ಬಸವಣ್ಣ   
  ವಚನ - 78     
 
ವಶ್ಯವ ಬಲ್ಲೆವೆಂದೆಂಬಿರಯ್ಯಾ, ಬುದ್ಧಿಯನರಿಯದ ಮನುಜರು ಕೇಳಿರಯ್ಯಾ: ವಶ್ಯವಾವುದೆಂದರಿಯದೆ ಮರುಳುಗೊಂಬಿರೆಲೆ, ಗಾವಿಲ ಮನುಜರಿರಾ! 'ಓಂ ನಮಃ ಶಿವಾಯ'-ಎಂಬ ಮಂತ್ರ ಸರ್ವಜನವಶ್ಯ, ಕೂಡಲ ಸಂಗಮದೇವಾ.