ಬಸವಣ್ಣ   
  ವಚನ - 163     
 
ಹಂಜರ ಬಲ್ಲಿತ್ತೆಂದು, ಅಂಜದೆ ಓದುವ ಗಿಳಿಯೇ, ಎಂದೆಂದೂ ಅಳಿಯೆನೆಂದು ಗುಡಿಗಟ್ಟಿದೆಯಲ್ಲಾ- ನಿನ್ನ ಮನದಲ್ಲಿ- ಮಾಯಾಮಂಜರ ಕೊಲುವರೆ ನಿನ್ನ ಹಂಜರ ಕಾವುದೆ, ಕೂಡಲಸಂಗಮದೇವನಲ್ಲದೆ?