ಬಸವಣ್ಣ   
  ವಚನ - 162     
 
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು ಸುರಕ್ಷಿತವ ಮಾಡುವ ಭರವ ನೋಡಾ! ಮಹಾದಾನಿ ಕೂಡಲಸಂಗಮದೇವನ ಪೂಜಿಸಿ ಬದುಕುವೋ, ಕಾಯವ ನಿಶ್ಚಯಿಸದೆ.