ಬಸವಣ್ಣ   
  ವಚನ - 212     
 
ಭಕ್ತಿಯೆಂಬುದ ಮಾಡಬಾರದು: ಗರಗಸದಂತೆ ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು! ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿವುದ ಮಾಣ್ಬುದೆ, ಕೂಡಲಸಂಗಮದೇವಾ!