ಬಸವಣ್ಣ   
  ವಚನ - 209     
 
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ. ಮಾತಿನ ಮಾಲೆಯ ಕವುಳಗೋಲ ಶ್ರವದಲ್ಲಿ ಸತ್ತವರೊಳರೆ, ಅಯ್ಯಾ? ದಿಟದಲಗಿನ ಕಾಳೆಗವಿತ್ತಲಿದ್ದುದೇ ಕೂಡಲಸಂಗನ ಶರಣರು ಬಂದಲ್ಲಿ!