ಬಸವಣ್ಣ   
  ವಚನ - 205     
 
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ, ಹಲವು ಪರಿಯಲಿ ವಿಭೂತಿಯ ಹೂಸಿ, ಗಣಾಡಂಬರದ ನಡುವೆ ನಲಿನಲಿದಾಡಿ, ಉಂಡು, ತಾಂಬೂಲಗೊಂಡು ಹೋಹುದಲ್ಲಾ! ತನು-ಮನ-ಧನವ ಸಮರ್ಪಿಸದವರ ಕೂಡಲಸಂಗಮದೇವರೆಂತೊಲಿವನಯ್ಯಾ?