ಬಸವಣ್ಣ   
  ವಚನ - 88     
 
ಅಡ್ಡ ತ್ರಿಪುಂಡ್ರದ, ಮಣಿಮುಕುಟದ ವೇಷದ ಶರಣರ ಕಂಡರೆ ನಂಬುವುದೆನ್ನ ಮನವು, ನಚ್ಚುವುದೆನ್ನ ಮನವು, ಸಂದೇಹವಿಲ್ಲದೆ. ಇವಿಲ್ಲದವರ ಕಂಡರೆ ನಂಬೆ, ಕೂಡಲಸಂಗಮದೇವಾ.