇ ಶೃಂಗಾರ; ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.