ಬಸವಣ್ಣ   
  ವಚನ - 176     
 
ಆಳಿಗೊಂಡಹರೆಂದು ಅಂಜಲದೇಕೆ? ನಾಸ್ತಿಕವಾಡಿಹರೆಂದು ನಾಚಲದೇಕೆ? ಆರಾದೊಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ. ಏನೂ ಅರಿಯೆನೆಂದು ಮೌನಗೊಂಡಿರಬೇಡ: ಕೂಡಲಸಂಗಮದೇವರ ಮುಂದೆ 'ದಂದಣ, ದತ್ತಣ' ಎನ್ನಿ.