ಬಸವಣ್ಣ   
  ವಚನ - 79     
 
ಭವಬಂಧನ-ದುರಿತಂಗಳ ಗೆಲುವೊಡೆ 'ಓಂ ನಮಃ ಶಿವಾಯ'-ಶರಣೆಂದಡೆ ಸಾಲದೆ? 'ಹರ ಹರ ಶಂಕರ, ಶಿವ ಶಿವ ಶಂಕರ, ಜಯ ಜಯ ಶಂಕರ ಶರಣೆʼನ್ನುತ್ತಿರ್ದೇನೆ; ಎನ್ನ ಪಾತಕ ಪರಿಹಾರ! ʼಕೂಡಲಸಂಗಮದೇವಾ ಶರಣೆʼನ್ನುತ್ತಿರ್ದೇನೆ.