ಬಸವಣ್ಣ   
  ವಚನ - 91     
 
ಸುಪಥ ಮಂತ್ರದುಪದೇಶವ ಕಲಿತು, ಯುಕ್ತಿಗೆಟ್ಟು ನಡೆವಿರಯ್ಯಾ, ʼತತ್ತ್ವಮಸಿʼ ಎಂಬುದನರಿದು ಕತ್ತಲೆದೊಡೆವಿರಯ್ಯಾ. ವೇದವಿಪ್ರರ ವಿಚಾರಿಸಿ ನೋಡಲು, ʼಉಪದೇಶ ಪರೀಕ್ಷೆ ನಾಯಕನರಕʼ ಎಂದುದು ಕೂಡಲಸಂಗನ ವಚನದ ಸೂಚನೆ.