ಬಸವಣ್ಣ   
  ವಚನ - 122     
 
ಬಚ್ಚಲ ನೀರು ತಿಳಿದರೇನು? ಸಲ್ಲದ ಹೊನ್ನು ಮತ್ತೆಲ್ಲಿದ್ದರೇನು? ಆಕಾಶದ ಮಾವಿನ ಫಲವೆಂದರೇನು? ಕೊಯ್ಯಲಿಲ್ಲ, ಮೆಲ್ಲಲಿಲ್ಲಾ! ಕೂಡಲಸಂಗನ ಶರಣರ ಅನುಭಾವವಿಲ್ಲದವರು ಎಲ್ಲಿದ್ದರೇನು?ಎಂತಾದರೇನು?