ಬಸವಣ್ಣ   
  ವಚನ - 186     
 
ಭೂಮಿಯೊಳಗೆ ನಿಧಾನವಿದ್ದುದ ಅಂಜನವುಳ್ಳವರು ತೋರಿರಯ್ಯಾ. ಅಂಜಲುಬೇಡ ಕಂಡಾ; ಮನದಲ್ಲಿ ಸಂದೇಹವ ಮಾಡದಿರಾ. ಜಂಗಮದೊಳಗೆ ಲಿಂಗಯ್ಯನಿದ್ದಾನೆಂದು ನಂಬುಗೆಯುಳ್ಳರೆ ತೋರುವ ಕೂಡಲಸಂಗಯ್ಯ.