ಬಸವಣ್ಣ   
  ವಚನ - 131     
 
ಆರತವಡಗದು; ಕ್ರೋಧ ತೊಲಗದು; ಕ್ರೂರ ಕುಭಾಷೆ, ಕುಹಕ ಬಿಡದನ್ನಕ್ಕ ನೀನೆತ್ತಲು ಶಿವನೆತ್ತಲು? ಹೋಗಯ್ಯಾ, ಮರುಳೇ! ಭವರೋಗವೆಂಬ ತಿಮಿರ ತಿಳಿಯದನ್ನಕ್ಕ ಕೂಡಲಸಂಗಯ್ಯನೆತ್ತ, ನೀನೆತ್ತ? ಮರುಳೇ!