ಬಸವಣ್ಣ   
  ವಚನ - 159     
 
ಉತ್ಪತ್ತಿ ಶುಕ್ರ-ಶೋಣಿತದಿಂದಾದ ಲಜ್ಜೆ ಸಾಲದೇ? ಮತ್ತೆ ದುರಿತಂಗಳ ಹೆರುವ ಹೇಗತನವೇಕಯ್ಯಾ? ಮೃತ್ಯುವಿನ ಬಾಯಿಗೆ ತುತ್ತಾಗಲೇಕೆ? ಒತ್ತೊತ್ತೆಯ ಜನನವ ಗೆಲುವೊಡೆ ಕರ್ತನ ಪೂಜಿಸು- ನಮ್ಮ ಕೂಡಲಸಂಗಮದೇವನ.