ಬಸವಣ್ಣ   
  ವಚನ - 151     
 
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು ಸಿರಿಗಂಧದ ಸನ್ನಿಧಿಯಲು ಪರಿಮಳವಾಗವೆ? ಲಿಂಗವಂತನ ಸನ್ನಿಧಿಯಿಂದ ಹಿಂದಣ ದುಸ್ಸಂಗ ಕೆಡುವುದು. ಕೂಡಲಸಂಗಮದೇವಯ್ಯಾ, ಸಿರಿಯಾಳನ ಸಾರ್ದ ನರರೆಲ್ಲಾ ಸುರರಾಗರೆ?