ಬಸವಣ್ಣ   
  ವಚನ - 198     
 
ಭಾಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು. ಕಳ್ಳ ನಾಣ್ಯ ಸಲುಗೆಗೆ ಸಲ್ಲದು: ಕಳ್ಳ ನಾಣ್ಯವ ಸಲ್ಲಲೀಯರಯ್ಯಾ! ಭಕ್ತಿಯೆಂಬ ಭಾಂಡಕ್ಕೆ ಜಂಗಮವೇ ಸುಂಕಿಗ, ಕೂಡಲಸಂಗಮದೇವಾ.