ಬಸವಣ್ಣ   
  ವಚನ - 164     
 
ಸಂಸಾರವೆಂಬುದೊಂದು ಗಾಳಿಯ ಸೊಡರು, ಸಿರಿಯೆಂಬುದೊಂದು ಸಂತೆಯ ಮಂದಿ, ಕಂಡಯ್ಯಾ. ಇದ ನೆಚ್ಚಿ ಕೆಡಬೇಡ-ಸಿರಿಯೆಂಬುದ! ಮರೆಯದೆ ಪೂಜಿಸು ನಮ್ಮ ಕೂಡಲಸಂಗಮದೇವನ.