ಬಸವಣ್ಣ   
  ವಚನ - 206     
 
ತನುವ ಕೊಟ್ಟು ಗುರುವನೊಲಿಸಬೇಕು; ಮನವ ಕೊಟ್ಟು ಲಿಂಗವನೊಲಿಸಬೇಕು; ಧನವ ಕೊಟ್ಟು ಜಂಗಮವನೊಲಿಸಬೇಕು. ಈ ತ್ರಿವಿಧವ ಹೊರಗು ಮಾಡಿ, ಹರೆಯ ಹೊಯಿಸಿ, ಕುರುಹ ಪೂಜಿಸುವವರ ಮೆಚ್ಚ ಕೂಡಲಸಂಗಮದೇವ.