ಬಸವಣ್ಣ   
  ವಚನ - 141     
 
ಆರಾರ ಸಂಗವೇನೇನ ಮಾಡದಯ್ಯಾ; ಕೀಡಿ ಕುಂಡಲಿಗನಾಗದೆ, ಅಯ್ಯಾ? ಚಂದನದ ಸನ್ನಿಧಿಯಲಿ ಪರಿಮಳ ತಾಗಿ ಬೇವು, ಬೊಬ್ಬುಳಿ, ತರೆಯ ಗಂಧಂಗಳಾಗವೆ? ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಿಂದ ಕರ್ಮ ನಿರ್ಮಳವಾಗದಿಹುದೆ?