ಬಸವಣ್ಣ   
  ವಚನ - 160     
 
ಮನವೇ ಸರ್ಪ, ತನುವೇ ಹೇಳಿಗೆ: ಹಾವಿನೊಡತಣ ಹುದುವಾಳಿಗೆ ! ಇನ್ನಾವಾಗ ಕೊಂದಹುದೆಂದರಿಯೆ: ಇನ್ನಾವಾಗ ತಿಂದಹುದೆಂದರಿಯೆ! ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲೊಡೆ ಅದೇ ಗಾರುಡ, ಕೂಡಲಸಂಗಮದೇವಾ!